ಮುಂಬೈ: ‘ಲಾಲ್ ಸಿಂಗ್ ಛಡ್ಡಾ’ ನಂತರ ಆಮೀರ್ ಖಾನ್ ನಟನೆಗೆ ವಿದಾಯ ಹೇಳುವುದಾಗಿ ಹೇಳಿಕೊಂಡಿದ್ದರು. ಕುಟುಂಬದವರ ಜತೆಗೆ ಕಾಲ ಕಳೆಯುವುದಾಗಿ ಹೇಳಿದ್ದರು. ಅವರ ಮನಸ್ಸು ಬದಲಾಯಿಸುವುದಕ್ಕೆ ಕುಟುಂಬದವರು ಸೇರಿದಂತೆ ಹಲವರು ಪ್ರಯತ್ನಿಸಿದರೂ, ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಆಮೀರ್ ಸದ್ಯಕ್ಕೆ ಬಣ್ಣ ಹಚ್ಚುವುದಕ್ಕೆ ನಿರಾಕರಿಸಿರುವುದಷ್ಟೇ ಅಲ್ಲ, ಅದನ್ನು ಬಹಿರಂಗವಾಗಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಗಂಡ ಅರೆಸ್ಟ್ ಆಗುತ್ತಿದ್ದಂತೆ ಕುಸಿದು ಬಿದ್ದ ರಾಖಿ ಸಾವಂತ್!
ಕಳೆದ ವರ್ಷ ರಿಟೈರ್ಮೆಂಟ್ನ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದ ಆಮೀರ್ ಖಾನ್, ‘ಇಷ್ಟು ವರ್ಷ ಚಿತ್ರರಂಗದಲ್ಲೇ ಮುಳುಗಿ ಹೋಗಿದ್ದೆ. ನನ್ನ ಮಕ್ಕಳಿಗೇನು ಬೇಕು, ಅವರಿಗೇನು ಇಷ್ಟ ಇದ್ಯಾವುದೂ ನನಗೆ ಗೊತ್ತಿಲ್ಲ. ಒಂದು ಹಂತದಲ್ಲಿ ನನಗೆ ನನ್ನ ತಪ್ಪಿನ ಅರಿವಾದಾಗ ಬಹಳ ಸಿಟ್ಟು ಬಂತು. ನನ್ನ ಮತ್ತು ನನ್ನ ಕುಟುಂಬದವರ ನಡುವೆ ಈ ಬಿರುಕು ಮೂಡಿಸಿದ್ದೇ ಈ ಸಿನಿಮಾ. ಅದೇ ಕಾರಣಕ್ಕೆ ಇನ್ನು ಮುಂದೆ ನಾನು ನಟಿಸುವುದಿಲ್ಲ, ನಿರ್ಮಾಣವನ್ನೂ ಮಾಡುವುದಿಲ್ಲ ಎಂದು ನನ್ನ ಕುಟುಂಬದವರಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇನೆ’ ಎಂದು ಹೇಳಿಕೊಂಡಿದ್ದರು ಆಮೀರ್. ಕುಟುಂಬದವರು ಆಮೀರ್ ಮನಸ್ಸು ಬದಲಾಯಿಸುವುದಕ್ಕೆ ಪ್ರಯತ್ನಿಸಿದರೂ, ‘ಮಾನಸಿಕವಾಗಿ ನಾನು ನಟನೆಯಿಂದ ದೂರಾಗಿದ್ದೇನೆ’ ಎಂದು ಆಮೀರ್ ಹೇಳಿದ್ದರು.
ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ‘ಕಳೆದ 35 ವರ್ಷಗಳಿಂದ ಸತತವಾಗಿ ದುಡಿಯುತ್ತಿದ್ದೇನೆ. ಬಹಳ ಫೋಕಸ್ ಆಗಿ ಕೆಲಸ ಮಾಡಿದ್ದೇನೆ. ಇದರಿಂದಾಗಿ ನನ್ನ ಸುತ್ತಮುತ್ತಲಿನವರಿಗೆ ಸಾಕಷ್ಟು ಅನ್ಯಾಯವಾಗಿದೆ. ಇದು ನನ್ನ ಪಾಲಿನ ದೊಡ್ಡ ತಪ್ಪು. ಹಾಗಾಗಿ, ಜೀವನವನ್ನು ಬೇರೆ ತರಹ ಅನುಭವಿಸುವುದಕ್ಕೆ ಇದು ಸರಿಯಾದ ಸಮಯ ಅಂತನಿಸುತ್ತಿದೆ. ನನಗೆ ದೊಡ್ಡ ಬ್ರೇಕ್ ಬೇಕಾಗಿದೆ. ನನ್ನ ತಾಯಿ ಮತ್ತು ಮಕ್ಕಳ ಜತೆಗೆ ಕಾಲ ಕಳೆಯಬೇಕಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವುದಕ್ಕೆ ಹೊರಟಿದ್ದಾರೆ ಅನೂಪ್, ಧನ್ಯಾ …
‘ಲಾಲ್ ಸಿಂಗ್ ಛಡ್ಡಾ’ ನಂತರ ಆಮೀರ್ ಖಾನ್, ‘ಚಾಂಪಿಯನ್ಸ್’ ಎಂಬ ಚಿತ್ರ ನಿರ್ಮಿಸಿ, ಅದರಲ್ಲಿ ನಟಿಸಬೇಕಿತ್ತು. ಆದರೆ, ಆಮೀರ್ ಅದರಿಂದ ಹಿಂದೆ ಸರಿದಿದ್ದರು. ‘ಅದೊಂದು ಅದ್ಭುತವಾದ ಕಥೆ. ನನಗೆ ಆ ಸಿನಿಮಾದಲ್ಲಿ ನಟಿಸುವುದಕ್ಕೆ ಇಷ್ಟವಿತ್ತು. ಆದರೆ, ನನಗೆ ಬ್ರೇಕ್ ಬೇಕೆಂದೆನಿಸುತ್ತಿದೆ. ನನಗೆ ನನ್ನ ತಾಯಿಯ ಜತೆಗೆ ಮತ್ತು ಮಕ್ಕಳ ಜತೆಗೆ ಸಮಯ ಕಳೆಯಬೇಕು ಎಂಬ ಆಸೆ. ಅದೇ ಕಾರಣಕ್ಕೆ ಚಿತ್ರದಲ್ಲಿ ನಟಿಸುತ್ತಿಲ್ಲ’ ಎಂದು ಹೇಳಿದ್ದಾರೆ.
ಸ್ನೇಹಿತರೋ? ಪ್ರೇಮಿಗಳೋ? ಮಾಲ್ಡೀವ್ಸ್ನಲ್ಲಿ ಪ್ರಭಾಸ್-ಕೃತಿ ನಿಶ್ಚಿತಾರ್ಥ?