ಕಲಬುರಗಿ: ಕಲಬುರಗಿಯ ಬಸ್ ನಿಲ್ದಾಣದ ಬಳಿ ನಿನ್ನೆ ಗುರುವಾರ ನಡೆದ ನಡೆದ ಭೀಕರ ಕೊಲೆ ಪ್ರಕರಣದ ಆರೋಪಿಗಳ ಗುರುತು ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಾನಸ್ಟೇಬಲ್ ಮಗನಾಗಿರುವ 25 ವರ್ಷದ ಅಭಿಷೇಕ್ ನಂದೂರ್ನ ಕೊಲೆ ಮಾಡಲಾಗಿತ್ತು. ಜಿಮ್ಗೆ ಹೋಗಲು ಅಭಿಷೇಕ, ಮನೆಯಿಂದ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ತಮ್ಮ ಪಲ್ಸರ್ ಬೈಕ್ನಿಂದ ಡಿಕ್ಕಿ ಹೊಡೆಸಿದ್ದಾರೆ. ಅಭಿಷೇಕ್ ಬಿದ್ದಾಗ ಗ್ಯಾಂಗ್ ಒಂದು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ. ಹಬ್ಬದ ಖರೀದಿಗೆ ಬಂದವರ ಎದುರೇ ಈ ಭೀಕರವಾಗಿ ಕೊಚ್ಚಿಕೊಚ್ಚಿ ಕೊಲೆ ನಡೆದಿದ್ದು ಇವೆಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೆಲವರು ಈ ದೃಶ್ಯವನ್ನು ಮೊಬೈಲ್ನಲ್ಲಿ ಕೂಡ ಸೆರೆ ಮಾಡಿಕೊಂಡಿದ್ದಾರೆ!
ಇದರ ಬೆನ್ನತ್ತಿ ಹೋಗಿದ್ದ ಪೊಲೀಸರಿಗೆ ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ವಿಚಿತ್ರ ಎಂದರೆ ಪೊಲೀಸ್ ಕಾನ್ಸ್ಟೆಬಲ್ ಅವರ ಪುತ್ರನನ್ನು ಕೊಲೆ ಮಾಡಿರುವುದು ಪೊಲೀಸ್ ಹೆಡ್ ಕಾನ್ಸಟೇಬಲ್ ಮಗ ಮತ್ತು ಅವನ ಗ್ಯಾಂಗ್ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಮೃತುಜಾ , ಸಾಗರ್ , ಆಕಾಶ್ , ಶುಭಮ್ ಟೀಮ್ ಸೇರಿ ಅಭಿಷೇಕ್ ಕೊಲೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಮಕ್ಕಳಿಂದಲೆ ಅಪಾರಾಧ ಕೃತ್ಯ ಎಸಗಿರುವುದು ಸ್ಥಳೀಯರಲ್ಲಿ ಆತಂಕ ತಂದಿದೆ.
ಕೊಲೆಯಾಗಿದ್ದ ಅಭಿಷೇಕ್ ಈ ಹಿಂದೆ ಸಾಗರ್ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆಗೆ ಒಳಗಾಗಿದ್ದ ಸಾಗರ್ ಮತ್ತು ಅವನ ಗುಂಪಿನವರು ಅಭಿಷೇಕ್ ಕೊಲೆ ಮಾಡೋದಾಗಿ ಹೇಳಿದ್ದರು. ಅದರಂತೆ ಅಭಿಷೇಕ್ ಬರುವುದನ್ನೇ ಕಾಯುತ್ತಿದ್ದ ಅವರು, ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಹಂತಕರಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಸುಂದರಿಯರ ಜತೆ ಪಾರ್ಟಿಗೆ ಹೋಗಿ ಎಲ್ಲವನ್ನೂ ಕಳೆದುಕೊಂಡ ಯುವಕರು! ಬಟ್ಟೆಯೂ ಸಿಗದೇ ಗೋಳಾಡಿದರು!
ಮೂಢನಂಬಿಕೆಗೆ ಬಲಿಯಾದ 11 ವರ್ಷದ ಕಂದ: ಚಿಕಿತ್ಸೆ ಬದಲು ಕುರಾನ್ ಕೇಳಿಸಿದ ಅಪ್ಪ ಅರೆಸ್ಟ್