ಬೆಂಗಳೂರು: ಚಂದನವನದ ‘ರಾಜಕುಮಾರ’, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ‘ಅಪ್ಪು’, ನಟ ದಿ. ಪುನೀತ್ ರಾಜ್ಕುಮಾರ್ ಅವರ ಹೆಸರು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಆಗಲಿದೆ.
ಈ ಕುರಿತು ಇಂದು(ಸೋಮವಾರ) ಬೆಳಗಾವಿಯಲ್ಲಿ ಆರಂಭವಾದ ವಿಧಾನಸಭೆ ಅಧಿವೇಶನಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು. ಪುನೀತ್ ರಾಜ್ಕುಮಾರ್ ನಟನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದರು.
ಅ.29ರಂದು ಪುನೀತ್ ರಾಜ್ಕುಮಾರ್ ನಿಧನರಾದರು. ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕರುನಾಡಿಗೆ ದೊಡ್ಡ ನೋವನ್ನೇ ತಂದೊಡಿತು. ಇಂದಿಗೂ ಅಪ್ಪುಗಾಗಿ ಅಭಿಮಾನಿಗಳು ಮನ ಮಿಡಿಯುತ್ತಲೇ ಇದೆ. ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ದಟ್ಟವಾಗಿ ಕೇಳಿಬಂತು. ಈ ಕುರಿತು ಪ್ರತಿಕ್ರಿಯಿಸಿದ್ದ ಸಹೋದರ ಶಿವರಾಜ್ಕುಮಾರ್, ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ.. ಯಾವ ಶ್ರೀ ಕೊಟ್ಟರು ದೊಡ್ಡದ್ದಲ್ಲ. ಅವನು ಅಮರ ಶ್ರೀ.. ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ. ಅವನು ಎಲ್ಲರ ಮನಸ್ಸಿನ್ನೂ ಶ್ರೀ ಆಗಿದ್ದಾನೆ, ಅದಕ್ಕಿಂದ ದೊಡ್ಡದು ಬೇರೆ ಯಾವುದೂ ಇಲ್ಲ’ ಎಂದಿದ್ದರು. ಆದರೂ ಅಭಿಮಾನಿಗಳ ಆಗ್ರಹ ನಿಂತಿಲ್ಲ.
ಅಪ್ಪು ಅವರ ಸ್ಮರಣಾರ್ಥ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನ.16ರಂದು ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿದ್ದರು. ಡಾ.ರಾಜ್ಕುಮಾರ್ ಅವರ ಸ್ಮಾರಕದಂತೆ ಪುನೀತ್ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಇದೇ ವೇಳೆ ಸಿಎಂ ಹೇಳಿದ್ದರು. ಇದೀಗ ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ಹೆಸರನ್ನು ಶಿಫಾರಸು ಮಾಡುವುದಾಗಿ ಅಧಿವೇಶನಲ್ಲಿ ತಿಳಿಸಿದ್ದಾರೆ. ಅತ್ತ ಅಪ್ಪು ಅಭಿಮಾನಿಗಳು ಆದಷ್ಟು ಬೇಗ ಹೆಸರನ್ನು ಶಿಫಾರಸು ಮಾಡಿ. ‘ಪದ್ಮಶ್ರೀ’ ಗೌರವ ಪುನೀತ್ ಸರ್ ಮುಡಿಗೇರುವ ದಿನಕ್ಕಾಗಿ ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಬೊಮ್ಮಾಯಿ ಘೋಷಣೆ
ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ