More

    VIDEO: ರಾಷ್ಟ್ರ ರಾಜಧಾನಿಯಲ್ಲಿ ಹಿಂದೆಂದೂ ಕಾಣದ ಟ್ರಾಫಿಕ್​ ಜಾಮ್​​! ಕಾರಣವೇನು ಗೊತ್ತಾ?

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ರಸ್ತೆ ತುಂಬೆಲ್ಲಾ ಸಾಲು ಗಟ್ಟಿ ನಿಂತ ವಾಹನಗಳೇ ಕಾಣುತ್ತಿವೆ. ಸೂಜಿ ಇಡದಷ್ಟು ಜಾಗವಿಲ್ಲದಂತೆ ರಸ್ತೆಯ ಮೇಲೆ ವಾಹನಗಳು ನಿಂತಿವೆ.

    ಮಳೆ ಬಿದ್ದಾಗ ಅಥವಾ ಅಪಘಾತ ಸಂದರ್ಭದಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್​ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲಿ ಈಗ ಬೇರೆ ಕಾರಣಕ್ಕೆ ರಸ್ತೆಯುದ್ಧಕ್ಕೂ ವಾಹನಗಳು ಸಾಲು ಸಾಲು ನಿಂತಿವೆ.

    ದೆಹಲಿ-ಗುರುಗಾಂವ್​​ ಹೆದ್ದಾರಿಯಲ್ಲಿ ಕಾರುಗಳು ಕಿಲೋಮೀಟರ್​ ಗಟ್ಟಲೆ ನಿಂತಿವೆ. ಅಷ್ಟೇ ಅಲ್ಲದೇ ನೋಯ್ಡಾ-ದಿಲ್ಲಿ, ಮೀರತ್​ ಎಕ್ಸ್​ಪ್ರೆಸ್​​ವೇ, ಆನಂದ್​ವಿಹಾರ್, ಪ್ರಗತಿ ಮೈದಾನ ಹೀಗೆ ಎಲ್ಲಾ ರಸ್ತೆಯಲ್ಲೂ ಸಹ ಟ್ರಾಫಿಕ್​ ಜಾಮ್​ ಕಂಡುಬಂದಿದೆ. ಬೆಳಗ್ಗೆಯಿಂದ ಅಲ್ಲೇ ನಿಂತಿರುವ ವಾಹನ ಸವಾರರು ಮಾತ್ರ ಹೈರಾಣಾಗಿದ್ದಾರೆ.

    ಇದಕ್ಕೆ ಕಾರಣ ಇಷ್ಟೇ.. ಅಗ್ನಿಪಥ ಯೋಜನೆ ವಿರೋಧಿಸಿ ಕೆಲವರು ಬುಧವಾರ ಭಾರತ್​ ಬಂದ್​ ಘೋಷಿಸಿದ್ದಾರಂತೆ. ಅದಕ್ಕಾಗಿಯೇ ದೆಹಲಿ ಒಳಗೆ ಪ್ರವೇಶಿಸುವ ಪ್ರತಿಯೊಂದು ವಾಹನ ತಪಾಸಣೆ ಮಾಡುವ ಸಲುವಾಗಿ ಪೊಲೀಸರು ಒಂದೊಂದೇ ವಾಹನವನ್ನು ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕಾಗಿಯೇ ಇಲ್ಲಿ ಟ್ರಾಫಿಕ್​ ಜಾಮ್​ ಸಂಭವಿಸಿದೆ.

    ಈಗಾಗಲೇ ಪ್ರತಿಭಟನೆಯ ಹೆಸರಲ್ಲಿ ಹಿಂಸಾಚಾರ ನಡೆದಿರುವ ಕಾರಣದಿಂದಲೇ ಇದನ್ನು ತಡೆಗಟ್ಟಲು ಪೊಲೀಸರು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. (ಏಜೆನ್ಸೀಸ್​)

    ಬಹುಮತ ಕಳೆದುಕೊಂಡ ​​ಅಧ್ಯಕ್ಷ ಇಮ್ಯಾನ್ಯುಯಲ್​: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್​ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts