ಮುಂಬೈ: ಮಹಾರಾಷ್ಟ್ರದ ನಾಂದೇಡ್ ಮೂಲದ ಸರ್ಕಾರಿ ಉದ್ಯೋಗಿಯೊಬ್ಬರು ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ್ದಾರೆ. ಅಂದಹಾಗೆ ಇದಕ್ಕೆ ಕಾರಣ ಪೆಟ್ರೋಲ್ ದರ ಜಾಸ್ತಿ ಆಗಿರುವುದಲ್ಲ. ಉದ್ಯೋಗಿಯ ನೋವು ಬೇರೇನೆ ಇದೆ. ಅದು ಏನೆಂದು ತಿಳಿಯಲು ಮುಂದೆ ಓದಿ.
ಸತೀಶ್ ದೇಶ್ಮುಖ್ ಎಂಬುವರು ತಮ್ಮ ಬಾಸ್ ಅನುಮತಿಯನ್ನು ಕೋರಿದ್ದಾರೆ. ದೇಶ್ಮುಖ್ ಅವರು ನಾಂದೇಡ್ ಜಿಲ್ಲಾಧಿಕಾರಿ ಕಚೇರಿಯ ಉದ್ಯೋಗ ಖಾತರಿ ಯೋಜನಾ ವಿಭಾಗದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರಬರೆದಿದ್ದಾರೆ.
ಇದನ್ನೂ ಓದಿರಿ: ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್… ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ… ಏನು ಮಾಡಲಿ?
ದೇಶ್ಮುಖ್ ಕೊಟ್ಟಿರುವ ಕಾರಣ ಹೀಗಿದೆ… ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಪ್ರತಿದಿನ ಕೆಲಸಕ್ಕೆ ತೆರಳಲು ಅನುಕೂಲಕರ ಮಾರ್ಗವನ್ನು ನೋಡುತ್ತಿದ್ದೇನೆ. ಸದ್ಯ ನನ್ನ ವೈದ್ಯಕೀಯ ಸ್ಥಿತಿಯಿಂದಾಗಿ ಬೈಕ್ ಚಲಾಯಿಸಲು ತುಂಬಾ ಕಷ್ಟವಾಗುತ್ತಿದೆ. ಕಾರು ತೆಗೆದುಕೊಂಡು ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನೊಂದು ಕುದುರೆಯನ್ನು ಖರೀದಿಸಲು ನಿರ್ಧರಿಸಿದ್ದೇನೆ. ಹೀಗಾಗಿ ನನಗೆ ಅನುಮತಿ ನೀಡಿ ಎಂದು ದೇಶ್ಮುಖ್ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ದೇಶ್ಮುಖ್ ಅವರ ಪತ್ರ ಜಿಲ್ಲಾಧಿಕಾರಿ ಅಂಗಳದಲ್ಲಿದ್ದು, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲವಿದೆ. ಆದರೆ, ಅವರ ಪತ್ರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶ್ಮುಖ್ ಬೆಂಬಲಕ್ಕೆ ನಿಂತಿರುವ ಅನೇಕರು ಅನುಮತಿ ಕೊಟ್ಟುಬಿಡಿ ಎಂದಿದ್ದಾರೆ. (ಏಜೆನ್ಸೀಸ್)
18ರ ಯುವತಿಯ ಮರ್ಯಾದಾ ಹತ್ಯೆ : ಕೋರ್ಟ್ ಆದೇಶವಿದ್ದರೂ ರಕ್ಷಿಸಲು ವಿಫಲರಾದ ಪೊಲೀಸರು
ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದ ಸ್ಟಾರ್ ನಟನ ಹೆಸರು ಕೇಳಿ ಬೆರಗಾದ ಸ್ಪರ್ಧಿಗಳು..!
ನ್ಯೂಜಿಲೆಂಡ್ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ