ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ನೈಋತ್ಯ ರ್ರೈಲ್ವೆ ವಲಯ ಬೇಸಿಗೆ ವಿಶೇಷ ರೈಲು ಸಂಚಾರ ಪ್ರಾರಂಭಿಸಿದೆ.
ಬೆಳಗಾವಿ -ಗೊಮತಿ ನಗರ – ಬೆಳಗಾವಿ ಎಕ್ಸ್ಪ್ರೆಸ್ ಸ್ಪೇಷಲ್ ರೈಲು (8 ಟ್ರಿಪ್) ಸಂಚಾರ ಪ್ರಾರಂಭಿಸಿದೆ. ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿ, ವಿಜಯಪುರ, ಸೊಲ್ಲಾಪುರ, ದೌಂಡ್, ಮನ್ಮಾಡ್, ಭುಸ್ವಾಲ್, ಇಟಾರಸಿ, ಕಾನಪುರ ಸೆಂಟ್ರಲ್, ಐಸ್ಭಾಗ್ ಮೂಲಕ ಸಂಚರಿಸಲಿದೆ.
ಬೆಳಗಾವಿಯಿಂದ ಮೇ 12 ರಿಂದ ಜೂನ್ 30ರವರೆಗೆ ಮಧ್ಯಾಹ್ನ 12.30ಕ್ಕೆ ಹೊರಡುವ ಈ ರೈಲು, ಪ್ರಯಾಣ ಆರಂಭದ ಮೂರನೇ ಬೆಳಗ್ಗೆ 7.45ಕ್ಕೆ ಗೊಮತಿ ನಗರ ತಲುಪಲಿದೆ. ಮೇ 14 ರಿಂದ ಜುಲೈ 2ರವರೆಗೆ ಗೋಮತಿ ನಗರದಿಂದ ರಾತ್ರಿ 8.30ಕ್ಕೆ ಹೊರಡುವ ರೈಲು, ಸಂಚಾರ ಆರಂಭದ ಮೂರನೇ ದಿನ ಮಧ್ಯಾಹ್ನ 3.15ಕ್ಕೆ ಬೆಳಗಾವಿಗೆ ತಲುಪಲಿದೆ.
ಸಂಚಾರ ರದ್ದು ‘ ನಾಗವಂಗಲಾ – ಅಜ್ಜಂಪುರ ಯಾರ್ಡ್ ಮಧ್ಯೆ ಕೈಗೊಂಡಿರುವ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೇ 10, 17, 24, 31 ಮತ್ತು ಜೂ. 21ರಂದು ಎಸ್ಎಸ್ಎಸ್ಎಸ್ ಹುಬ್ಬಳ್ಳಿ – ಅರಸಿಕೆರೆ ಎಕ್ಸ್ಪ್ರೆಸ್ ರೈಲು ಹಾಗೂ 11, 18, 255 ಮತ್ತು ಜೂ. 1 ಹಾಗೂ 22ರಂದು ಅರಸಿಕೆರೆ – ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಸಂಚಾರ ರದ್ದುಗೊಳಿಸಲಾಗಿದೆ.