More

    16 ವರ್ಷದ ವಿದ್ಯಾರ್ಥಿ ಕ್ಲಾಸ್​​ನಲ್ಲೇ ನೇಣು ಹಾಕಿಕೊಂಡು ಸಾವು!; ಕಾಲೇಜಿನವರ ಹಿಂಸೆಯೇ ಕಾರಣ ಎಂದು ಪಾಲಕರ ಆರೋಪ

    ತೆಲಂಗಾಣ: ಹದಿನಾರು ವರ್ಷದ ಬಾಲಕನೊಬ್ಬ ತರಗತಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ಪುತ್ರನ ಆತ್ಮಹತ್ಯೆಗೆ ಶಾಲೆಯವರ ಹಿಂಸೆಯೇ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ. ತೆಲಂಗಾಣದ ನರಸಿಂಗಿಯಲ್ಲಿ ಈ ಪ್ರಕರಣ ನಡೆದಿದೆ.

    ಈತ ನರಸಿಂಗಿಯಲ್ಲಿನ ಶ್ರೀಚೈತನ್ಯ ಜೂನಿಯರ್​ ಕಾಲೇಜಿನಲ್ಲಿ ಫಸ್ಟ್​ ಇಂಟರ್​ಮೀಡಿಯೇಟ್ ವಿದ್ಯಾರ್ಥಿಯಾಗಿದ್ದ. ತಮ್ಮ ಮಗನ ಸಾವಿಗೆ ಜೂನಿಯರ್​ ಕಾಲೇಜಿನ ಆಡಳಿತ ಮಂಡಳಿಯ ಹಿಂಸೆಯೇ ಕಾರಣ ಎಂದು ಪಾಲಕರು ಆರೋಪಿಸಿದ್ದರಿಂದ ಕಾಲೇಜಿನ ವಿರುದ್ಧ ಕೇಸು ದಾಖಲಾಗಿದೆ.

    ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಈ ಪ್ರಕರಣ ಕಾಲೇಜಿನಲ್ಲಿ ನಿನ್ನೆ ನಡೆದಿತ್ತು. ಮತ್ತೊಂದೆಡೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿನ ವೈದ್ಯಕೀಯ ಕಾಲೇಜೊಂದರ ಯುವತಿ ಅಲ್ಲಿನ ತನ್ನ ಸೀನಿಯರ್ಸ್​ ಹಿಂಸೆ ತಾಳಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಆ ವೈದ್ಯನನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಿಗೇ ಇಂಥದ್ದೊಂದು ಆತ್ಮಹತ್ಯೆ ಸಂಭವಿಸಿರುವುದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    16 ಸಲ ಚುಚ್ಚಿಕೊಂದ ಹುಚ್ಚುಪ್ರೇಮಿ; ಪ್ರೇಯಸಿಯ ಕೊಲ್ಲಲೆಂದೇ 2 ಚಾಕುಗಳನ್ನು ಖರೀದಿಸಿದ್ದ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts