ಬೆಂಗಳೂರು: ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ದಂಡುಪಾಳ್ಯ ಗ್ಯಾಂಗ್ನ ಅಬ್ಬರ ಜೋರಾಗಿದತ್ತು. ಈ ಗ್ಯಾಂಗ್ನ ಕುರಿತಾಗಿ ನಿರ್ದೇಶಕ ಶ್ರೀನಿವಾಸರಾಜು ಮೂರ್ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಬಹಳ ದಿನಗಳೊಂದಿಗೆ ಅವರು ದಂಡುಪಾಳ್ಯ ಗ್ಯಾಂಗ್ನ ಜತೆಗೆ ಮತ್ತೊಮ್ಮೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಶೆಫ್ ಆದರು ಅನುಷ್ಕಾ; ನಟಿಯ 41ನೇ ಹುಟ್ಟುಹಬ್ಬಕ್ಕೆ ಪೋಸ್ಟರ್ ಉಡುಗೊರೆ
ಶ್ರೀನಿವಾಸರಾಜು ಸದ್ದಿಲ್ಲದೆ ‘ಹುಬ್ಬಳ್ಳಿ ಡಾಬಾ’ ಎಂಬ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿದೆ. ನವೀನ್ ಚಂದ್ರ, ದಿವ್ಯಾ ಪಿಳ್ಳೈ, ಅನನ್ಯಾ ಸೇನ್ ಗುಪ್ತ ರವಿಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ನಾಳೆ ನ.11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ವ ವಿಶೇಷವೆಂದರೆ, ಈ ಚಿತ್ರದಲ್ಲಿ ದಂಡುಪಾಳ್ಯ ಗ್ಯಾಂಗ್ನವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡುವ ಶ್ರೀನಿವಾಸರಾಜು, ‘ಈ ಚಿತ್ರದ ಕ್ಲೈಮ್ಯಾಕ್ಸ್ ವಿಭಿನ್ನವಾಗಿದೆ. ಇದುವರೆಗೂ ಯಾರೂ ಮಾಡದ ಒಂದು ಕ್ಲೈಮ್ಯಾಕ್ಸ್ ಮಾಡಿದ್ದೇವೆ. ಇದೊಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಈ ಚಿತ್ರದಲ್ಲಿ ದಂಡುಪಾಳ್ಯ ಗ್ಯಾಂಗ್ನವರು ಕೊನೆಗೆ ಕಾಣಿಸಿಕೊಳ್ಳಲಿದ್ದಾರೆ. ‘ದಂಡುಪಾಳ್ಯ’ ಸೀರೀಸ್ನ ಚಿತ್ರದಲ್ಲಿ ಅವರು ಅರೆಸ್ಟ್ ಆಗಿರುವುದನ್ನು ಈಗಾಗಲೇ ತೋರಿಸಲಾಗಿದೆ. ಅದಾಗಿ 15 ವರ್ಷಗಳ ನಂತರ ಅವರು ಜೈಲಿನಿಂದ ಹೊರಬರುತ್ತಾರೆ. ಅವರನ್ನು ಜೈಲಿಗೆ ಕಳಿಸಿದ್ದ ಇನ್ಸ್ಪೆಕ್ಟರ್ ಚಲಪತಿ ಪಾತ್ರ ಸಹ ಇಲ್ಲಿರುತ್ತದೆ’ ಎನ್ನುತ್ತಾರೆ.
‘ದಂಡುಪಾಳ್ಯ’ ಸೀರೀಸ್ನ ಚಿತ್ರಗಳಲ್ಲಿ ಯಾರೆಲ್ಲ ಇದ್ದರೋ ಅವರೆಲ್ಲರೂ ಇಲ್ಲೂ ಮುಂದುವರೆದಿದ್ದಾರಂತೆ. ಪೂಜಾ ಗಾಂಧಿ, ಮಕರಂದ್ ದೇಶಪಾಂಡೆ, ರವಿ ಕಾಳೆ, ಪೆಟ್ರೋಲ್ ಪ್ರಸನ್ನ, ಮುನಿ, ಜಯದೇವ್ ಮುಂತಾದವರು ಈ ಚಿತ್ರದಲ್ಲೂ ಅಭಿನಯಿಸಿದ್ದು, ಅವರೆಲ್ಲರಿಗೂ ಸ್ವಲ್ಪ ವಯಸ್ಸಾಗಿರುವಂತೆ ತೋರಿಸಲಾಗಿದೆಯಂತೆ. ಅವರು ಅರೆಸ್ಟ್ ಆಗಿ 15 ವರ್ಷಗಳ ನಂತರದ ಒಂದು ಕಾಲ್ಪನಿಕ ಕಥೆಯನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನು ಶ್ರೀನಿವಾಸರಾಜು ಈ ಚಿತ್ರದಲ್ಲಿ ಮಾಡಿದ್ದಾರೆ.
ಇದನ್ನೂ ಓದಿ: ಹೊಸಬರ ‘ಕಂಬ್ಳಿಹುಳ’ಕ್ಕೆ ಹಳಬರ ಬೆಂಬಲ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
‘ಹುಬ್ಬಳ್ಳಿ ಡಾಬಾ’ ಚಿತ್ರಕ್ಕಾಗಿ ಮೂರು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಈ ಚಿತ್ರದ ಛಾಯಾಗ್ರಹಕರು.
ಹಾರರ್ ಕಥೆಯಲ್ಲಿ ಅಕ್ಕ-ತಂಗಿಯಾದ ಮಿಲನಾ-ಅಮೃತಾ …