ಚಾಮರಾಜನಗರ: ಬಂಡೀಪುರ ಅರಣ್ಯ ಪ್ರದೇಶದ ಮದ್ದೂರು ಚೆಕ್ ಪೋಸ್ಟ್ ನಲ್ಲಿ ಕಾರಿನಿಂದ ಕೆಳಗಿಳಿದು ನಿಂತಿದ್ದ ಪ್ರಯಾಣಿಕರನ್ನು ಆನೆಯೊಂದು ಅಟ್ಟಾಡಿಸಿದೆ.
ಕೇರಳ ರಸ್ತೆಯ ಅರಣ್ಯದ ಒಳಭಾಗದಲ್ಲಿ ಕಾರಿನಿಂದ ಕೆಳಗಿಳಿದು ಪ್ರಯಾಣಿಕರು ಫೋಟೋ ತೆಗೆಯುತ್ತಿದ್ದರು. ಈ ವೇಳೆ ಆನೆ ಅಟ್ಟಾಡಿಸಿದ್ದು, ಓರ್ವ ಪ್ರಯಾಣಿಕ ತನ್ನ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿ ಎದ್ದು ಬಿದ್ದು, ಕಾರು ಹತ್ತಿದ್ದಾರೆ. ಇದನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ವನ್ಯಜೀವಿ ಕಾಯ್ದೆ ಉಲ್ಲಂಘಿಸಿ ಕಾರಿನಿಂದ ಕೆಳಗಿಳಿಯದಂತೆ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆಯಾದರೂ ಪ್ರಯಾಣಿಕರು ಪದೇ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿವೆ. ಇನ್ನು ಕಾರು ನಿಲ್ಲಿಸಿದ ಪ್ರಯಾಣಿಕರಿಗೆ ಅರಣ್ಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ.