More

    ತರಕಾರಿ ಮಾರುತ್ತಿದ್ದ ಅಥ್ಲೀಟ್​ ನೆರವಿಗೆ ಧಾವಿಸಿದ ಮುಖ್ಯಮಂತ್ರಿ

    ನವದೆಹಲಿ: ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಹುತೇಕ ಮನೆಗಳಲ್ಲಿ ಸಂಕಷ್ಟದ ಸರಮಾಲೆಯೇ ಸೃಷ್ಟಿಯಾಗಿದೆ. ಪರಸ್ಪರ ಸಮಾಧಾನ ಹೇಳಿಕೊಳ್ಳಲಾಗದ ಅಸಹಾಯಕತೆ ಬಹುತೇಕ ಜನರದ್ದಾಗಿದೆ. ಬಡತನದ ಹಿನ್ನೆಲೆಯಿಂದ ಬಂದ ಅಥ್ಲೀಟ್​ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

    ಬೇರೊಬ್ಬರ ಮುಂದೆ ಕೈಚಾಚಲು ಸ್ವಾಭಿಮಾನ ಅಡ್ಡಿಯಾಗುತ್ತದೆ. ಆದ್ದರಿಂದಲೇ ಅವರು ತರಕಾರಿ ಮಾರಾಟ ಮಾಡುವ ಮೂಲಕ ಕುಟುಂಬದ ಹೊಟ್ಟೆ ತುಂಬಿಸಲು ಯತ್ನಿಸುತ್ತಿದ್ದಾರೆ. ಜಾರ್ಖಂಡ್​ನ ರಾಮಗಢದ ಉದಯೋನ್ಮುಖ ಅಥ್ಲೀಟ್​ ಗೀತಾ ಕುಮಾರಿ ಅವರ ಪರಿಸ್ಥಿತಿಯೂ ಇದೇ ಆಗಿತ್ತು. ಆದರೆ ಇವರ ಸಂಕಷ್ಟದ ಸುದ್ದಿ ತಿಳಿದ ಜಾರ್ಖಂಡ್​ ಸಿಎಂ ಹೇಮಂತ್​ ಸೋರೇನ್​ ತಕ್ಷಣವೇ 50 ಸಾವಿರ ರೂಪಾಯಿ ನಗದನ್ನು ಗೀತಾಕುಮಾರಿ ಕೈಯಲ್ಲಿ ಇಟ್ಟಿದ್ದಲ್ಲದೆ, ತಿಂಗಳಿಗೆ 3 ಸಾವಿರ ರೂ. ಮಾಸಾಶನ ಕೊಡುವುದಾಗಿ ಹೇಳಿ, ಅಥ್ಲೆಟಿಕ್ಸ್​ ತರಬೇತಿಯನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ‌ ಪರೀಕ್ಷೆ ಬರೆದ 55 ವರ್ಷ ವಯಸ್ಸಿನ ಮಹಿಳೆ…!

    ರಾಮಗಢದ ಜಿಲ್ಲಾಧಿಕಾರಿ ಸಂದೀಪ್​ ಸಿಂಗ್​ ಅವರು 50 ಸಾವಿರ ರೂ.ಗಳ ಚೆಕ್​ ಅನ್ನು ಗೀತಾಕುಮಾರಿಗೆ ಸೋಮವಾರ ಹಸ್ತಾಂತರಿಸಿದರು. ಜತೆಗೆ ಕ್ರೀಡಾ ಕೇಂದ್ರದಲ್ಲಿ ಅವರ ತರಬೇತಿ ಮುಂದುವರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿದರು.

    ಗೀತಾ ಕುಮಾರಿ ರಾಜ್ಯ ಮಟ್ಟದ ನಡಿಗೆ ಸ್ಪರ್ಧೆಗಳಲ್ಲಿ ಒಟ್ಟು 8 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಕೋಲ್ಕತದಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೂ ಕೊರಳೊಡ್ಡಿದ್ದಾರೆ. ಇಂಥ ಉದಯೋನ್ಮುಖ ಅಥ್ಲೀಟ್​ಗೆ ಸಹಾಯ ಮಾಡಿದ್ದಕ್ಕೆ ಹೆಮ್ಮೆಯಾಗುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.

    ಪೆಸಿಫಿಕ್​ ಮಹಾಸಾಗರದಿಂದ ಪ್ಲಾಸ್ಟಿಕ್​ ತ್ಯಾಜ್ಯ ಸಂಗ್ರಹ ಬೋಟ್​ ತಂದ ಕಸ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts