ಮುಂಬೈ: ಬಾಲಿವುಡ್ ಹೀರೋಗಳಲ್ಲಿ ಅಭಿಷೇಕ್ ಬಚ್ಚನ್ ಅವರಷ್ಟು ಟ್ರೋಲ್ ಆಗುವ ಮತ್ತೊಬ್ಬ ಹೀರೋ ಸಿಗುವುದು ಕಷ್ಟ. ಅಭಿಷೇಕ್ ಸೋಲುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ಎನ್ನುವಷ್ಟು ಆಗಾಗ ಟ್ರೋಲ್ ಮಾಡಲಾಗುತ್ತಿರುತ್ತದೆ. ಅದೆಷ್ಟೇ ಟ್ರೋಲ್ ಆದರೂ, ಅಭಿಷೇಕ್ ಮಾತ್ರ ತಾಳ್ಮೆಯಿಂದ ಇರುತ್ತಾರೆ ಮತ್ತು ತಮ್ಮನ್ನು ಬಯ್ದವರಿಗೆ ಪ್ರೀತಿಯಿಂದ ಉತ್ತರ ಕೊಡುತ್ತಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: ಫಿಕ್ಸ್ ಆಯ್ತು ‘ಬೆಲ್ ಬಾಟಮ್’ ರಿಲೀಸ್ ಡೇಟ್ … ಬಿಡುಗಡೆ ಯಾವಾಗ ಗೊತ್ತಾ?
ಈಗ್ಯಾಕೆ ಈ ವಿಷಯ ಎಂದರೆ, ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಅಭಿಷೇಕ್ ಅವರ ಕಾಲೆಳೆಯಲಾಗಿದೆ ಮತ್ತು ಅವರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಇಷ್ಟಕ್ಕೂ ಆಗಿದ್ದೇನೆಂದರೆ, ಕೇಂದ್ರ ಸರ್ಕಾರ ಅನ್ಲಾಕ್-5 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನ ಪ್ರಾರಂಭಿಸಬಹುದು ಎಂದು ತಿಳಿಸಿದೆ.
ಈ ಕುರಿತು ಅಭಿಷೇಕ್, ಸೋಷಿಯಲ್ ಮೀಡಿಯಾದಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತೆ ಚಿತ್ರ ಪ್ರದರ್ಶನ ಪ್ರಾರಂಭವಾದರೆ, ಎಲ್ಲವೂ ಮೊದಲಿನಂತಾಗುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಈ ಕುರಿತು ನೆಟ್ಟಿಗರೊಬ್ಬರು ಉತ್ತರ ಕೊಟ್ಟಿದ್ದು, ‘ಸಿನಿಮಾ ಪ್ರಾರಂಭವಾದರೇನು? ನಿನಗೆ ಮಾತ್ರ ಕೆಲಸ ಸಿಗುವುದಿಲ್ಲ’ ಎಂದು ಕಾಲೆಳೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಷೇಕ್, ‘ಅದೆಲ್ಲವೂ ಪ್ರೇಕ್ಷಕರ ಕೈಯಲ್ಲಿವೆ. ಪ್ರೇಕ್ಷಕರಿಗೆ ನಮ್ಮ ಕೆಲಸ ಇಷ್ಟವಾಗದಿದ್ದರೆ, ಕೆಲಸ ಸಿಗುವುದು ಕಷ್ಟವಾಗುತ್ತದೆ. ಹಾಗಾಗಿ, ನಿಮ್ಮನ್ನು ಮೆಚ್ಚಿಸುವುದಕ್ಕೆ ಬಹಳ ಕಷ್ಟಪಡಬೇಕಾಗುತ್ತದೆ’ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ತೆರವಾದ ನಂತರ ಬಿಡುಗಡೆಯಾಗಲಿರುವ ಮೊದಲ ಚಿತ್ರ ಇದೇ …
ಇನ್ನು ನೆಟ್ಟಿಗರೊಬ್ಬರು, ‘ದ್ರೋಣ’ದಂತಹ ಸೂಪರ್ ಫ್ಲಾಪ್ ಸಿನಿಮಾ ಕೊಟ್ಟ ಮೇಲೂ ನಿಮಗೆ ಅವಕಾಶ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅಭಿಷೇಕ್, ‘ಆ ಚಿತ್ರವಾದ ನಂತರ ನನಗೆ ಕೆಲಸ ಸಿಗಲಿಲ್ಲ. ಅವಕಾಶ ಸಿಕ್ಕಿದ್ದ ಚಿತ್ರಗಳು ಸಹ ಕೈಬಿಟ್ಟುಹೋದವು. ಹಾಗಾಂತ ನಂಬಿಕೆ ಮತ್ತು ನಿರೀಕ್ಷೆಗಳನ್ನು ಕೈಬಿಡಬಾರದು. ಗುರಿ ಇಟ್ಟುಕೊಂಡರು ಅದನ್ನು ಸಾಧಿಸುವುದಕ್ಕೆ ಹೋರಾಡುತ್ತಿರಲೇಬೇಕು. ನೀವು ಈ ಜಗತ್ತಿನಲ್ಲಿ ಬದುಕಬೇಕೆಂದರೆ, ಪ್ರತೀ ದಿನ ಫೈಟ್ ಮಾಡುತ್ತಲೇ ಇರಬೇಕು. ಇಲ್ಲಿ ಯಾವುದೂ ಸುಲಭವಲ್ಲ’ ಎಂದು ಹೇಳಿದ್ದಾರೆ.
But aren't you still gonna be jobless? https://t.co/npe28AqBsc
— catnip (@complexmea) September 30, 2020
ನನ್ನ ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿರುವೆ: ಟ್ವಿಟರ್ನಲ್ಲಿ ಹೇಳಿಕೊಂಡ ಅಮಿತಾಭ್