ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ರಸ್ತೆ ತುಂಬೆಲ್ಲಾ ಸಾಲು ಗಟ್ಟಿ ನಿಂತ ವಾಹನಗಳೇ ಕಾಣುತ್ತಿವೆ. ಸೂಜಿ ಇಡದಷ್ಟು ಜಾಗವಿಲ್ಲದಂತೆ ರಸ್ತೆಯ ಮೇಲೆ ವಾಹನಗಳು ನಿಂತಿವೆ.
ಮಳೆ ಬಿದ್ದಾಗ ಅಥವಾ ಅಪಘಾತ ಸಂದರ್ಭದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲಿ ಈಗ ಬೇರೆ ಕಾರಣಕ್ಕೆ ರಸ್ತೆಯುದ್ಧಕ್ಕೂ ವಾಹನಗಳು ಸಾಲು ಸಾಲು ನಿಂತಿವೆ.
#WATCH | Heavy traffic at Noida-Delhi Link Road at Chilla border due to security checks by UP Police in wake of Bharat Bandh against #AgnipathScheme
ADCP Noida, Ranvijay Singh says, "We're ensuring that no protester can pass through here, we're coordinating with Delhi Police." pic.twitter.com/SczgaxTn3W
— ANI UP/Uttarakhand (@ANINewsUP) June 20, 2022
ದೆಹಲಿ-ಗುರುಗಾಂವ್ ಹೆದ್ದಾರಿಯಲ್ಲಿ ಕಾರುಗಳು ಕಿಲೋಮೀಟರ್ ಗಟ್ಟಲೆ ನಿಂತಿವೆ. ಅಷ್ಟೇ ಅಲ್ಲದೇ ನೋಯ್ಡಾ-ದಿಲ್ಲಿ, ಮೀರತ್ ಎಕ್ಸ್ಪ್ರೆಸ್ವೇ, ಆನಂದ್ವಿಹಾರ್, ಪ್ರಗತಿ ಮೈದಾನ ಹೀಗೆ ಎಲ್ಲಾ ರಸ್ತೆಯಲ್ಲೂ ಸಹ ಟ್ರಾಫಿಕ್ ಜಾಮ್ ಕಂಡುಬಂದಿದೆ. ಬೆಳಗ್ಗೆಯಿಂದ ಅಲ್ಲೇ ನಿಂತಿರುವ ವಾಹನ ಸವಾರರು ಮಾತ್ರ ಹೈರಾಣಾಗಿದ್ದಾರೆ.
Heavy traffic jam on Sarhaul border at Delhi-Gurugram expressway as Delhi Police begins checking of vehicles in wake of #BharatBandh against #AgnipathScheme, called by some organisations. pic.twitter.com/1VCo5RcHAJ
— ANI (@ANI) June 20, 2022
ಇದಕ್ಕೆ ಕಾರಣ ಇಷ್ಟೇ.. ಅಗ್ನಿಪಥ ಯೋಜನೆ ವಿರೋಧಿಸಿ ಕೆಲವರು ಬುಧವಾರ ಭಾರತ್ ಬಂದ್ ಘೋಷಿಸಿದ್ದಾರಂತೆ. ಅದಕ್ಕಾಗಿಯೇ ದೆಹಲಿ ಒಳಗೆ ಪ್ರವೇಶಿಸುವ ಪ್ರತಿಯೊಂದು ವಾಹನ ತಪಾಸಣೆ ಮಾಡುವ ಸಲುವಾಗಿ ಪೊಲೀಸರು ಒಂದೊಂದೇ ವಾಹನವನ್ನು ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕಾಗಿಯೇ ಇಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ಈಗಾಗಲೇ ಪ್ರತಿಭಟನೆಯ ಹೆಸರಲ್ಲಿ ಹಿಂಸಾಚಾರ ನಡೆದಿರುವ ಕಾರಣದಿಂದಲೇ ಇದನ್ನು ತಡೆಗಟ್ಟಲು ಪೊಲೀಸರು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. (ಏಜೆನ್ಸೀಸ್)
ಬಹುಮತ ಕಳೆದುಕೊಂಡ ಅಧ್ಯಕ್ಷ ಇಮ್ಯಾನ್ಯುಯಲ್: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್ ಸರ್ಕಾರ