ಚಾಮರಾಜನಗರ: ಇತ್ತೀಚಿಗೆ ಸುರಿದ ಸತತ ಮಳೆಯಿಂದಾಗಿ ಹಚ್ಚ ಹರಿಸಿನಿಂದ ಕಂಗೊಳಿಸುತ್ತಿರುವ ಬಿಆರ್ಟಿ ಅರಣ್ಯ ಪ್ರದೇಶದ ಬೆಟ್ಟಗಳು ಈಗ ನೀಲಿಮಯವಾಗಿವೆ! ಬೆಟ್ಟ-ಗುಡ್ಡಗಳ ತುಂಬೆಲ್ಲಾ ನೀಲಕುರಂಜಿ ಹೂಗಳು ನಳನಳಿಸುತ್ತಿದ್ದು, ನೋಡುಗರ ಮನಸೆಳೆಯುತ್ತಿವೆ.
ಪುಣಜನೂರು, ಬೈಲೂರು ವಲಯದ ಗಿರಿಗಳಲ್ಲಿ ಜೈವಿಕ ಗಡಿಯಾರಕ್ಕೆ ಅನುಸಾರವಾಗಿ 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ನೀಲಕುರಂಜಿ ಸುಂದರ ಸೊಬಗನ್ನು ಸೃಷ್ಟಿಸಿದೆ.
ಈ ಬೆಟ್ಟಗಳು ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರಣಕ್ಕೆ ಪ್ರವಾಸಿಗರಿಗೆ ತೆರಳಲು ಅನುಮತಿ ಇಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಫೋಟೋ ತೆಗೆದಿದ್ದಾರೆ. ಅರಣ್ಯದ ಸೊಬಗನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ ಎಂದು ಡಿಸಿಎಫ್ಒ ಸಂತೋಷ್ಕುಮಾರ್ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಮಂದಾಲಪಟ್ಟಿ ಮತ್ತು ಸೋಮವಾರಪೇಟೆ ತಾಲೂಕಿನ ಕೋಟೆ ಬೆಟ್ಟದಲ್ಲಿ ಕೆಲ ತಿಂಗಳ ಹಿಂದೆ ನೀಲಕುರಂಜಿ ಹೂ ಅರಳಿತ್ತು. ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬಂದಿತ್ತು.
ಕೋರ್ಟ್ ಮೆಟ್ಟಿಲೇರಿದ ‘ಸೋಜುಗಾದ ಸೂಜು ಮಲ್ಲಿಗೆ’ ವಿವಾದ: ಜಿಜಿವಿವಿ ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ
ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ