More

    ವಿಜಯ್​ ದೇವರಕೊಂಡ ಚಿತ್ರಕ್ಕೆ ಸಿಗಲಿಲ್ಲ ಯಶಸ್ಸು! ಸೋಲಿನ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಖ್ಯಾತ ಜ್ಯೋತಿಷಿ…

    ಆಂಧ್ರಪ್ರದೇಶ: ಟಾಲಿವುಡ್​ ಸೆನ್ಸೇಷನ್ ನಟ​ ವಿಜಯ್ ದೇವರಕೊಂಡ ಹಾಗೂ ನಟಿ ಮೃಣಾಲ್ ಠಾಕೂರ್​ ಮುಖ್ಯಭೂಮಿಕೆಯಲ್ಲಿ ಅಭಿನಯದ ಬಹುನಿರೀಕ್ಷಿತ ‘ಫ್ಯಾಮಿಲಿ ಸ್ಟಾರ್’​ ಸಿನಿಮಾ ಇತ್ತೀಚೆಗಷ್ಟೇ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಚಿತ್ರ ಅದ್ದೂರಿ ರಿಲೀಸ್ ಪಡೆದಿದ್ದೇನೋ ನಿಜ ಅದರೆ, ಅದ್ದೂರಿ ಪ್ರದರ್ಶನ ಪಡೆಯದೆ, ಬಾಕ್ಸ್​ ಆಫೀಸ್​ನಲ್ಲಿ ಎಡವಿರುವುದು ಇದೀಗ ಚಿತ್ರತಂಡಕ್ಕೆ ಭಾರೀ ಸಂಕಷ್ಟ ತಂದೊಡ್ಡಿದೆ.

    ಇದನ್ನೂ ಓದಿ: ಸಾವಿರ ವರ್ಷಗಳಿಗೆ ಬುನಾದಿ; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಪರಶುರಾಮ್ ನಿರ್ದೇಶನದ ‘ಫ್ಯಾಮಿಲಿ ಸ್ಟಾರ್‌’ ಚಿತ್ರವು ಇದೇ ಇದೇ ಏಪ್ರಿಲ್ 05ರಂದು ತೆರೆಕಂಡಿತು. ಬಿಡುಗಡೆಗೂ ಮುನ್ನವೇ ಟ್ರೇಲರ್, ಹಾಡುಗಳ ಮೂಲಕ ಮೋಡಿ ಮಾಡಿದ್ದ ಸಿನಿಮಾ ಖಂಡಿತ ಉತ್ತಮ ಪ್ರದರ್ಶನ ಕಾಣಲಿದೆ, ವಿಜಯ್-ಮೃಣಾಲ್ ಜೋಡಿ ನೋಡುಗರಿಂದ ಅಪಾರ ಮೆಚ್ಚುಗೆ ಪಡೆಯಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರಗಳು ಇದೀಗ ತಲೆಕೆಳಗಾಗಿವೆ. ಬಾಕ್ಸ್ ಆಫೀಸ್​ನಲ್ಲಿ ಚಿತ್ರ ಅಬ್ಬರಿಸುವಲ್ಲಿ ವಿಫಲವಾಗಿದೆ. ಈ ಸೋಲಿನ ಹಿಂದಿರುವ ಬಲವಾದ ಕಾರಣವೇನು ಎಂಬುದನ್ನು ಟಾಲಿವುಡ್​ನ ಹೆಸರಾಂತ ಜ್ಯೋತಿಷಿ ಬಹಿರಂಗಪಡಿಸಿದ್ದಾರೆ.

    ತೆಲುಗು ಚಿತ್ರರಂಗದಲ್ಲಿನ ಸಿನಿಮಾ ಹಾಗೂ ಸ್ಟಾರ್​ ನಟ-ನಟಿಯರ ಖಾಸಗಿ ಜೀವನ ಮತ್ತು ಇತರೆ ವಿಷಯಗಳ ಬಗ್ಗೆ ಭವಿಷ್ಯ ನುಡಿಯುವ ಜ್ಯೋತಿಷಿ ವೇಣು ಸ್ವಾಮಿ, ತನ್ನ ಭವಿಷ್ಯವಾಣಿಯಿಂದಾಗಿಯೇ ಹಲವಾರು ವಿವಾದಗಳಲ್ಲಿ ಸಿಲುಕಿದ್ದಾರೆ. ಕಲಾವಿದರ ಕುರಿತಂತೆ ಹೇಳುವ ಭವಿಷ್ಯದಿಂದ ಭಾರೀ ಟೀಕೆ, ವ್ಯಂಗ್ಯಕ್ಕೆ ಗುರಿಯಾಗುವ ವೇಣು ಸ್ವಾಮಿ ಈಗ ಮತ್ತೊಮ್ಮೆ ವಿಜಯ್​ ದೇವರಕೊಂಡ ಚಿತ್ರದ ಬಗ್ಗೆ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ಇದನ್ನೂ ಓದಿ: ಗಾಂಧಿ ಪಾತ್ರದಲ್ಲಿ ಗಾಂಧಿ! ಒಂದೇ ಚಿತ್ರದಲ್ಲಿ ಪತಿ-ಪತ್ನಿ ಮಿಂಚಲು ರೆಡಿ

    ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ವೇಣು, ಮಹೇಶ್ ಬಾಬು ನಟನೆಯ ಗುಂಟೂರು ಕಾರಂ ಮತ್ತು ಫ್ಯಾಮಿಲಿ ಸ್ಟಾರ್‌ನಂತಹ ಚಲನಚಿತ್ರಗಳು ಫೇಕ್​ ಮತ್ತು ನೆಗೆಟಿವ್​ ವಿಮರ್ಶೆಗಳಿಂದ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿವೆ. ಸಿನಿಮಾದ ರಿಲೀಸ್​ಗೂ ಮುನ್ನವೇ ಇಂತಹ ನಕಾರಾತ್ಮಕ ವಿಮರ್ಶೆಗಳು ಮತ್ತು ಉದ್ದೇಶಪೂರ್ವಕ ವಿಮರ್ಶೆಯ ದಾಳಿಯೇ ರೂಪಿಸಲಾಗಿದೆ ಎಂದು ಆರೋಪಿಸಿದರು. ನಿರ್ದಿಷ್ಟವಾಗಿ ಕಪೋಲಕಲ್ಪಿತ ವಿಮರ್ಶೆಗಳ ಪ್ರಭಾವದಿಂದಾಗಿ ವಿಜಯ್​ ಈ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    ಕುಡಿದದ್ದು ಒಂದೇ ಒಂದು ಎಳನೀರು, ಕೊಟ್ಟಿದ್ದು ಮಾತ್ರ 50,000 ರೂ.! ಶಾಕಿಂಗ್ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts