More

    ಮಾಯಾನಗರಿಯಲ್ಲಿ ಶ್ರಾವ್ಯಾ ಹೊಡೆದಾಟ ; ನಾಯಕಿಯೂ ನಾನೇ, ವಸವಿನ್ಯಾಸಕಿಯೂ ನಾನೇ ಎಂದ ನಟಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಶಂಕರ್ ಆರಾಧ್ಯ ನಿರ್ದೇಶನದ ಅನೀಶ್ ತೇಜೇಶ್ವರ್, ಭರತ್ ಸಾಗರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಮಾಯಾನಗರಿ’. ನಿರ್ದೇಶಕ ಓಂಪ್ರಕಾಶ್ ರಾವ್ ಪುತ್ರಿ ಶ್ರಾವ್ಯಾ ಈ ಚಿತ್ರದ ನಾಯಕಿಯಾಗಿದ್ದು ‘ಮಲ್ಲಿಕಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ತಮ್ಮ ಪಾತ್ರಕ್ಕೆ ತಾವೇ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಂಡು ಚಿತ್ರತಂಡದಿಂದ ಸೈ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ : ಟಾಲಿವುಡ್​ನಲ್ಲಿ ಶ್ರೀಲೀಲಾ ಹವಾ: ಈ ಚಿತ್ರದಲ್ಲಿ ಕಮ್​ಬ್ಯಾಕ್​ ಮಾಡಲಿದ್ದಾರಾ ನಟಿ?

    ಮಾಯಾನಗರಿಯಲ್ಲಿ ಶ್ರಾವ್ಯಾ ಹೊಡೆದಾಟ ; ನಾಯಕಿಯೂ ನಾನೇ, ವಸವಿನ್ಯಾಸಕಿಯೂ ನಾನೇ ಎಂದ ನಟಿ

    ಈ ಬಗ್ಗೆ, ‘‘ಮಾಯಾನಗರಿ’ಗೆ ನಾಯಕ ಬಂದಾಗ ಆತನಿಗೆ ಮಲ್ಲಿಕಾ ಎಂಬ ಯುವತಿ ಸಿಗುತ್ತಾಳೆ. ಆಕೆ ಯಾರು? ಅವಳ ಹಿನ್ನೆಲೆಯೇನು? ಆಕೆ ಸಿಲುಕಿರುವ ಸಮಸ್ಯೆ ಎಂಥದ್ದು ಎನ್ನುವುದೇ ಚಿತ್ರದ ಕಥೆ. ಸಾಮಾನ್ಯವಾಗಿ ನಾನು ಒಂದು ಸಿನಿಮಾ ಒಪ್ಪಿಕೊಂಡಾಗ ಕೆಲವು ತಯಾರಿ ಮಾಡಿಕೊಳ್ಳುತ್ತೇನೆ. ಅದೇ ರೀತಿ ಈ ಚಿತ್ರದಲ್ಲೂ ಪಾತ್ರಕ್ಕೆ ಬೇಕಾದ ಸಿದ್ದತೆ ಮಾಡಿಕೊಂಡೆ. ಜತೆಗೆ ಹಾಡೊಂದಕ್ಕೆ ನಾನೇ ಕಾಸ್ಟ್ಯೂಮ್ ಡಿಸೈನ್ ಮಾಡಬಹುದಾ ಅಂತ ನಿರ್ದೇಶಕರನ್ನು ಕೇಳಿದೆ. ಅವರು ಅವಕಾಶ ನೀಡಿದರು’ ಎಂದು ಹೇಳಿಕೊಳ್ಳುತ್ತಾರೆ ಶ್ರಾವ್ಯಾ. ‘ಮಾಯಾನಗರಿ’ ಹಾರರ್ ಆ್ಯಕ್ಷನ್ ್ಯಾಮಿಲಿ ಸೆಂಟಿಮೆಂಟ್ ಕಥೆಯಾಗಿದ್ದು, ಸದ್ಯ ರಿಲೀಸ್‌ಗೆ ರೆಡಿಯಾಗಿದೆ.

    ಇದನ್ನೂ ಓದಿ : ಹೊಸ ಹೆಜ್ಜೆಯತ್ತ ಲಾಸ್ಯ; ಕೆನಡಾದಲ್ಲಿ ಸಿನಿಮಾ ಕಲಿಯಲು ಹೊರಟ ಕನ್ನಡದ ಹುಡುಗಿ

    ಮಾಯಾನಗರಿಯಲ್ಲಿ ಶ್ರಾವ್ಯಾ ಹೊಡೆದಾಟ ; ನಾಯಕಿಯೂ ನಾನೇ, ವಸವಿನ್ಯಾಸಕಿಯೂ ನಾನೇ ಎಂದ ನಟಿ

    ಮೊದಲ ಬಾರಿಗೆ ಆ್ಯಕ್ಷನ್
    ‘ರೋಸ್’, ‘ಹುಚ್ಚ 2’ ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರಾವ್ಯಾ ಇದೇ ಮೊದಲ ಬಾರಿಗೆ ‘ಮಾಯಾನಗರಿ’ಯಲ್ಲಿ ಆ್ಯಕ್ಷನ್ ಮಾಡಿದ್ದಾರಂತೆ. ‘ಮೊದಲ ಬಾರಿಗೆ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದೇನೆ. ೈಟ್ಸ್ ಮಾಡುವ ವೇಳೆ ಪೆಟ್ಟು ತಿಂದಿದ್ದೂ ಇದೆ. ಆದರೂ ಧೈರ್ಯ ಮಾಡಿ ೈಟ್ಸ್ ಮಾಡಿದ್ದೇನೆ. ಆ್ಯಕ್ಷನ್ ಜತೆಗೆ ಎಮೋಷನ್ಸ್, ಕೋಪ, ಡ್ರಾಮಾ ಎಲ್ಲವೂ ಚಿತ್ರದಲ್ಲಿದೆ. ಒಟ್ಟು 100 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

    ಮಾಯಾನಗರಿಯಲ್ಲಿ ಶ್ರಾವ್ಯಾ ಹೊಡೆದಾಟ ; ನಾಯಕಿಯೂ ನಾನೇ, ವಸವಿನ್ಯಾಸಕಿಯೂ ನಾನೇ ಎಂದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts