More

    ಪಾತ್ರ ಸಿಕ್ಕಿದ್ದೇ ನನ್ನ ಅದೃಷ್ಟ; ಜಾನು ಆದ ಪ್ರಿಯಾಂಕಾ ತಿಮ್ಮೇಶ್

    ಬೆಂಗಳೂರು: ‘ಪಾತ್ರ ಸಿಕ್ಕಿದ್ದೇ ನನ್ನ ಅದೃಷ್ಟ. ಹಲವು ನಾಯಕಿಯರಿದ್ದರೂ ನನ್ನನ್ನು ನಂಬಿ ಈ ಪಾತ್ರ ಕೊಟ್ಟಿದ್ದಾರೆ. ಚಿತ್ರ ಪ್ರೀತಿಯಿಂದ ಪ್ರಾರಂಭವಾಗಿ ಪ್ರೀತಿಯಿಂದ ಮುಗಿಯುತ್ತದೆ. ಆ ಪ್ರೀತಿ ನಾನಾಗಿರುವುದು ಇನ್ನೂ ಖುಷಿ …’

    ಒಂದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾರೆ ಪ್ರಿಯಾಂಕಾ ತಿಮ್ಮೇಶ್. ಪ್ರಜ್ವಲ್ ಅಭಿನಯದ ‘ಅರ್ಜುನ್ ಗೌಡ’ ಚಿತ್ರದಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದು, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಪ್ರಿಯಾಂಕಾ. ಈ ಚಿತ್ರವು ತನ್ನ ಕೆರಿಯರ್​ಗೆ ಇನ್ನೊಂದು ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

    ತಮ್ಮ ಪಾತ್ರದ ಕುರಿತು ಮಾತನಾಡುವ ಅವರು, ‘ಈ ಚಿತ್ರದಲ್ಲಿ ನನ್ನದು ಜಾಹ್ನವಿ ಎಂಬ ಕಾಲೇಜು ಹುಡುಗಿಯ ಪಾತ್ರ. ಜಾನು ಅಂತ ಎಲ್ಲರೂ ಕರೆಯುತ್ತಿರುತ್ತಾರೆ. ಮುದ್ದುಮುದ್ದಾದ ಪಾತ್ರ. ಅಷ್ಟೇ ಅಲ್ಲ, ಮೊದಲ ಬಾರಿಗೆ ಸ್ವಲ್ಪ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ಶಂಕರ್ ಈ ಚಿತ್ರದ ಬಗ್ಗೆ ಹೇಳಿದಾಗ, ಇದು ತೆಲುಗಿನ ‘ಅರ್ಜುನ್ ರೆಡ್ಡಿ’ ರೀಮೇಕ್ ಇರಬಹುದು ಎಂದುಕೊಂಡಿದ್ದೆ. ಆದರೆ, ಯಾವಾಗ ಇಲ್ಲಿ ನಾಯಕ ಡಾಕ್ಟರ್ ಅಲ್ಲ ಎಂದರೋ, ಇದು ರೀಮೇಕ್ ಅಲ್ಲ ಎಂದು ಸ್ಪಷ್ಟವಾಯಿತು’ ಎನ್ನುತ್ತಾರೆ ಪ್ರಿಯಾಂಕಾ.

    ಈ ಚಿತ್ರ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ನಂಬಿಕೆ ಪ್ರಜ್ವಲ್​ದು. ‘ವರ್ಷದ ಆರಂಭದಲ್ಲೇ, ‘ಇನ್​ಸ್ಪೆಕ್ಟರ್ ವಿಕ್ರಂ’ ಒಳ್ಳೆಯ ಓಪನಿಂಗ್ ಪಡೆದು ಜನರಿಗೆ ಇಷ್ಟವಾಯಿತು. ಅದೇ ಖುಷಿಯಲ್ಲಿ ‘ಅರ್ಜುನ್ ಗೌಡ’ ಚಿತ್ರವನ್ನು ಜನರ ಮುಂದೆ ತರುವುದಕ್ಕೆ ಪ್ಲಾನ್ ಮಾಡುತ್ತಿದ್ದೇವೆ. ಮನರಂಜನೆಗೆ ಎಲ್ಲೂ ಕೊರತೆಯಾಗದಂತೆ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ಪ್ರಜ್ವಲ್.

    ‘ಅರ್ಜುನ್ ಗೌಡ ಚಿತ್ರವನ್ನು ಶಂಕರ್ ಬರೆದು ನಿರ್ದೇಶಿಸಿದರೆ, ರಾಮು ನಿರ್ಮಾಣ ಮಾಡುತ್ತಿದ್ದಾರೆ. ಇದು ರಾಮು ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ 39ನೇ ಚಿತ್ರ. ಧರ್ಮ ವಿಶ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಕೆಲಸಗಳು ಮುಗಿದಿದ್ದು, ಏಪ್ರಿಲ್ ಅಥವಾ ಮೇನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

    ದರ್ಶನ್​-ಯಶ್​ ಅಭಿಮಾನಿಗಳ ನಡುವೆ ಜೋರಾಯ್ತು ಟ್ವೀಟ್​ ಸಮರ: ಫ್ಯಾನ್ಸ್​ ವಾರ್​ಗೆ ಕೊನೆ ಎಂದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts