ನವದೆಹಲಿ: ಸದಾ ಪಿತೂರಿ ನಡೆಸುವ ಪಾಕಿಸ್ತಾನಕ್ಕೆ ಸ್ವಲ್ಪ ದಿನಗಳ ಹಿಂದೆ ಭಾರತ ಒಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಭಾರತದಲ್ಲಿರುವ ಪಾಕ್ನ ಹೈಕಮೀಷನ್ ಮೂಲಕ ಬೇಹುಗಾರಿಕೆ ನಡೆಸುವುದು, ಹಾಗೇ ತಮ್ಮ ದೇಶದಲ್ಲಿರುವ ಭಾರತದ ಹೈಕಮಿಷನ್ ಅಧಿಕಾರಿಗಳು, ರಾಯಭಾರಿ ಅಧಿಕಾರಿಗಳನ್ನು ಅಪಹರಣ ಮಾಡುವಂತಹ ನೀಚ ಕೆಲಸದಲ್ಲೇ ತೊಡಗಿಕೊಂಡಿದೆ ಪಾಕಿಸ್ತಾನ.
ಈ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಹೇಳಿದ್ದ ಭಾರತ, ನವದೆಹಲಿಯಲ್ಲಿ ನಿಮ್ಮ ಹೈಕಮಿಷನ್ನಲ್ಲಿರುವ ಅರ್ಧದಷ್ಟು ಸಿಬ್ಬಂದಿಯನ್ನು ಒಂದು ವಾರದೊಳಗೆ ವಾಪಸ್ ಕರೆಸಿಕೊಳ್ಳಿ ಎಂದು ಖಡಕ್ ಆಗಿ ಹೇಳಿತ್ತು. ಹಾಗೇ, ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್ ಮತ್ತು ರಾಯಭಾರಿ ಕಚೇರಿಯಲ್ಲಿ ಅರ್ಧದಷ್ಟು ಸಿಬ್ಬಂದಿಯನ್ನು ನಾವು ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಸೂಚನೆಯಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ: ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ….
ಅದರ ಅನ್ವಯ ಪಾಕಿಸ್ತಾನದಿಂದ 38 ಭಾರತೀಯ ಅಧಿಕಾರಿಗಳು ದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ಅವರೆಲ್ಲ ಎರಡು ಬಸ್ ಮತ್ತು ಒಂದು ಟ್ರಕ್ ಮೂಲಕ ವಾಘಾ ಗಡಿಯನ್ನು ತಲುಪಿದ್ದಾರೆ. ಈ 38 ಅಧಿಕಾರಿಗಳಲ್ಲಿ 6 ಮಂದಿ ರಾಯಭಾರಿ ಕಚೇರಿ ಸಿಬ್ಬಂದಿಯಾಗಿದ್ದಾರೆ.
ಅಷ್ಟೇ ಅಲ್ಲ, ಭಾರತದಲ್ಲಿರುವ ಪಾಕ್ ಹೈಕಮಿಷನ್ನ ಸುಮಾರು 143 ಅಧಿಕಾರಿಗಳೂ ಕೂಡ ತಮ್ಮ ದೇಶಕ್ಕೆ ವಾಪಸ್ ಆಗಿದ್ದಾರೆ. (ಏಜೆನ್ಸೀಸ್)
ಕೋವಿಡ್ಗೆ ಭಾರತದಲ್ಲಿ ಸಿದ್ಧವಾಗಿದೆ ಕೊವಾಕ್ಸಿನ್ ಚುಚ್ಚುಮದ್ದು, ನಾಳೆಯಿಂದ ಮಾನವರ ಮೇಲೆ ಪ್ರಯೋಗ