ಲುಧಿಯಾನ: ಮನೆಯ ಮುಖ್ಯಸ್ಥನೇ ಕುಟುಂಬುದವರನ್ನೆಲ್ಲ ಕೊಂದು, ಪರಾರಿಯಾಗಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಈ ರೀತಿ ಪರಾರಿಯಾಗುತ್ತಿದ್ದ ವ್ಯಕ್ತಿ ಕೂಡ ಅಪಘಾತಕ್ಕೆ ಒಳಗಾಗಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ರಸ್ತೆ ಬದಿ ಬಿದ್ದಿದ್ದ ಗೋಣಿಚೀಲದಲ್ಲಿ ಕೇಳುತ್ತಿತ್ತು ಮಗು ಅಳುವ ಸದ್ದು! ಚೀಲ ತೆರೆದು ನೋಡಿದಾಗ ಕಾದಿತ್ತು ಅಚ್ಚರಿ
ಪಂಜಾಬ್ನ ಲುಧಿಯಾನ ನಗರದ ಮಯೂರ್ ವಿಹಾರ್ನಲ್ಲಿ ಈ ಘಟನೆ ನಡೆದಿದೆ. ರಾಜೀವ್ ಸೋಂಡಾ ಹೆಸರಿನ ವ್ಯಕ್ತಿ ಆರೋಪಿ. ಆತ ತನ್ನ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗುವನ್ನು ಹರಿತವಾದ ವಸ್ತುವಿನಿಂದ ಇರಿದು ಕೊಂದಿದ್ದಾನೆ. ನಂತರ ತನ್ನ ತಾಯಿಯೊಂದಿಗೆ ಪರಾರಿಯಾಗಿದ್ದಾನೆ.
ಈ ರೀತಿ ಪರಾರಿಯಾಗುವಾಗ ರಾಜೀವ್ ಮತ್ತು ಆತನ ತಾಯಿ ಅಪಘಾತಕ್ಕೆ ಒಳಗಾಗಿದ್ದಾರೆ. ರಾಜೀವ್ ಓಡಿಸುತ್ತಿದ್ದ ಕಾರು ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಆರೋಪಿಯು ಹೊತ್ತಿ ಉರಿಯುತ್ತಿದ್ದ ಗಾಡಿಯನ್ನು ರಸ್ತೆಯಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಬೇರೆ ಹೆಣ್ಣಿನತ್ತ ಗಂಡ ಆಕರ್ಷಿತನಾಗುತ್ತಿದ್ದರೆ ಪತ್ನಿಗಿರುವ ದಾರಿಗಳಾವುವು?
ಘಟನೆ ನಡೆದ ಸ್ಥಳಕ್ಕೆ ಧಾವಿಸಿರುವ ಪೊಲೀಸರು ನಾಲ್ಕೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತವಾದ ಸ್ಥಳದಲ್ಲೂ ಪರಿಶೀಲನೆ ನಡೆಸಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ರಾತ್ರಿ ನಾಯಿ ಕೂಗದೇ ಇದ್ದಿದ್ದರೆ ಅವರ್ಯಾರೂ ಬದುಕುತ್ತಲೇ ಇರಲಿಲ್ಲ; ಪ್ರಾಣವನ್ನೇ ಪಣಕ್ಕಿಟ್ಟ ಗರ್ಭಿಣಿ ನಾಯಿ
ಗ್ಯಾಂಗ್ಸ್ಟರ್ ಸಹೋದರಿಯೆಂದು ಚೀರಾಡಿಕೊಂಡು ಗುಂಡು ಹಾರಿಸಿದ ಬುರ್ಖಾಧಾರಿ ಮಹಿಳೆ