More

    ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…

    ಬೆಂಗಳೂರು: ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ ಎಂಬಂಥ ಪ್ರಕರಣವೊಂದು ಪೊಲೀಸ್ ಕಮಿಷನರ್​ ಅವರವರೆಗೂ ತಲುಪಿದೆ. ದೂರು ನೀಡಲು ಹೋದಾಗ ಲಂಚ ಕೇಳಿದ್ದಲ್ಲದೆ, ಮಂಚಕ್ಕೂ ಕರೆದ ಎಂದು ಮಹಿಳೆಯೊಬ್ಬರು ಪೊಲೀಸ್​ ಕಮಿಷನರ್ ಬಳಿ ಅಹವಾಲು ಹೇಳಿಕೊಂಡಿದ್ದಾರೆ.

    ಬೆಂಗಳೂರಿನ ಹೆಣ್ಣೂರು ಪೊಲೀಸ್ ಇನ್​ಸ್ಪೆಕ್ಟರ್​ ವಸಂತಕುಮಾರ್ ವಿರುದ್ಧ ಹೆಣ್ಣೂರಿನ ಶಕ್ತಿನಗರ ನಿವಾಸಿಯಾಗಿರುವ ಸಂತ್ರಸ್ತೆ ಪೊಲೀಸ್ ಕಮಿಷನರ್ ಕಮಲ್ ಪಂತ್​ಗೆ ದೂರು ನೀಡಿದ್ದಾರೆ. ತನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಲು ಹೋದರೆ ಇನ್​ಸ್ಪೆಕ್ಟರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಅಲವತ್ತುಕೊಂಡಿದ್ದಾರೆ.

    ಇದನ್ನೂ ಓದಿ: ಆಸ್ಪತ್ರೆಯಲ್ಲಿ ಮಲಗಿದ್ದ ವೈದ್ಯ, ಚಿಕಿತ್ಸೆ ಕೊಡಿ ಎಂದರೆ ನರ್ಸ್​ಗೆ ತೋರಿಸಿ ಎಂದ, ಬಾಲಕ ಸತ್ತೇ ಹೋದ!

    ದೂರು ನೀಡಿದ ಮಹಿಳೆ ಶಕ್ತಿನಗರದಲ್ಲಿ ಸ್ವಂತ ಮನೆ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ವರಲಕ್ಷ್ಮಿ ಎಂಬವರಿಗೆ ಅದನ್ನು ಲೀಸ್​ಗೆ ನೀಡಿದ್ದರು. ಲೀಸ್ ಮೊತ್ತವಾಗಿ 7 ಲಕ್ಷ ರೂಪಾಯಿ ಪಡೆದಿದ್ದರು. ಆದರೆ ಆ ಮನೆಯಲ್ಲಿದ್ದವರು ಒಂದು ವರ್ಷದಿಂದ ನೀರಿನ ಬಿಲ್ ಪಾವತಿಸಿರಲಿಲ್ಲ. ಅದನ್ನು ಕೇಳಲೆಂದು ಮನೆ ಬಳಿಗೆ ಹೋಗಿದ್ದಾಗ, ವರಲಕ್ಷ್ಮಿ ಮತ್ತು ಆಕೆಯ ಕಡೆಯವರು ಚಾಕುವಿನಿಂದ ಹಲ್ಲೆಗೈದು, ಕೈ ತಿರುಚಿ ಗಾಯಗೊಳಿಸಿದ್ದಾರೆ ಎಂದು ದೂರು ನೀಡಲಾಗಿದೆ.

    ಇದನ್ನೂ ಓದಿ: #MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!

    ಬಳಿಕ ಮನೆ ಮಾಲಕಿ ಆರೋಪಿಗಳಿಂದ ತಪ್ಪಿಸಿಕೊಂಡು ಕೆ.ಸಿ. ಜನರಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ನಂತರ ದೂರು ನೀಡುವ ಸಲುವಾಗಿ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿದ್ದರು.

    ಆದರೆ ಇನ್​ಸ್ಪೆಕ್ಟರ್ ವಸಂತಕುಮಾರ್ ದೂರು ದಾಖಲಿಸಿಕೊಳ್ಳಲಿಲ್ಲ. ಬದಲಿಗೆ ದೂರು ದಾಖಲಿಸಿಕೊಳ್ಳಲು 5 ಲಕ್ಷ ರೂ. ಲಂಚ ಕೊಡಬೇಕು ಮತ್ತು ನಾನು ಕರೆದಾಗೆಲ್ಲ ಮಂಚಕ್ಕೆ ಬರಬೇಕು ಎಂದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ಆರೋಪಿಸಿರುವ ಮಹಿಳೆ, ಇನ್​ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಯತ್ನ ಆರೋಪ ಹೊರಿಸಿದ್ದಾರೆ.

    ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕವಿದೆ ಎಂದ ಹೆಂಡ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts