ತುಮಕೂರು: ಬೇಸಿಗೆ ಬಂದರೆ ಸಾಕು.. ಹಳ್ಳಿಯ ಕೆರೆ-ನದಿಗಳಲ್ಲಿ ಈಜಿಗೆ-ಮೋಜಿಗೆ ಇಳಿಯುವವರ ಸಂಖ್ಯೆ ಬಹಳ. ಹೀಗೆ ಮೋಜೇ ಮೃತ್ಯುವಾಗಿ ಯುವಕರು ಪ್ರಾಣ ಕಳೆದುಕೊಂಡ ಪ್ರಕರಣಗಳು ಪ್ರತಿವರ್ಷ ಒಂದಷ್ಟು ವರದಿಯಾಗುತ್ತಲೇ ಇರುತ್ತವೆ. ಇದೀಗ ಬೇಸಿಗೆ ಇನ್ನೇನು ಆರಂಭವಾಗಲಿದೆ ಎನ್ನುವಾಗಲೇ ಮೋಜಿನಿಂದಾಗಿ ಸಾವೊಂದು ಸಂಭವಿಸಿದೆ.
ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ, ತಿಪಟೂರು ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದ ಗಿರೀಶ್ (26) ಮೃತಪಟ್ಟವರು. ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಸೆಕೆಯಲ್ಲಿ ಮೋಜಿಗಾಗಿ ಚಿಕ್ಕನಾಯಕನಹಳ್ಳಿಯ ಕೆರೆಗೆ ಹಾರಿ ಈಜುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಹಾರದಲ್ಲಿ ಹೆಂಡತಿ, ದೆಹಲಿಯಲ್ಲಿ ಗರ್ಲ್ಫ್ರೆಂಡ್! 20ರ ಯುವತಿಯೊಂದಿಗೆ 40ರ ಡ್ರೈವರ್ ರಿಲೇಷನ್ಶಿಪ್!
ಕಳ್ಳತನ ಕಲಿಯಲು ಯೂಟ್ಯೂಬ್ ನೋಡಿದ- ಚಿನ್ನದಂಗಡಿಗೆ ಕನ್ನ ಹಾಕಿ ಸಿಕ್ಕಿಬಿದ್ದ ಷೇರುದಾರ!