More

    ದುರ್ಗಾ ಸಮಾರಾಧನೆ ಸಂಪನ್ನ

    ಎನ್.ಆರ್.ಪುರ: ತಾಲೂಕಿನ ಸೀತೂರು ಗ್ರಾಮದ ಕೆರೆಗದ್ದೆಯ ವನದುರ್ಗಾ ಪರಮೇಶ್ವರಿ, ಗುತ್ಯಮ್ಮ ಹಾಗೂ ನಾಗದೇವರ ದೇವಸ್ಥಾನದಲ್ಲಿ ಗುರುವಾರ ಹಾಗೂ ಶುಕ್ರವಾರ ಶ್ರೀ ದುರ್ಗಾ ಸಮಾರಾಧನೆ ನಡೆಯಿತು. ಗುರುವಾರ ಬೆಳಗ್ಗೆ ಶ್ರೀ ಗಣಹೋಮ, ಶ್ರೀದುರ್ಗಾ ಆದಿವಾಸ ಹೋಮ, ಸಂಜೆ ದುರ್ಗಾ ನಮಸ್ಕಾರ, ವಿಶೇಷ ಪೂಜೆ ನಡೆಯಿತು. ಶುಕ್ರವಾರ ಬೆಳಗ್ಗೆ ಶ್ರೀ ಸತ್ಯವಿನಾಯಕ ವೃತ, ಗುತ್ಯಮ್ಮ ದೇವರಿಗೆ ಕಲಾ ತತ್ವ ಹೋಮ, ಆದಿವಾಸ ಹೋಮ, ಬ್ರಹ್ಮ ಕಲಶ ಸ್ಥಾಪನೆ, ಶ್ರೀ ದುರ್ಗಾ ಸಮಾರಾಧನೆ, ಪಲ್ಲಕ್ಕಿ ಉತ್ಸವ, ಅಲಂಕಾರ ಸೇವೆ, ತುಲಾ ಭಾರ, ಶ್ರೀದೇವಿಯ ಹಾಗೂ ಪರಿವಾರ ದೇವತೆಗಳ ದೇವರ ದರ್ಶನ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು.
    30 ರಂದು ಶ್ರೀದೇವಿ ಹಾಗೂ ಪರಿವಾರ ದೇವರುಗಳ ಕಲಾ ಹೋಮ, ಪರಿವಾರ ದೇವರುಗಳ ದರ್ಶನ, ನಂತರ ದೇವರಿಗೆ ಹರಕೆ ಕೊಡುವ ಕಾರ್ಯಕ್ರಮ ಹಾಗೂ ರಾತ್ರಿ ದರ್ಶನ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts