More

    ರಣಬೀರ್​-ಆಲಿಯಾ ಮುದ್ದಿನ ಮಗಳನ್ನು ನೋಡೋಕೆ ಯಾರಿಗೂ ಅನುಮತಿ ಇಲ್ಲ … ಯಾಕೆ ಗೊತ್ತಾ?

    ಮುಂಬೈ: ಯಾವಾಗ ಆಲಿಯಾ ಭಟ್​ಗೆ ಹೆಣ್ಣು ಮಗು ಆಯಿತು ಎಂಬ ಸುದ್ದಿ ಹೊರಬಿದ್ದಿತೋ, ಬಾಲಿವುಡ್​ನ ಬಹಳಷ್ಟು ಸೆಲೆಬ್ರಿಟಿಗಳು ಆಸ್ಪತ್ರೆಗೆ ದೌಡಾಯಿಸಿದರು. ಮಗುವನ್ನು ಕಣ್ತುಂಬಿಕೊಳ್ಳಲು ಮುಂದಾದರು. ಆದರೆ, ರಣಬೀರ್​ ಮತ್ತು ಆಲಿಯಾ ಮಾತ್ರ ಎಲ್ಲರಿಗೂ ತಮ್ಮ ಮಗುವನ್ನು ತೋರಿಸಿಲ್ಲ. ಆ ಮಗುವನ್ನು ಎತ್ತಿಕೊಳ್ಳುವುದಕ್ಕೆ ಒಪ್ಪಲಿಲ್ಲ. ಯಾಕೆ ಗೊತ್ತಾ?

    ಇದನ್ನೂ ಓದಿ: ಮತ್ತೆ ಬಂದ ದಂಡುಪಾಳ್ಯ ಗ್ಯಾಂಗ್​ … ‘ಹುಬ್ಬಳ್ಳಿ ಡಾಬಾ’ ಕ್ಲೈಮ್ಯಾಕ್ಸ್​ನಲ್ಲಿ ಎಂಟ್ರಿ

    ರಣಬೀರ್​ ಮತ್ತು ಆಲಿಯಾಗೆ ತಮ್ಮ ಮಗಳ ಫೋಟೋಗಳನ್ನು ಕ್ಲಿಕ್ಕಿಸುವುದು ಇಷ್ಟವಿಲ್ಲವಂತೆ. ಮಗು ನೋಡಲು ಬರುವ ಬಹಳಷ್ಟು ಮಂದಿ ಅದರ ಫೋಟೋ ಕ್ಲಿಕ್ಕಿಸುತ್ತಾರೆ ಮತ್ತು ಅದನ್ನು ಇಂಟರ್​ನೆಟ್​ನಲ್ಲಿ ಪೋಸ್ಟ್​ ಮಾಡುತ್ತಾರೆ. ಇದು ರಣಬೀರ್​ ಮತ್ತು ಆಲಿಯಾಗೆ ಸುತಾರಾಂ ಇಷ್ಟವಿಲ್ಲ. ಅದೇ ಕಾರಣಕ್ಕೆ ಬಹಳಷ್ಟು ಜನರನ್ನು ಅವರ ಕುಟುಂಬ ದೂರ ಇಟ್ಟಿದೆ ಎಂದು ಹೇಳಲಾಗುತ್ತಿದೆ.

    ಇದರ ಜತೆಗೆ, ಮಕ್ಕಳಿಗೆ ಬಹಳ ಬೇಗ ಸೋಂಕು ಹರಡುವ ಭಯ ಇರುವುದರಿಂದ ಅದೂ ಒಂದು ಕಾರಣದಿಂದ ಯಾರಿಗೂ ತೋರಿಸುತ್ತಿಲ್ಲವಂತೆ. ಮೊದಲೇ ಕೋವಿಡ್​ ನಂತರದ ಕಾಲಘಟ್ಟ ಇದು. ಯಾರ್ಯಾರಿಗೆ ಏನೇನು ಸಮಸ್ಯೆಯೋ ಹೇಳುವುದು ಕಷ್ಟ. ಹೀಗಿರುವಾಗ, ಸುಮ್ಮನೆ ರಿಸ್ಕ್​ ಏತಕೆ ಎಂಬ ಕಾರಣಕ್ಕೆ ಮಗುವನ್ನು ದೂರವೇ ಇಡಲಾಗಿದೆಯಂತೆ.

    ಆಲಿಯಾಗೆ ಮಗುವಾದ ಸಂದರ್ಭದಲ್ಲಿ ಕರಣ್​ ಜೋಹರ್​ ಮುಂಬೈನಲ್ಲಿ ಇರಲಿಲ್ಲ. ಕೆಲಸದ ನಿಮಿತ್ತ ಲಂಡನ್​ಗೆ ಹೋದರಂತೆ. ವಾಪಸ್ಸು ಬಂದವರಿಗೆ ನೇರವಾಗಿ ಆಸ್ಪತ್ರೆಗೆ ಹೋಗಲಿಲ್ಲ. ಬದಲಿಗೆ ಕೋವಿಡ್​ ಟೆಸ್ಟ್​ ಮಾಡಿಸಿ, ತಮಗೇನೂ ಸಮಸ್ಯೆ ಇಲ್ಲ ಎಂದು ಗೊತ್ತು ಮಾಡಿಕೊಂಡೇ ಆಸ್ಪತ್ರೆಗೆ ಹೋದರಂತೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ ಒಂದು ಕೋಟಿ ಟಿಕೆಟ್ಸ್​​ ಮಾರಾಟ …

    ಈಗ ಆಲಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಹೋಗಿದ್ದಾರೆ. ಹಾಗಂತ ನಿಯಮಗಳನ್ನು ಸಡಿಸಿಲ್ಲವಂತೆ. ಆಸ್ಪತ್ರೆಯಲ್ಲಿ ಹೇಗಿತ್ತೋ, ಮನೆಯಲ್ಲೂ ಅದೇ ನಿಯಮಗಳನ್ನು ಪಾಲಿಸುತ್ತಿದ್ದಾರೆ, ಅಷ್ಟು ಸುಲಭಕ್ಕೆ ಯಾರನ್ನೂ ಮಗು ನೋಡುವುದಕ್ಕೆ ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

    ಆಕ್ಷನ್​ ಹೀರೋಗಳಿಗೆ ಸಾಹಸ ನಿರ್ದೇಶನ ಮಾಡುತ್ತಿರುವ ರವಿ ವರ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts