ಶಿವಮೊಗ್ಗ: ಭತ್ತ ತುಂಬಿಕೊಂಡು ಶಿವಮೊಗ್ಗ ಕಡೆಯಿಂದ ಮಂಗಳೂರಿನತ್ತ ಹೋಗುತ್ತಿದ್ದ ಟ್ರಕ್ ಆಗುಂಬೆ ಘಾಟ್ನ 6 ಹಾಗೂ 7ನೇ ತಿರುವಿನ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದತ್ತ ಮುಖಮಾಡಿರುವ ದೃಶ್ಯ ಇದು.
ರಸ್ತೆ ಬದಿ ನಿರ್ಮಿಸಿದ್ದ ಉಕ್ಕಿನ ತಡೆಗೋಡೆ ಇದ್ದ ಟ್ರಕ್ ಅದರ ಮೇಲೇ ನಿಂತಿತ್ತು. ಟ್ರಕ್ನ ಅರ್ಧಭಾಗ ಹೆದ್ದಾರಿ, ಇನ್ನರ್ಧ ಭಾಗ ಪ್ರಪಾತದತ್ತ ನೇತಾಡುತ್ತಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದೆ. ಒಂದು ವೇಳೆ ಟ್ರಕ್ ಪ್ರಪಾತಕ್ಕೆ ಬಿದ್ದಿದ್ದರೆ ಆಗುಂಬೆ ಘಾಟ್ನ 7ನೇ ತಿರುವಿನಲ್ಲಿ ಬರುತ್ತಿದ್ದ ವಾಹನಗಳ ಮೇಲೆ ಬೀಳುತ್ತಿತ್ತು!
ಘಟನೆಯಲ್ಲಿ ಟ್ರಕ್ ಚಾಲಕ ಹಾಗೂ ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ
ಕಣ್ಣು ಕುಕ್ಕುವಂತಿದೆ ಶಾಸಕ ಜಮೀರ್ ಬಂಗಲೆ! ಅರೇಬಿಯನ್ ಶೈಲಿಯ ಅರಮನೆಗೆ ಚಿನ್ನದ ಲೇಪನ…
ಬಿಜೆಪಿಗೆ ಬಂದ ಶಾಸಕ ಮಹೇಶ್ಗೆ ವೇದಿಕೆಯಲ್ಲೇ ಸಿಹಿ ಸುದ್ದಿ ಕೊಟ್ಟ ಬಿಎಸ್ವೈ!