ಲಖನೌ: ಮಳೆ ಬಂದಾಗಲೆಲ್ಲಾ ರಸ್ತೆಯೆಲ್ಲಾ ಗುಂಡಿಗಳಿಂದ ತುಂಬಿರುತ್ತವೆ. ಎಷ್ಟೇ ಜಾಗಕರೂಕತೆ ವಹಿಸಿದರೂ ಕೆಲವೊಮ್ಮೆ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.
ಸದ್ಯ ಇಲ್ಲೊಂದ ಬೆಚ್ಚಿ ಬೀಳಿಸುವ ದೃಶ್ಯ ಸೆರೆಯಾಗಿದೆ. ದ್ವಿಚಕ್ರ ವಾಹನದಲ್ಲಿ ತನ್ನ ಪತ್ನಿಯೊಂದಿಗೆ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲು ಪೇದೆಯೊಬ್ಬರು ಬರುತ್ತಾರೆ. ಮಳೆ ನೀರಿನಿಂದ ತುಂಬಿದ ರಸ್ತೆಯಲ್ಲಿ ಏನೂ ಕಾಣಿಸುವುದಿಲ್ಲ. ಅಲ್ಲೇ ಪಕ್ಕದಲ್ಲೇ ಇತರೆ ವಾಹನಗಳು ನಿಂತಿರುತ್ತವೆ. ಅದೇ ಭರವಸೆ ಮೇಲೆ ಹೊರಟ ಈ ಪೇದೆ ಬೈಕ್ ಅನ್ನು ಮುಂದೆ ತರುತ್ತಾರೆ.ಆಗಲೇ ಗೊತ್ತಾಗಿದ್ದು, ಇಲ್ಲಿ ಡ್ರೈನೇಜ್ ಗುಂಡಿ ಇದೆ ಎಂದು. ಬೈಕ್ ಸಮೇತ ದಂಪತಿ ಮುಳುಗುತ್ತಾರೆ. ಇದನ್ನು ನೋಡಿದ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು. ಇಬ್ಬರನ್ನೂ ರಕ್ಷಿಸಿದ್ದಾರೆ. ಸದ್ಯ ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
#यूपी का स्मार्ट सिटी अलीगढ़।
किसे धन्यवाद दें? pic.twitter.com/VnwAqLRKQc— Surya Pratap Singh IAS Rtd. (@suryapsingh_IAS) June 19, 2022
ಸದ್ಯ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಲಿಗಢದಲ್ಲಿ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್, ಅಲಿಗಢದ ಸ್ಮಾರ್ಟ್ ಸಿಟಿಯ ಗೌರವ ಯಾರಿಗೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
VIDEO: ರಾಷ್ಟ್ರ ರಾಜಧಾನಿಯಲ್ಲಿ ಹಿಂದೆಂದೂ ಕಾಣದ ಟ್ರಾಫಿಕ್ ಜಾಮ್! ಕಾರಣವೇನು ಗೊತ್ತಾ?
ಬಹುಮತ ಕಳೆದುಕೊಂಡ ಅಧ್ಯಕ್ಷ ಇಮ್ಯಾನ್ಯುಯಲ್: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್ ಸರ್ಕಾರ