More

    29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

    ಕುಣಿಗಲ್​ (ತುಮಕೂರು): ಕುಣಿಗಲ್​ ನ್ಯಾಯಾಲಯ ಆವರಣದಲ್ಲಿ ಬುಧವಾರ ಅಚ್ಚರಿಯೊಂದು ನಡೆಯಿತು. ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ 29 ವರ್ಷದ ನಂತರ ಕಪ್ಪು ಕೋಟು ಧರಿಸಿ ಕೋರ್ಟ್​ ಕಲಾಪದಲ್ಲಿ ಭಾಗವಹಿಸಿ ಹುತ್ರಿದುರ್ಗ ಹೋಬಳಿಯ ಕಕ್ಷಿದಾರನ ಪರವಾಗಿ ಸಿವಿಲ್​ ಪ್ರಕರಣದಲ್ಲಿ ವಾದ ಮಂಡಿಸಿದರು.

    ರಾಜಕೀಯ ಕ್ಷೇತ್ರ ಪ್ರವೇಶಿಸುವ ಮೊದಲು ಕುಣಿಗಲ್​ನಲ್ಲಿ ವಕೀಲರಾಗಿ ಖ್ಯಾತಿಗಳಿಸಿದ್ದ ಎಸ್​ಪಿಎಂ ನಂತರ ರಾಜಕಾರಣದಲ್ಲಿ ಬಿಜಿಯಾಗಿದ್ದರು, ಬುಧವಾರ ಕೋರ್ಟ್​ಗೆ ಹಾಜರಾಗುತ್ತಾರೆ ಎಂಬ ಸುದ್ದಿ ತಿಳಿದ ಕುಣಿಗಲ್​ ವಕೀಲ ಸಮೂಹ, ಹಿರಿಯ ಸಿವಿಲ್​ ಜಡ್ಜ್​ ನ್ಯಾಯಾಲಯದ ಸಭಾಂಗಣದಲ್ಲಿ ಕಿಕ್ಕಿರಿದಿದ್ದರು.

    1986ರಲ್ಲಿ ಸಕ್ರಿಯ ರಾಜಕೀಯ ಪ್ರವೇಶಿಸಿದ ಎಸ್​.ಪಿ.ಮುದ್ದಹನುಮೇಗೌಡ, 1992ರಲ್ಲಿ ಶಾಸಕರಾಗುವವರೆಗೂ ವಕೀಲರಾಗಿದ್ದರು. ಕುಣಿಗಲ್​, ಬೆಂಗಳೂರು ನ್ಯಾಯಾಲಯಗಳಲ್ಲಿ ವಕೀಲರಾಗಿ ಖ್ಯಾತಿಗಳಿಸಿದ್ದರು. ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಿದ್ದರು.

    ಕುಣಿಗಲ್​ ನ್ಯಾಯಾಲಯದಲ್ಲಿಯೇ ವಕೀಲ ವೃತ್ತಿ ಆರಂಭಿಸಿ, ರಾಜಕೀಯದ ಕಾರಣಕ್ಕೆ ಕಲಾಪದಿಂದ ದೂರವಿದ್ದರೂ ಪಟ್ಟಣದ ಬಸ್​ ನಿಲ್ದಾಣದಲ್ಲಿಯೇ ಇದ್ದ ಅವರ ಕಚೇರಿ ಮುಚ್ಚಿರಲಿಲ್ಲ. ಬಹು ವರ್ಷದ ನಂತರ ಕೋರ್ಟ್​ಗೆ ಹಾಜರಾದರೂ ಅವರ ಮೊನಚು ವಾದದಲ್ಲಿ ವ್ಯತ್ಯಾಸ ಕಾಣಿಸಲಿಲ್ಲ, ನ್ಯಾಯಾಧೀಶರು ಕೂಡ ಸಭಾಂಗಣದಲ್ಲಿಯೇ ಮೆಚ್ಚುಗೆ ಸೂಚಿಸಿದರು.

    29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

    ವಕೀಲನಾಗಿ ಹೆಮ್ಮೆಯಿದೆ. ನಾನು ವೃತ್ತಿ ಆರಂಭಿಸಿದ ಕೊಠಡಿಯಲ್ಲಿಯೇ 29 ವರ್ಷದ ನಂತರ ಮತ್ತೆ ವಾದ ಮಂಡಿಸಿದ್ದು ಸಹಜವಾಗಿ ಖುಷಿ ನೀಡಿದೆ. ಇಲ್ಲಿ ಕೆಲಸ ಮಾಡಿದ್ದರಿಂದಲೇ ಸಾರ್ವಜನಿಕ ಜೀವನದಲ್ಲಿ ನನಗೆ ಯಶಸ್ಸು ಸಿಕ್ಕಿದ್ದು, ಸಿವಿಲ್​ ಪ್ರಕರಣದಲ್ಲಿ ಕಕ್ಷಿದಾರನ ಪರವಾಗಿ ವಾದ ಮಂಡಿಸಿದೆ.
    | ಎಸ್​.ಪಿ.ಮುದ್ದಹನುಮೇಗೌಡ ಮಾಜಿ ಸಂಸದ

    ಕುಣಿಗಲ್​ನಿಂದ ಎಸ್​ಪಿಎಂ ಸ್ಪರ್ಧೆ: ಕುಣಿಗಲ್​ ಕ್ಷೇತ್ರದಲ್ಲಿ ಮುದ್ದಹನುಮೇಗೌಡ ಅವರ ನಡೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಕ್ಷೇತ್ರದಿಂದ ನನಗೆ ಟಿಕೆಟ್​ ಕೊಡಿ ಎಂದು ಕಾಂಗ್ರೆಸ್​ ಹೈಕಮಾಂಡ್​ ಬಳಿ ಎಸ್​ಪಿಎಂ ಈಗಾಗಲೇ ಪ್ರಸ್ತಾವನೆ ಇಟ್ಟಿದ್ದಾರೆ. ಮದುವೆ, ಸಾವು-ನೋವು ಸೇರಿ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕ್ಷೇತ್ರದಲ್ಲಿ ಸಂಚರಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

    ಮಗನನ್ನು ಅಂಗನವಾಡಿಗೆ ಸೇರಿಸಿದ ಕೊಪ್ಪಳದ ಕುಷ್ಟಗಿ ಜಡ್ಜ್! ಕಾರಣ ಕೇಳಿದ್ರೆ ಮೆಚ್ಚಿಕೊಳ್ತೀರಿ…

    ನಾನು ಇರೋವರೆಗೂ ರಂಗನಾಥ್​ ಅವರೇ ಕುಣಿಗಲ್​ನ ಕಾಂಗ್ರೆಸ್​ ಅಭ್ಯರ್ಥಿ ಎಂದ ಡಿಕೆಸು​ ವಿರುದ್ಧ ಎಸ್​ಪಿಎಂ ಗರಂ

    ನಂಜನಗೂಡಲ್ಲಿ ಅಪ್ರಾಪ್ತನ ಜತೆ 3 ಮಕ್ಕಳ ತಾಯಿ ಲವ್ವಿಡವ್ವಿ! ಇವಳ ಆಸೆ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಹೊಲದಲ್ಲಿ ಮಗುವನ್ನ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಬೀದಿನಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts