ಕಾರವಾರ: ಪೋಲಿಯೋ ನಿಮೂಲನೆಗೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದರು.
ಸರ್ಕಾರಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಡಿಎಚ್ಒ ಡಾ.ಶರದ್ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಡಾ.ರಮೇಶ ರಾವ್, ಸುನೀಲ ಸೋನಿ, ಅನಮೋಲ ರೇವಣಕರ್ ಇದ್ದರು.
ರೆಡ್ಕ್ರಾಸ್ನಿಂದ: ನಂದನಗದ್ದಾ ಯುಕೆ ಪಿಕಲ್ಸ್ ಆವರಣದಲ್ಲಿ ಉತ್ತರ ಕನ್ನಡ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯಿಂದ ಪೋಲಿಯೋ ಲಸಿಕೆ ಅಭಿಯಾನ ನಡೆಸಲಾಯಿತು. ರೆಡ್ಕ್ರಾಸ್ ಚೇರ್ಮನ್ ವಿ.ಎಂ.ಹೆಗಡೆ ಚಾಲನೆ ನೀಡಿದರು. ಎಲ್.ಕೆ.ನಾಯ್ಕ, ಆರ್.ಎಸ್.ನಾಯ್ಕ, ಅಲ್ತಾಫ್ ಶೇಖ್, ಸಚ್ಚಿದಾನಂದ ನಾಯ್ಕ, ಖೈರುನ್ನಿಸ್ಸಾ ಶೇಖ್, ಸಂದೀಪ ರೇವಣಕರ್, ಸಲೀಂ ಶೇಖ್, ಯೋಗೇಶ ಶಾನಭಾಗ ಇದ್ದರು.
ಆಜಾದ್ ಯೂತ್ ಕ್ಲಬ್ನಿಂದ: ಆಜಾದ್ ಯೂತ್ ಕ್ಲಬ್ನಿಂದ ಕೋಡಿಬಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಿಎಚ್ಒ ಡಾ.ಶರದ್ ನಾಯಕ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯಕ, ಸಾಮಾಜಿಕ ಕಾರ್ಯಕರ್ತ ಆರ್.ಜಿ.ಪ್ರಭು, ನಜೀರ್ ಶೇಖ್ ಇದ್ದರು.