More

    ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

    ಬೆಂಗಳೂರು: ನಟ ದರ್ಶನ್​ ವಿಷಯವಾಗಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಟ ದರ್ಶನ್​, ನಿರ್ಮಾಪಕ ಉಮಾಪತಿ ಸೇರಿ ದರ್ಶನ್​ ಅವರ ಇತರ ಸ್ನೇಹಿತರ ನಡುವೆ ಗೊಂದಲ ತಂದಿಟ್ಟಿದ್ದ ಅರುಣಾಕುಮಾರಿ ವಿಷಯದಲ್ಲಿ ಇದೀಗ ಮತ್ತೊಂದು ಹೆಸರು ಕೇಳಿಬಂದಿದೆ.

    ಹೌದು.. ಈ ಪ್ರಕರಣದಲ್ಲಿ ಇದೀಗ ನಂದಿತಾ ಎಂಬ ಮತ್ತೊಂದು ಹೆಸರು ಕೇಳಿಬಂದಿದ್ದು, ಆಕೆ ಮತ್ಯಾರೂ ಅಲ್ಲ. ಇದೇ ಅರುಣಾಕುಮಾರಿ. ನಿರ್ದೇಶಕ ನಾಗೇಂದ್ರಪ್ರಸಾದ್ ಅವರು ತಮ್ಮ ಸ್ನೇಹಿತ ನಾಗವರ್ಧನ್​ ಜತೆಗೆ ನಡೆಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.

    ಕಳೆದ ಎರಡು ಮೂರು ದಿನಗಳಿಂದ ನಾನು ಈ ಬೆಳವಣಿಗೆಯನ್ನು ನೋಡುತ್ತಿದ್ದೆ. ಮಾತ್ರವಲ್ಲ, ಈಗ ಪ್ರಕರಣದ ಕೇಂದ್ರಬಿಂದುವಾಗಿರುವ ಅರುಣಾಕುಮಾರಿ ಅವರ ಜತೆಗೂ ಮಾತನಾಡಿದ್ದೆ. ಆಕೆ ನನ್ನ ಗೆಳೆಯ ನಾಗವರ್ಧನ್​ಗೆ ಪರಿಚಿತಳಾಗಿದ್ದು, ಅವಳಿಂದಾಗಿಯೇ ನಮ್ಮಿಬ್ಬರ ಮಧ್ಯೆ ಮಾತು ಮುರಿದುಹೋಗಿತ್ತು. ಈಗ ಈ ವಿಷಯ ಮುನ್ನೆಲೆಗೆ ಬಂದಿರುವುದರಿಂದ ನಾವು ಮತ್ತೆ ಮಾತನಾಡುವಂತಾಗಿದೆ. ನನಗೆ ಕರೆ ಮಾಡಿರುವ ನಾಗವರ್ಧನ್​, ನನಗೆ ಮೋಸ ಮಾಡಿದ್ದ ಯುವತಿ ಇದೇ ಅರುಣಾ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ದರ್ಶನ್​-ಉಮಾಪತಿ ಇಬ್ಬರೊಂದಿಗೂ ನಾಗವರ್ಧನ್​ ಅವರನ್ನು ಮಾತನಾಡಿಸಿ, ಈ ಸುದ್ದಿಗೋಷ್ಠಿ ಕರೆದಿದ್ದೇವೆ ಎಂದರು.

    ಇದನ್ನೂ ಓದಿ: ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಅರುಣಾಕುಮಾರಿ 2015ರಲ್ಲಿ ನನ್ನನ್ನು ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡಿದ್ದರು. ಆಗ ಅವರು ನಂದಿತಾ ಎಂದು ಪರಿಚಯ ಮಾಡಿಕೊಂಡಿದ್ದು, ಈಗ ಅರುಣಾಕುಮಾರಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ತನ್ನ ತಂದೆ ನಂದಿನಿ ಡೇರಿಯಲ್ಲಿ ದೊಡ್ಡ ಸ್ಥಾನದಲ್ಲಿದ್ದು ಪ್ರತಿಷ್ಠಿತರ ಸಂಪರ್ಕವಿದ್ದು, ನಿಮಗೆ ತೆಲುಗು ಸಿನಿಮಾ ರಿಮೇಕ್​ ಮಾಡಿ ಹೀರೋ ಮಾಡಿಸುತ್ತೇನೆ ಎಂದು ಹೇಳಿದ್ದರು. ಮಾತ್ರವಲ್ಲ, ಕನಕಪುರ ರಸ್ತೆಯಲ್ಲಿ 10-15 ಕೋಟಿ ರೂ. ಬೆಲೆಬಾಳುವ ಆಸ್ತಿಯೊಂದರ ನಿರ್ಮಾಣ ಕಾರ್ಯವನ್ನೂ ಕೊಡಿಸುವುದಾಗಿ ಹೇಳಿದ್ದರು. ನಂತರ ನನ್ನಿಂದ ಆರು ಲಕ್ಷ ರೂಪಾಯಿ ಪಡೆದಿದ್ದರು, ನನ್ನ ಆಭರಣಗಳನ್ನೂ ತೆಗೆದುಕೊಂಡಿದ್ದರು. ನನ್ನ ಸ್ನೇಹಿತರಿಂದಲೂ ಸಾಲ ಕೊಡಿಸಿದ್ದೆ. ಸ್ನೇಹಿತರ ಮಧ್ಯೆ ತಂದಿಟ್ಟಿರುವ ಈಕೆ, ನನ್ನ ಹೆಂಡತಿಯೊಂದಿಗೆ ಭಿನ್ನಾಭಿಪ್ರಾಯ ಮೂಡುವಂತೆಯೂ ಮಾಡಿದ್ದರು. ಈ ಸಂಬಂಧವಾಗಿ ನನ್ನ ಪತ್ನಿ ಅಂದು ದೂರು ಕೂಡ ಕೊಟ್ಟಿದ್ದರು ಎಂದು ನಾಗವರ್ಧನ್​ ವಿವರಿಸಿದ್ದಾರೆ.

    ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ! 

    ಈಕೆ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಅವರ ಸ್ನೇಹಿತರ ವಲಯನ್ನು ತಿಳಿದು ಸ್ನೇಹ ಬೆಳೆಸುತ್ತಾರೆ. ನಂತರ ಸ್ನೇಹಿತರ ನಡುವೆಯೇ ತಂದಿಡುತ್ತಾರೆ. ಈಗ ದರ್ಶನ್​-ಉಮಾಪತಿ ಮತ್ತಿತರರ ವಿಷಯದಲ್ಲೂ ಹಾಗೇ ಆಗಿದೆ. ಅದೇ ಕಾರಣಕ್ಕೆ ಜನರಿಗೆ ಈಕೆಯ ವಿಷಯ ತಿಳಿಯಲಿ ಎಂದು ಹಿಂದೆ ನಡೆದಿದ್ದನ್ನೆಲ್ಲ ಹೇಳುತ್ತಿದ್ದೇನೆ ಎಂಬುದಾಗಿ ನಾಗವರ್ಧನ್​ ತಿಳಿಸಿದ್ದಾರೆ.

    ದರ್ಶನ್‌ ಹೆಸರಲ್ಲಿ ವಂಚನೆ ಯತ್ನ ಕೇಸ್‌: ಆರೋಪಿ ಅರುಣಾ ಕುಮಾರಿಯ ಅಸಲಿ ಮುಖವಾಡ ಬಯಲು!

    ಅವರ್ ಬಿಟ್, ಇವರ್ ಬಿಟ್, ಇವನ್ಯಾರು? ಹೊಸ ಆಡಿಯೋದಲ್ಲಿ ಕೇಳಿಬಂತು ಮತ್ತೊಬ್ಬನ ಹೆಸರು

    ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ

    ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ತಪ್ಪೊಪ್ಪಿಕೊಂಡ ಬಂಧಿತ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts