ಬೆಂಗಳೂರು: ಕರೊನಾ ಸಂಕಷ್ಟದಿಂದಾಗಿ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಗುತ್ತಿಗೆ ಕಾರ್ಮಿಕರು, ದಿನಗೂಲಿ ನೌಕರರು ಉದ್ಯೋಗವಿಲ್ಲದೇ ಮನೆಯಲ್ಲಿಯೇ ಕೂರುವಂತಾಗಿದೆ. ದಿನಸಿ, ಔಷಧ ಹಾಗೂ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೇನೂ ಸಿಗದಿರುವಾಗ ಉದ್ಯೋಗವೆಲ್ಲಿ ಸಿಗುತ್ತೆ ಎನ್ನುತ್ತೀರಾ?
ಏಪ್ರಿಲ್ 20ರ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ. ಜತೆಗೆ, ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಜಿಸಲು ರಾಜ್ಯ ಸರ್ಕಾರ ತಿಳಿಸಿದೆ. ಜತೆಗೆ, ಕೂಲಿಯ ಮೊತ್ತವನ್ನು ಹೆಚ್ಚಿಸಿದೆ. ಇದು ಕಾರ್ಮಿಕರಿಗಾದರೆ, ವಿದ್ಯಾವಂತರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯೇ ಹಲವು ಉದ್ಯೋಗಾವಕಾಶಗಳಿಗಾಗಿ ಅರ್ಜಿ ಆಹ್ವಾನಿಸಿದೆ.
ಅರಣ್ಯೀಕರಣ, ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರದಲ್ಲಿ ತಾಂತ್ರಿಕ ಸಹಾಯಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ ರಾಜ್ಯ 30 ಜಿಲ್ಲೆಗಳಲ್ಲೂ ಈ ಉದ್ಯೋಗಾವಕಾಶವಿದ್ದು, ಅರ್ಜಿ ಸಲ್ಲಿಸಬಹುದು. ಒಟ್ಟು 407 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.
ವಿದ್ಯಾರ್ಹತೆ: ಅರಣ್ಯೀಕರಣ ತಾಂತ್ರಿಕ ಸಹಾಯಕರಾಗಲು ಬಿಎಸ್ಸಿ ಫಾರೆಸ್ಟ್ರಿ ಪಾಸಾಗಿರಬೇಕು. ಎಂಎಸ್ಸಿ ಆಗಿದ್ದರೆ ಇನ್ನೂ ಉತ್ತಮ. ಇಲ್ಲದಿದ್ದರೆ ಸಮಾನಾಂತರ ಕ್ಷೇತ್ರದ ವಿದ್ಯಾರ್ಹತೆ ಹೊಂದಿರಬೇಕು.
ಇನ್ನು, ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರದ ತಾಂತ್ರಿಕ ಸಹಾಯಕರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಿಎಸ್ಸಿ (ಆ್ಯಗ್ರಿ, ಸಿರಿಕಲ್ಚರ್, ಹಾರ್ಟಿಕಲ್ಚರ್, ಡೇರಿ ಇತ್ಯಾದಿ…) ಆಗಿರಬೇಕು ಅಥವಾ ಸ್ನಾತಕೋತ್ತರ ಪದವಿಯೂ ಅಪೇಕ್ಷಣೀಯವಾಗಿದೆ. ಅಥವಾ ಸಮಾನಾಂತರ ಕ್ಷೇತ್ರದ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.
ವಯೋಮಿತಿ: 21- 40 ವರ್ಷ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ 22,000 ರೂ. ವೇತನ ನಿಗದಿಪಡಿಸಲಾಗಿದೆ. ಜತೆಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ.
ವಿವರಗಳಿಗೆ: https://bit.ly/3akkGLl
ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ: http://end2endmgnrega.co.in/
ಅರ್ಜಿ ಸಲ್ಲಿಕೆಗೆ ಆರಂಭ: ಏಪ್ರಿಲ್ 20
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15
ಬೋಧಕರೇ ಎಚ್ಚರ… ಬಳಸದಿರಿ ಝೂಮ್ ಆ್ಯಪ್, ತಾಂತ್ರಿಕ ಶಿಕ್ಷಣ ಇಲಾಖೆಯೇ ಹೊರಡಿಸಿದೆ ಸುತ್ತೋಲೆ