ನವದೆಹಲಿ : ಉತ್ತರ ದೆಹಲಿಯ ಛತ್ರಸಾಲ್ ಕ್ರೀಡಾಂಗಣದ ಆವರಣದಲ್ಲಿ ನಡೆದ ಎರಡು ಆಟಗಾರರ ಗುಂಪುಗಳ ಘರ್ಷಣೆಯಲ್ಲಿ ಯುವ ಕುಸ್ತಿ ಆಟಗಾರರೊಬ್ಬರು ದುರಂತ ಸಾವಿಗೀಡಾಗಿದ್ದಾರೆ. ಏಪ್ರಿಲ್ 4 ರ ತಡರಾತ್ರಿ ನಡೆದ ಈ ದುರ್ಘಟನೆಯ ಬಗ್ಗೆ ಪೊಲೀಸರು ದಾಖಲಿಸಿರುವ ಎಫ್.ಐ.ಆರ್.ನಲ್ಲಿ ಎರಡು ಬಾರಿ ಒಲಂಪಿಕ್ ಪದಕ ಗೆದ್ದಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರ ಹೆಸರಿದೆ ಎನ್ನಲಾಗಿದೆ.
ಕುಮಾರ್, ಅಜಯ್, ಪ್ರಿನ್ಸ್, ಸೋನು, ಸಾಗರ್, ಅಮಿತ್ ಮತ್ತಿತರ ಕುಸ್ತಿ ಆಟಗಾರರ ನಡುವೆ ಕ್ರೀಡಾಂಗಣದ ಪಾರ್ಕಿಂಗ್ನಲ್ಲಿ ಘರ್ಷಣೆ ಆರಂಭವಾಯಿತು. ಈ ಹೊಡೆದಾಟದಲ್ಲಿ ಸಾಗರ್ ಮತ್ತು ಅವರ ಮಿತ್ರರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಯಿತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಾಗ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ
“ಕೃತ್ಯ ನಡೆದ ಸ್ಥಳ ಮತ್ತು ಐದು ವಾಹನಗಳನ್ನು ಪರಿಶೀಲಿಸಲಾಯಿತು. ಒಂದು ಸ್ಕಾರ್ಪಿಯೋದಲ್ಲಿ ಐದು ಲೈವ್ ಕಾರ್ಟ್ರಿಡ್ಜ್ಗಳಿರುವ ಒಂದು ಡಬಲ್ ಬ್ಯಾರೆಲ್ ಲೋಡೆಡ್ ಗನ್ ಮತ್ತು ಎರಡು ಮರದ ದಂಡಗಳು ಸಿಕ್ಕಿವೆ. ಅವೆಲ್ಲವನ್ನು ಜಪ್ತಿ ಪಡಿಸಿಕೊಂಡಿದ್ದು, ಫೊರೆನ್ಸಿಕ್ ತಜ್ನರು ಸಹ ಪರಿಶೀಲನೆ ನಡೆಸಿದ್ದಾರೆ” ಎಂದು ವಾಯುವ್ಯ ದೆಹಲಿ ಎಡಿಸಿಪಿ ಗುರೀಖ್ಬಲ್ ಸಿಂಗ್ ಸಿಧು ಹೇಳಿದ್ದಾರೆ.
ತನಿಖೆ ನಡೆಯುತ್ತಿರುವಂತೆಯೇ, ಗಾಯಗೊಂಡು ಸಿವಿಲ್ ಲೈನ್ಸ್ ಟ್ರಾಮಾ ಸೆಂಟರ್ ಸೇರಿದ್ದ ಸಾಗರ್ ಎಂಬ 23 ವರ್ಷದ ಕುಸ್ತಿಪಟು ಸಾವಪ್ಪಿದ್ದು ತಿಳಿದುಬಂತು. ಅವರ ಮಿತ್ರ ಸೋನುಗೆ ಗಂಭೀರವಾಗಿ ಗಾಯಗಳಾಗಿದ್ದು, ಕೊಲೆ ಮತ್ತು ಇತರ ಆರೋಪಗಳನ್ನು ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದಿದ್ದಾರೆ. (ಏಜೆನ್ಸೀಸ್)
ಇನ್ನೂ ಬರಲಿದೆಯಂತೆ ಕರೊನಾ 3ನೇ ಅಲೆ ! ಸರ್ಕಾರದ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ
ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್ ಹಿಡಿದು ಬೆದರಿಸಿದರು