More

    ಮತ್ತೆ ಬಂದ ದಂಡುಪಾಳ್ಯ ಗ್ಯಾಂಗ್​ … ‘ಹುಬ್ಬಳ್ಳಿ ಡಾಬಾ’ ಕ್ಲೈಮ್ಯಾಕ್ಸ್​ನಲ್ಲಿ ಎಂಟ್ರಿ

    ಬೆಂಗಳೂರು: ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ದಂಡುಪಾಳ್ಯ ಗ್ಯಾಂಗ್​ನ ಅಬ್ಬರ ಜೋರಾಗಿದತ್ತು. ಈ ಗ್ಯಾಂಗ್​ನ ಕುರಿತಾಗಿ ನಿರ್ದೇಶಕ ಶ್ರೀನಿವಾಸರಾಜು ಮೂರ್ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಬಹಳ ದಿನಗಳೊಂದಿಗೆ ಅವರು ದಂಡುಪಾಳ್ಯ ಗ್ಯಾಂಗ್​ನ ಜತೆಗೆ ಮತ್ತೊಮ್ಮೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

    ಇದನ್ನೂ ಓದಿ: ಶೆಫ್ ಆದರು ಅನುಷ್ಕಾ; ನಟಿಯ 41ನೇ ಹುಟ್ಟುಹಬ್ಬಕ್ಕೆ ಪೋಸ್ಟರ್ ಉಡುಗೊರೆ

    ಶ್ರೀನಿವಾಸರಾಜು ಸದ್ದಿಲ್ಲದೆ ‘ಹುಬ್ಬಳ್ಳಿ ಡಾಬಾ’ ಎಂಬ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದೆ. ನವೀನ್​ ಚಂದ್ರ, ದಿವ್ಯಾ ಪಿಳ್ಳೈ, ಅನನ್ಯಾ ಸೇನ್​ ಗುಪ್ತ ರವಿಶಂಕರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ನಾಳೆ ನ.11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ವ ವಿಶೇಷವೆಂದರೆ, ಈ ಚಿತ್ರದಲ್ಲಿ ದಂಡುಪಾಳ್ಯ ಗ್ಯಾಂಗ್​ನವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಕುರಿತು ಮಾತನಾಡುವ ಶ್ರೀನಿವಾಸರಾಜು, ‘ಈ ಚಿತ್ರದ ಕ್ಲೈಮ್ಯಾಕ್ಸ್​ ವಿಭಿನ್ನವಾಗಿದೆ. ಇದುವರೆಗೂ ಯಾರೂ ಮಾಡದ ಒಂದು ಕ್ಲೈಮ್ಯಾಕ್ಸ್​ ಮಾಡಿದ್ದೇವೆ. ಇದೊಂದು ಮರ್ಡರ್​ ಮಿಸ್ಟ್ರಿಯಾಗಿದ್ದು, ಈ ಚಿತ್ರದಲ್ಲಿ ದಂಡುಪಾಳ್ಯ ಗ್ಯಾಂಗ್​ನವರು ಕೊನೆಗೆ ಕಾಣಿಸಿಕೊಳ್ಳಲಿದ್ದಾರೆ. ‘ದಂಡುಪಾಳ್ಯ’ ಸೀರೀಸ್​ನ ಚಿತ್ರದಲ್ಲಿ ಅವರು ಅರೆಸ್ಟ್​ ಆಗಿರುವುದನ್ನು ಈಗಾಗಲೇ ತೋರಿಸಲಾಗಿದೆ. ಅದಾಗಿ 15 ವರ್ಷಗಳ ನಂತರ ಅವರು ಜೈಲಿನಿಂದ ಹೊರಬರುತ್ತಾರೆ. ಅವರನ್ನು ಜೈಲಿಗೆ ಕಳಿಸಿದ್ದ ಇನ್​ಸ್ಪೆಕ್ಟರ್​ ಚಲಪತಿ ಪಾತ್ರ ಸಹ ಇಲ್ಲಿರುತ್ತದೆ’ ಎನ್ನುತ್ತಾರೆ.

    ‘ದಂಡುಪಾಳ್ಯ’ ಸೀರೀಸ್​ನ ಚಿತ್ರಗಳಲ್ಲಿ ಯಾರೆಲ್ಲ ಇದ್ದರೋ ಅವರೆಲ್ಲರೂ ಇಲ್ಲೂ ಮುಂದುವರೆದಿದ್ದಾರಂತೆ. ಪೂಜಾ ಗಾಂಧಿ, ಮಕರಂದ್​ ದೇಶಪಾಂಡೆ, ರವಿ ಕಾಳೆ, ಪೆಟ್ರೋಲ್​ ಪ್ರಸನ್ನ, ಮುನಿ, ಜಯದೇವ್​ ಮುಂತಾದವರು ಈ ಚಿತ್ರದಲ್ಲೂ ಅಭಿನಯಿಸಿದ್ದು, ಅವರೆಲ್ಲರಿಗೂ ಸ್ವಲ್ಪ ವಯಸ್ಸಾಗಿರುವಂತೆ ತೋರಿಸಲಾಗಿದೆಯಂತೆ. ಅವರು ಅರೆಸ್ಟ್​ ಆಗಿ 15 ವರ್ಷಗಳ ನಂತರದ ಒಂದು ಕಾಲ್ಪನಿಕ ಕಥೆಯನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನು ಶ್ರೀನಿವಾಸರಾಜು ಈ ಚಿತ್ರದಲ್ಲಿ ಮಾಡಿದ್ದಾರೆ.

    ಇದನ್ನೂ ಓದಿ: ಹೊಸಬರ ‘ಕಂಬ್ಳಿಹುಳ’ಕ್ಕೆ ಹಳಬರ ಬೆಂಬಲ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​

    ‘ಹುಬ್ಬಳ್ಳಿ ಡಾಬಾ’ ಚಿತ್ರಕ್ಕಾಗಿ ‌ಮೂರು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಈ ಚಿತ್ರದ ಛಾಯಾಗ್ರಹಕರು.

    ಹಾರರ್​ ಕಥೆಯಲ್ಲಿ ಅಕ್ಕ-ತಂಗಿಯಾದ ಮಿಲನಾ-ಅಮೃತಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts