More

    ಆದಿಪುರುಷ ಚಿತ್ರದಲ್ಲಾಗಿರುವ ತಪ್ಪನ್ನು ಒಪ್ಪಿಕೊಂಡ ಬರಹಗಾರ: ಕ್ಷಮೆಯಾಚಿಸಿದರೂ ಕರಗದ ನೆಟ್ಟಿಗರ ಕೋಪ!

    ಮುಂಬೈ: ಆದಿಪುರುಷ ಸಿನಿಮಾದಲ್ಲಿರುವ ತಪ್ಪನ್ನು ಒಪ್ಪಿಕೊಂಡಿರುವ ಬರಹಗಾರ ಮನೋಜ್​ ಮುಂತಾಶಿರ್​, ವಿವಾದಾತ್ಮಕ ಡೈಲಾಗ್​ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.

    ಇಂದು (ಜು. 8) ಬೆಳಗ್ಗೆ ಟ್ವೀಟ್​ ಮಾಡಿರುವ ಮನೋಜ್​, ಆದಿಪುರುಷ ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಎರಡೂ ಕೈಗಳನ್ನು ಮುಗಿದು ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಹಾಗೂ ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನೀವು ಸಲ್ಲಿಸಿದ ಗೃಹಜ್ಯೋತಿ ಅರ್ಜಿ ರಿಜಿಸ್ಟರ್​ ಆಗಿದ್ಯಾ? ಪರಿಶೀಲಿಸುವುದು ಹೀಗೆ…

    ಇದೀಗ ಮನೋಜ್​ ಅವರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕ್ಷಮೆ ಕೇಳಲು ತುಂಬಾ ತಡವಾಯಿತು ಎಂದಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಅದರ ಪ್ರಭಾವ ಕಡಿಮೆಯಾದ ಬಳಿಕ ಕ್ಷಮೆಯಾಚಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಮಂದಿಯ ಭಾವನೆಗಳನ್ನು ಕದಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಸಲಿಂಗ ಸಂಗಾತಿಗಾಗಿ ಹೇಬಿಯಸ್​ ಕಾರ್ಪಸ್​ ಹಿಡಿದು ಕೋರ್ಟ್​ ಮೆಟ್ಟಿಲೇರಿದ್ದ ಯುವತಿಗೆ ಸಿಕ್ತು ಗುಡ್​ ನ್ಯೂಸ್​!

    ಆದಿಪುರುಷ ಸಿನಿಮಾವನ್ನು ಓಂ ರಾವರ್​ ಅವರು ನಿರ್ದೇಶನ ಮಾಡಿದ್ದಾರೆ. ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾ ಆಗಿದ್ದು, ಭಾರೀ ಬಜೆಟ್​ನೊಂದಿಗೆ ಸಿನಿಮಾವನ್ನು ಯುವಿ ಕ್ರಿಯೇಷನ್ಸ್, ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡಿದೆ. ಪ್ಯಾನ್​ ಇಂಡಿಯಾ ಸೂಪರ್​ಸ್ಟಾರ್​ ಪ್ರಭಾಸ್​ ರಾಮನ ಪಾತ್ರದಲ್ಲಿ, ನಟಿ ಕೃತಿ ಸನೋನ್​ ಸೀತೆಯ ಪಾತ್ರದಲ್ಲಿ, ಸನ್ನಿ ಸಿಂಗ್​ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಸೈಫ್​ ಅಲಿಖಾನ್​ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ವಿವಾದಾತ್ಮಕ ಡೈಲಾಗ್ಸ್​, ತಿರುಚಿದ ಚಿತ್ರಕತೆ ಮತ್ತು ಕಳಪೆ ಗ್ರಾಫಿಕ್ಸ್​ ಕಾರಣದಿಂದಾಗಿ ಈ ಸಿನಿಮಾ ಭಾರೀ ಟೀಕೆಗೆ ಗುರಿಯಾಯಿತು. (ಏಜೆನ್ಸೀಸ್​)

    ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಲ್ಲ ಎಂದು ಪ್ರಮಾಣೀಕರಿಸಲು ಮನವಿ: ವಿವಾದದ ಸುಳಿಯಲ್ಲಿ ಆದಿಪುರುಷ್​

    ಆದಿಪುರುಷ್​​ ಸಿನಿಮಾಗೆ ಟಕ್ಕರ್​ ನೀಡಲು ಮುಂದಿನ ವಾರದಿಂದ ಟಿವಿಯಲ್ಲಿ ಪ್ರಸಾರವಾಗಲಿದೆ ರಾಮಾಯಣ!

    ಸೀತೆ ಕುರಿತ ಸಂಭಾಷಣೆ; ಆದಿಪುರುಷ್​ ಸೇರಿದಂತೆ ಭಾರತೀಯ ಚಲನಚಿತ್ರಗಳು ಕಠ್ಮಂಡುವಿನಲ್ಲಿ ಬ್ಯಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts