More

    ಮನೆಯವರಿಗೆ ಅನ್ಯಾಯ ಮಾಡುವುದಕ್ಕೆ ಇಷ್ಟವಿಲ್ಲ … ಆಮೀರ್​ ಹೀಗೆ ಹೇಳಿದ್ದು ಯಾಕೆ?

    ಮುಂಬೈ: ‘ಲಾಲ್​ ಸಿಂಗ್​ ಛಡ್ಡಾ’ ನಂತರ ಆಮೀರ್​ ಖಾನ್​ ನಟನೆಗೆ ವಿದಾಯ ಹೇಳುವುದಾಗಿ ಹೇಳಿಕೊಂಡಿದ್ದರು. ಕುಟುಂಬದವರ ಜತೆಗೆ ಕಾಲ ಕಳೆಯುವುದಾಗಿ ಹೇಳಿದ್ದರು. ಅವರ ಮನಸ್ಸು ಬದಲಾಯಿಸುವುದಕ್ಕೆ ಕುಟುಂಬದವರು ಸೇರಿದಂತೆ ಹಲವರು ಪ್ರಯತ್ನಿಸಿದರೂ, ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಆಮೀರ್​ ಸದ್ಯಕ್ಕೆ ಬಣ್ಣ ಹಚ್ಚುವುದಕ್ಕೆ ನಿರಾಕರಿಸಿರುವುದಷ್ಟೇ ಅಲ್ಲ, ಅದನ್ನು ಬಹಿರಂಗವಾಗಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಗಂಡ ಅರೆಸ್ಟ್​ ಆಗುತ್ತಿದ್ದಂತೆ ಕುಸಿದು ಬಿದ್ದ ರಾಖಿ ಸಾವಂತ್​!

    ಕಳೆದ ವರ್ಷ ರಿಟೈರ್​ಮೆಂಟ್​ನ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದ ಆಮೀರ್​ ಖಾನ್​, ‘ಇಷ್ಟು ವರ್ಷ ಚಿತ್ರರಂಗದಲ್ಲೇ ಮುಳುಗಿ ಹೋಗಿದ್ದೆ. ನನ್ನ ಮಕ್ಕಳಿಗೇನು ಬೇಕು, ಅವರಿಗೇನು ಇಷ್ಟ ಇದ್ಯಾವುದೂ ನನಗೆ ಗೊತ್ತಿಲ್ಲ. ಒಂದು ಹಂತದಲ್ಲಿ ನನಗೆ ನನ್ನ ತಪ್ಪಿನ ಅರಿವಾದಾಗ ಬಹಳ ಸಿಟ್ಟು ಬಂತು. ನನ್ನ ಮತ್ತು ನನ್ನ ಕುಟುಂಬದವರ ನಡುವೆ ಈ ಬಿರುಕು ಮೂಡಿಸಿದ್ದೇ ಈ ಸಿನಿಮಾ. ಅದೇ ಕಾರಣಕ್ಕೆ ಇನ್ನು ಮುಂದೆ ನಾನು ನಟಿಸುವುದಿಲ್ಲ, ನಿರ್ಮಾಣವನ್ನೂ ಮಾಡುವುದಿಲ್ಲ ಎಂದು ನನ್ನ ಕುಟುಂಬದವರಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇನೆ’ ಎಂದು ಹೇಳಿಕೊಂಡಿದ್ದರು ಆಮೀರ್​. ಕುಟುಂಬದವರು ಆಮೀರ್​ ಮನಸ್ಸು ಬದಲಾಯಿಸುವುದಕ್ಕೆ ಪ್ರಯತ್ನಿಸಿದರೂ, ‘ಮಾನಸಿಕವಾಗಿ ನಾನು ನಟನೆಯಿಂದ ದೂರಾಗಿದ್ದೇನೆ’ ಎಂದು ಆಮೀರ್​ ಹೇಳಿದ್ದರು.

    ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ‘ಕಳೆದ 35 ವರ್ಷಗಳಿಂದ ಸತತವಾಗಿ ದುಡಿಯುತ್ತಿದ್ದೇನೆ. ಬಹಳ ಫೋಕಸ್​ ಆಗಿ ಕೆಲಸ ಮಾಡಿದ್ದೇನೆ. ಇದರಿಂದಾಗಿ ನನ್ನ ಸುತ್ತಮುತ್ತಲಿನವರಿಗೆ ಸಾಕಷ್ಟು ಅನ್ಯಾಯವಾಗಿದೆ. ಇದು ನನ್ನ ಪಾಲಿನ ದೊಡ್ಡ ತಪ್ಪು. ಹಾಗಾಗಿ, ಜೀವನವನ್ನು ಬೇರೆ ತರಹ ಅನುಭವಿಸುವುದಕ್ಕೆ ಇದು ಸರಿಯಾದ ಸಮಯ ಅಂತನಿಸುತ್ತಿದೆ. ನನಗೆ ದೊಡ್ಡ ಬ್ರೇಕ್​ ಬೇಕಾಗಿದೆ. ನನ್ನ ತಾಯಿ ಮತ್ತು ಮಕ್ಕಳ ಜತೆಗೆ ಕಾಲ ಕಳೆಯಬೇಕಾಗಿದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವುದಕ್ಕೆ ಹೊರಟಿದ್ದಾರೆ ಅನೂಪ್​, ಧನ್ಯಾ …

    ‘ಲಾಲ್​ ಸಿಂಗ್​ ಛಡ್ಡಾ’ ನಂತರ ಆಮೀರ್​ ಖಾನ್​, ‘ಚಾಂಪಿಯನ್ಸ್​’ ಎಂಬ ಚಿತ್ರ ನಿರ್ಮಿಸಿ, ಅದರಲ್ಲಿ ನಟಿಸಬೇಕಿತ್ತು. ಆದರೆ, ಆಮೀರ್​ ಅದರಿಂದ ಹಿಂದೆ ಸರಿದಿದ್ದರು. ‘ಅದೊಂದು ಅದ್ಭುತವಾದ ಕಥೆ. ನನಗೆ ಆ ಸಿನಿಮಾದಲ್ಲಿ ನಟಿಸುವುದಕ್ಕೆ ಇಷ್ಟವಿತ್ತು. ಆದರೆ, ನನಗೆ ಬ್ರೇಕ್​ ಬೇಕೆಂದೆನಿಸುತ್ತಿದೆ. ನನಗೆ ನನ್ನ ತಾಯಿಯ ಜತೆಗೆ ಮತ್ತು ಮಕ್ಕಳ ಜತೆಗೆ ಸಮಯ ಕಳೆಯಬೇಕು ಎಂಬ ಆಸೆ. ಅದೇ ಕಾರಣಕ್ಕೆ ಚಿತ್ರದಲ್ಲಿ ನಟಿಸುತ್ತಿಲ್ಲ’ ಎಂದು ಹೇಳಿದ್ದಾರೆ.

    ಸ್ನೇಹಿತರೋ? ಪ್ರೇಮಿಗಳೋ? ಮಾಲ್ಡೀವ್ಸ್​ನಲ್ಲಿ ಪ್ರಭಾಸ್​-ಕೃತಿ ನಿಶ್ಚಿತಾರ್ಥ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts