More

    ಪತ್ನಿಯ ಹೆಸರಿನಲ್ಲಿರೋ ಸಾಲ ಮನ್ನಾ ಆಗುತ್ತೆ ಅಂತ ಏನು ಮಾಡಿದ ನೋಡಿ ಈ ಭೂಪ!

    ಹೊನ್ನಾಳಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಪತಿಯೇ ಮನಬಂದಂತೆ ಥಳಿಸಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ನಡೆದಿದೆ.

    ಆ. 27ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ರೋಜಾಳನ್ನು ಆಕೆಯ ಪತಿ ಅಶೋಕ ಎಂಬಾತ ಥಳಿಸಿ, ಕತ್ತು ಹಿಸುಕಿದ್ದ. ನಂತರ ಮಾವನಿಗೆ ಕರೆ ಮಾಡಿ, ನಿಮ್ಮ ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಸುಳ್ಳು ಹೇಳಿದ್ದ. ಆಕೆಯನ್ನು ಕರೆದೊಯ್ದು ಹೊನ್ನಾಳಿ, ಶಿವಮೊಗ್ಗದಲ್ಲಿ ಚಿಕಿತ್ಸೆ ಕೊಡಿಸಿ, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಕೆ ಸೆ. 3ರಂದು ಮೃತಪಟ್ಟಿದ್ದಳು. ಇದನ್ನೂ ಓದಿ: 16 ಬಾರಿ ಬಂಧಿಸಿದ್ದ ಪೊಲೀಸ್​ ಅಧಿಕಾರಿಗೇ ಕಿಡ್ನಿ ಕೊಟ್ಟು ಕಾಪಾಡಿದಳು!

    ಮಗಳ ಸಾವಿನಿಂದ ಅನುಮಾನಗೊಂಡ ಮಾವ ಶಿವಮೊಗ್ಗ ಜಿಲ್ಲೆಯ ರಾಮನಗರದ ಹಾಲೇಶಪ್ಪ, ಅಳಿಯನ ವಿರುದ್ಧ ಸೆ. 14ರಂದು ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಅಶೋಕನನ್ನು ಬಂಧಿಸಿ ವಿಚಾರಿಸಿದಾಗ ತಾನೇ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಸಿಪಿಐ ಟಿ.ವಿ.ದೇವರಾಜ್ ತಿಳಿಸಿದ್ದಾರೆ.

    ಪತ್ನಿಯೇ ಇಲ್ಲವಾದರೆ ಆಕೆಯ ಹೆಸರಿನ ಮೇಲಿರುವ ಗೃಹ ಸಾಲ ಮನ್ನಾ ಆಗುತ್ತದೆ ಎಂಬ ದುರುದ್ದೇಶದಿಂದ ಕೊಲೆ ಮಾಡಿದ್ದಾನೆ. ಇದಲ್ಲದೆ ಈತನಿಗೆ ಬೇರೊಬ್ಬ ಮಹಿಳೆ ಜತೆ ಅನೈತಿಕ ಸಂಬಂಧ ಇತ್ತು. ಈ ವಿಷಯ ಈತನ ಪತ್ನಿಗೆ ಗೊತ್ತಿತ್ತು. ಈ ಸಂಬಂಧ ಆಗಾಗ ಜಗಳವೂ ಆಗುತ್ತಿತ್ತು. ಆದ್ದರಿಂದ ಆ ವಿಷಯವನ್ನು ಸಂಬಂಧಿಕರಿಗೆ ತಿಳಿಸುತ್ತಾಳೆಂಬ ಭಯವೂ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

    ತೆಂಗಿನಕಾಯಿ ಕದಿಯಲು ಬಂದವನನ್ನು ತೆಂಗಿನ ಮಟ್ಟೆಯಿಂದ ಹೊಡೆದು ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts