ಪ್ರಯಾಗ್ ರಾಜ್: ಕುಂಭ ಮೇಳದಲ್ಲಿ ಟೆಂಟ್ ಹಾಕಿ ಟೋಪಿ ಹಾಕಲು ಯತ್ನಿಸಿದ ‘ಲಲ್ಲೂಜಿ ಆ್ಯಂಡ್ ಸನ್ಸ್’ ಈಗ ಸಿಕ್ಕಿಬಿದ್ದಿದ್ದಾರೆ. ಕುಂಭ ಮೇಳದ ಬಿಲ್ಲಲ್ಲೂ ಕೋಟಿಗಟ್ಟಲೆ ಲೂಟಿ ಮಾಡಲು ಹೋಗಿದ್ದ ಈ ಹನ್ನೊಂದು ಮಂದಿ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.
ಹೌದು.. ಕುಂಭ ಮೇಳದ ಸಂದರ್ಭದಲ್ಲಿ ಟೆಂಟ್, ಫರ್ನಿಚರ್ ಮತ್ತು ಲೌಡ್ ಸ್ಪೀಕರ್ ಒದಗಿಸುತ್ತಿದ್ದ ‘ಲಲ್ಲೂಜಿ ಆ್ಯಂಡ್ ಸನ್ಸ್’, ಅದರ ಸಲುವಾಗಿ ನೀಡುವ ಬಿಲ್ನಲ್ಲಿ ಫೋರ್ಜರಿ ಮಾಡಿ ಕೋಟಿಗಟ್ಟಲೆ ಲೂಟಿ ಮಾಡಲು ಯತ್ನಿಸಿದ್ದಕ್ಕೆ ಈಗ ಕೇಸು ಜಡಿಯಲಾಗಿದೆ. 2019ರ ಕುಂಭಮೇಳಕ್ಕೆ ಟೆಂಟ್ ಇತ್ಯಾದಿ ಒದಗಿಸಿದ ಬಾಬ್ತಿನ ಬಿಲ್ನಲ್ಲಿ ಬರೋಬ್ಬರಿ 109.85 ಕೋಟಿ ರೂಪಾಯಿ ಗುಳುಂ ಮಾಡಲೆತ್ನಿಸಿದ ಈ ಸಂಸ್ಥೆ ಮೇಲೆ ಈಗ ಪ್ರಯಾಗ್ರಾಜ್ನ ದರ್ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದಶಕಗಳಿಂದ ಮಹಾಕುಂಭ, ಕುಂಭ ಮತ್ತು ಮಾಘ ಮೇಳಗಳಲ್ಲಿ ಸೌಲಭ್ಯ ಒದಗಿಸುತ್ತಿದ್ದ ಈ ಸಂಸ್ಥೆ 2017ರಿಂದ 2019ರ ಜುಲೈ 6ರ ವರೆಗೆ ನೀಡಿದ್ದ ಟೆಂಟ್ ಇತ್ಯಾದಿ ಸೌಕರ್ಯಕ್ಕೆ 196.24 ಕೋಟಿ ರೂಪಾಯಿ ಬಿಲ್ ಸಲ್ಲಿಸಿತ್ತು. ಆದರೆ ಅಸಲಿ ಬಿಲ್ 86.38 ಕೋಟಿ ರೂಪಾಯಿ ಮಾತ್ರ ಎಂದು ಕುಂಭ ಮೇಳದ ಹೆಚ್ಚುವರಿ ಅಧಿಕಾರಿ ದಯಾನಂದ ಪ್ರಸಾದ್ ಪತ್ತೆ ಹಚ್ಚಿದ್ದರು.
ಮೋಸ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಹನ್ನೊಂದು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಾತ್ರವಲ್ಲ ಪ್ರಯಾಗ್ ರಾಜ್ ಮೇಳ ಪ್ರಾಧಿಕಾರವು ಮುಂದಿನ ಐದು ವರ್ಷಗಳ ಕಾಲ ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ‘ಈ ಸಂಸ್ಥೆಯು ನಕಲಿ ಬಿಲ್ಗಳನ್ನು ಸೃಷ್ಟಿಸಿ ಸಲ್ಲಿಸಿದ್ದು, ಎಲ್ಲ ಇಲಾಖೆಗಳಿಂದ ಇವರಿಗೆ ಪಾವತಿಯಾಗಿರುವ ಮೊತ್ತ 171 ಕೋಟಿ ರೂಪಾಯಿ’ ಎಂದು ಪ್ರಯಾಗ್ರಾಜ್ ಮೇಳ ಪ್ರಾಧಿಕಾರದ ಅಧಿಕಾರಿ ಕಿರಣ್ ಆನಂದ್ ತಿಳಿಸಿದ್ದಾರೆ. ಮಾತ್ರವಲ್ಲ ಈ ಸಂಬಂಧ ಮಧ್ಯಸ್ಥಿಕೆಗೆ ಮುಂದಾಗಿರುವ ಲಲ್ಲೂಜಿ ಆ್ಯಂಡ್ ಸನ್ಸ್ ಅದಕ್ಕಾಗಿ ಸಲ್ಲಿಸಿರುವ ದಾಖಲೆಗಳಲ್ಲೂ ಅಧಿಕಾರಿಗಳ ಸಹಿ ನಕಲು ಮಾಡಿರುವುದು ಕಂಡು ಬಂದಿದೆ ಎಂದು ಕಿರಣ್ ತಿಳಿಸಿದ್ದಾರೆ. (ಏಜೆನ್ಸೀಸ್)
ಶಿವಮೊಗ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಭೀಕರ ಗ್ಯಾಂಗ್ರೇಪ್: ನಿರ್ಭಯಾ, ಅರುಣಾ ಶಾನುಭಾಗ್ ಪ್ರಕರಣ ಹೋಲಿಕೆ
ತೃತೀಯ ಲಿಂಗಿ ಅಪ್ಪನಿಗೆ ಅಂಡಾಣು ನೀಡಿ ಮಗು ನೀಡ ಹೊರಟಿದ್ದಾಳೆ ಸಲಿಂಗಿ ಮಗಳು!
50 ರೂ ಸಂಭಾವನೆ ಪಡೆಯುತ್ತಿದ್ದ ಶಾರುಖ್ ಖಾನ್ ಕಡೆಯಿರುವ ಈ ನಾಲ್ಕು ಪ್ರಾಪರ್ಟಿ ಬೆಲೆ ಈಗ ಸಾವಿರ ಕೋಟಿ!?