ಹಾಸನ : ಎಳೆಯ ಕರುಗಳನ್ನು ಅಕ್ರಮವಾಗಿ ಸಾಗಿಸುವ ಸಮಯದಲ್ಲಿ ಅಪಘಾತವಾಗಿ 20 ಎಳೆಯ ಕರುಗಳು ಮರಣ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸರು ಹತ್ತು ಜನರನ್ನು ಬಂಧಿಸಿದ್ದಾರೆ. ಅರಸೀಕೆರೆ ತಾಲೂಕಿನ ಗಂಡಸಿ ಹಾಗೂ ಹೊಸೂರು ಮೂಲದ ನೂರುಲ್ಲಾ, ರಹೀಂ, ಸುಲ್ತಾನ್, ಆರೀಫ್, ಇರ್ಫಾನ್, ಸಬೀರ್ ಅಹಮದ್, ಅಬ್ದುಲ್ ಮುಬಾರಕ್, ಜೀವನ್ ಮತ್ತು ಪುರುಷೋತ್ತಮ್ ಎಂಬುವರು ಬಂಧಿತರು.
ಆಗಸ್ಟ್ 19 ರ ರಾತ್ರಿ, ಬೇಲೂರು ತಾಲ್ಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ, ಗೂಡ್ಸ್ ವಾಹನದಲ್ಲಿ 50 ಕ್ಕೂ ಹೆಚ್ಚು ಕರುಗಳನ್ನು ಸಾಗಾಟ ಮಾಡುವ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿಯಾಗಿತ್ತು. ಈ ಅಪಘಾತದಿಂದಾಗಿ ಕರುಗಳ ಬಾಯಿ, ಕಾಲಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು. ಗೋಹತ್ಯೆ ನಿಷೇಧ ಇರುವುದರಿಂದ ರಾತ್ರೋರಾತ್ರಿ ಕರುಗಳನ್ನು ಸಾಗಿಸುತ್ತಿದ್ದ ದುಷ್ಟರು ಅಪಘಾತ ಸ್ಥಳದಿಂದ ಪಲಾಯನ ಮಾಡಿದ್ದರು.
ಇದನ್ನೂ ಓದಿ: ಅಂಕಲ್ಗಳೇ ಈಕೆಯ ಟಾರ್ಗೆಟ್: ಪಾರ್ಕ್ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್
ಈ ದುರ್ಘಟನೆಯಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು. ಪ್ರಕರಣದ ಬಗ್ಗೆ ಬೇಲೂರು ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ. ದುರ್ಘಟನೆಯ ನಂತರ ಬದುಕುಳಿದಿದ್ದ 30ಕ್ಕೂ ಹೆಚ್ಚು ಕರುಗಳನ್ನು ಪಶು ಇಲಾಖೆ ಅಧಿಕಾರಿಗಳು ಗೋಶಾಲೆಗೆ ಬಿಟ್ಟಿದ್ದಾರೆ.
VIDEO| ‘ಈಗ ಎಲ್ಲಾ ಜೀರೋ ಆಗಿಬಿಟ್ಟಿದೆ’ – ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಾಜಿ ಸಂಸದ
‘ಕೇವಲ ಸೋದರರಲ್ಲ, ಸೋದರಿಯರೂ ರಕ್ಷಿಸಬಲ್ಲರು’ ಎನ್ನುತ್ತಾರೆ ನೃತ್ಯಜೋಡಿ ಶಕ್ತಿ, ಮುಕ್ತಿ!