ಬೆಂಗಳೂರು: ಶೀಘ್ರದಲ್ಲೇ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಡ್ತೀನಿ ಎಂದಿದ್ದ ಮೋಹಕ ತಾರೆ ರಮ್ಯಾ, ಕೊನೆಗೂ ಆ ಗುಡ್ನ್ಯೂಸ್ ಏನೆಂದು ಬಹಿರಂಗ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳ ಮನದಲ್ಲಿ ಸಂತಸ ಮನೆಮಾಡಿದೆ. ರಮ್ಯಾರನ್ನ ಮರು ಸ್ವಾಗತಿಸಲು ವೇದಿಕೆ ಸಜ್ಜುಗೊಳಿಸುತ್ತಾ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ರಾಜಕೀಯದಲ್ಲಿ ರಮ್ಯಾ ಟಾರ್ಗೆಟ್ ಆಗಿದ್ದಾರೆ. ಡಿಕೆಶಿಗೆ ಬುದ್ಧಿಮಾತು ಹೇಳಿದ ರಮ್ಯಾಗೆ ಡಿಕೆಶಿ ಬೆಂಬಲಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಈ ನಡುವೆ ರಾಜಕೀಯದಿಂದ ಬೇಸತ್ತಂತಿರುವ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುವ ಸುಳಿವು ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಆಸೆಯನ್ನೂ ಹೊರಹಾಕಿದ್ದಾರೆ.
‘ಒಟ್ಟಿಗೆ ನಟಿಸೋಣ ರಕ್ಷಿತ್’ ಅಂತ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ರಮ್ಯಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ‘ದಿಗ್ವಿಜಯ ನ್ಯೂಸ್’ ಜೊತೆ ಮಾತನಾಡುತ್ತಾ ‘ಶೀಘ್ರವೇ ಗುಡ್ ನ್ಯೂಸ್ ಕೊಡ್ತೀನಿ’ ಅಂದಿದ್ರು. ಆ ಸಿಹಿ ಸುದ್ದಿ ಸಿನಿಮಾಗೆ ಕಮ್ ಬ್ಯಾಕ್ ಆಗೋದಾ? ಎಂಬ ಚರ್ಚೆಯೂ ಶುರುವಾಗಿದೆ.
ಡಿಕೆಶಿಗೆ ರಮ್ಯ ಬುದ್ಧಿಮಾತು: “ಪಕ್ಷಾತೀತವಾಗಿ ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಕೆಲವರ ಕುಟುಂಬಗಳಲ್ಲಿ ವಿವಾಹವೂ ನಡೆಯುತ್ತದೆ. ನನಗೆ ಆಶ್ಚರ್ಯವಾಗಿದೆ ಡಿ.ಕೆ. ಶಿವಕುಮಾರ್ ಅವರೇ, ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ?” ಎಂದು ಪಕ್ಷದ ಅಧ್ಯಕ್ಷರಿಗೆ ನಿನ್ನೆ ಸಾಮಾಜಿಕ ಜಾಲತಾಣದ ಮೂಲಕ ರಮ್ಯಾ ಬುದ್ಧಿವಾದ ಹೇಳಿದ್ದರು. ಇದು ಡಿಕೆಶಿ ಅಭಿಮಾನಿಗಳನ್ನು ಕೆರಳಿಸಿತ್ತು.
ಗಂಡನ ಎದುರೇ ಮಹಿಳೆಯನ್ನ ವಿವಸ್ತ್ರಗೊಳಿಸಿ ಗ್ಯಾಂಗ್ರೇಪ್ಗೆ ಯತ್ನ! ಗೃಹ ಸಚಿವರ ಊರಲ್ಲೇ ಹೇಯಕೃತ್ಯ