ದುಬೈ: ಈ ಜಗತ್ತಿನಲ್ಲಿ ಸಾಕಷ್ಟು ಮಂದಿ ಶ್ರೀಮಂತರಿದ್ದಾರೆ. ಅವರಲ್ಲಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕೂಡ ಒಬ್ಬರು. ಇವರ ಆಸ್ತಿಯ ಬಗ್ಗೆ ನಿಮಗೆ ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಚಕಿತರಾಗುವಿರಿ. ಶೇಖ್ ಮೊಹಮ್ಮದ್ ದುಬೈನ ರಾಜಮನೆತನದವರಾಗಿದ್ದು, ಇವರ ಕುಟುಂಬದ ಸಂಪತ್ತನ್ನು ಬ್ರಿಟಿಷ್ ರಾಜಮನೆತನಕ್ಕೆ ಹೋಲಿಸಬಹುದಾಗಿದೆ.
4,078 ಕೋಟಿ ರೂ. ಮೌಲ್ಯದ ಅಧ್ಯಕ್ಷರ ಅರಮನೆ, 8 ಖಾಸಗಿ ಜೆಟ್ಗಳು, ಪ್ರಸಿದ್ಧ ಫುಟ್ಬಾಲ್ ಕ್ಲಬ್ ಮತ್ತು ಇತರ ಹಲವು ಆಸ್ತಿಗಳನ್ನು ಹೊಂದಿರುವ ದುಬೈನ ಅಲ್ ನಹ್ಯಾನ್ ರಾಜಮನೆತನದ ಬಗ್ಗೆ ನಿಮಗೆ ತಿಳಿದಿದೆಯೇ? ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಕುಟುಂಬವು ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ ಎಂದು ವರದಿಯಾಗಿದೆ. ಈ ಅಧ್ಯಕ್ಷರಿಗೆ 18 ಸಹೋದರರು, 11 ಸಹೋದರಿಯರು, 9 ಮಕ್ಕಳು ಮತ್ತು 18 ಮೊಮ್ಮಕ್ಕಳು ಇದ್ದಾರೆ.
ಇದರ ಜೊತೆಗೆ, ಅಲ್ ನಹ್ಯಾನ್ ರಾಜಮನೆತನವು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಮತ್ತು ವಿಶ್ವದ ತೈಲ ನಿಕ್ಷೇಪಗಳ ಸುಮಾರು 6% ಅನ್ನು ಸಹ ಹೊಂದಿದೆ. ಜನಪ್ರಿಯ ಗಾಯಕಿ ರಿಹಾನ್ನಾರ ಸೌಂದರ್ಯ ಬ್ರ್ಯಾಂಡ್ ಫೆಂಟಿ ಮತ್ತು ಎಲಾನ್ ಮಸ್ಕ್ ಅವರ ಟ್ವಿಟರ್ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳಲ್ಲಿ ತಮ್ಮ ಪಾಲನ್ನು ಹೊಂದಿದ್ದಾರೆ. ಅಧ್ಯಕ್ಷರ ಕಿರಿಯ ಸಹೋದರ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಅವರು 5 ಬುಗಾಟಿ ವೇರಾನ್ಗಳು, ಲಂಬೋರ್ಘಿನಿ ರೆವೆಂಟನ್, ಮರ್ಸಿಡಿಸ್ ಬೆಂಜ್ CLK GTR, ಫೆರಾರಿ 599XX ಮತ್ತು ವಿಶ್ವದ ಅತಿದೊಡ್ಡ SVU ಜೊತೆಗೆ 700 ಕ್ಕೂ ಹೆಚ್ಚು ಕಾರುಗಳನ್ನು ಹೊಂದಿದ್ದಾರೆ.
ಕುಟುಂಬವು ಕಸ್ರ್ ಅಲ್-ವತನ್ ಅಧ್ಯಕ್ಷೀಯ ಅರಮನೆಯಲ್ಲಿ ನೆಲೆಸಿದೆ. ಯುಎಇಯಲ್ಲಿರುವ ಅವರ ಅರಮನೆಗಳಲ್ಲಿ ಇದು ದೊಡ್ಡದಾಗಿದೆ. 94 ಎಕರೆ ಪ್ರದೇಶದಲ್ಲಿ ಹರಡಿರುವ ಈ ಅರಮನೆಯು 3,50,000 ಹರಳುಗಳಿಂದ ಮಾಡಿದ ಗೊಂಚಲು ಮತ್ತು ಅಮೂಲ್ಯವಾದ ಐತಿಹಾಸಿಕ ಕಲಾಕೃತಿಗಳನ್ನು ಹೊಂದಿದೆ.
في كلّ ركنٍ قصة من وحي تاريخ دولة الإمارات العربية المتحدة!
اكتشفوا قصص تراث الأمة الغني والعظيم وخططوا لزيارتكم إلى #قصر_الوطن اليوم. #في_أبوظبي pic.twitter.com/Uv4zQH6bXb— Qasr Al Watan (@QasrAlWatanTour) November 1, 2022
ಅಧ್ಯಕ್ಷರ ಸಹೋದರ ತಹ್ನೌನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಮುಖ ಹೂಡಿಕೆ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಕಂಪನಿಯು ಕೃಷಿ, ಇಂಧನ, ಮನರಂಜನೆ ಮತ್ತು ಸಾಗರ ವ್ಯವಹಾರಗಳನ್ನು ಹೊಂದಿದೆ ಮತ್ತು ಸುಮಾರು 10,000 ಜನರಿಗೆ ಉದ್ಯೋಗ ನೀಡಿದೆ. 2015 ರಲ್ಲಿ ನ್ಯೂಯಾರ್ಕ್ನಲ್ಲಿನ ಕೆಲವು ವರದಿಗಳ ಪ್ರಕಾರ, ದುಬೈ ರಾಜಮನೆತನವನ್ನು ಬ್ರಿಟಿಷ್ ರಾಜಮನೆತನಕ್ಕೆ ಹೋಲಿಸಲಾಗಿದೆ.
ಈ ಎಲ್ಲ ಕಾರಣಗಳಿಂದ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಅವರ ಕುಟುಂಬ ವಿಶ್ವದ ಶ್ರೀಮಂತ ಕುಟುಂಬ ಎನಿಸಿಕೊಂಡಿದೆ. (ಏಜೆನ್ಸೀಸ್)
ರಾಮೋತ್ಸವ: ಅಹಿತಕರ ಘಟನೆ ಉಂಟಾಗದಂತೆ ಕ್ರಮ ವಹಿಸಲು ರಾಜ್ಯ ಸರಕಾರಕ್ಕೆ ಬಿ.ವೈ.ವಿಜಯೇಂದ್ರ ಒತ್ತಾಯ
ಯಾರೇನೇ ಅಂದ್ರು ಡೋಂಟ್ ಕೇರ್: ರಾಮ ಮಂದಿರ ಉದ್ಘಾಟನೆಗೆ ಹೋಗೇ ಹೋಗ್ತೀನೆಂದ ಹರ್ಭಜನ್ ಸಿಂಗ್