ಬೆಂಗಳೂರು: ರಾತ್ರಿ ಪಾಳಿ ಕೆಲಸಕ್ಕೆಂದು ಮನೆ ಬಿಡುತ್ತಿದ್ದ ಗಂಡನ ಮೇಲೆ ಅನುಮಾನಗೊಂಡು ಒಂದು ದಿನ ಹಿಂಬಾಲಿಸಿದ ಪತ್ನಿಗೆ ಅಕ್ಷರಶಃ ಆಘಾತ ಕಾದಿತ್ತು. ಕಚೇರಿಗೆ ಹೋಗದೆ ಅಪರಿಚಿತ ಮನೆ ಮುಂದೆ ಬೈಕ್ ನಿಲ್ಲಿಸಿದ ಆತನನ್ನು ಬೆನ್ನತ್ತಿದ ಪತ್ನಿಗೆ ಗಂಡನ ಇನ್ನೊಂದು ಮುಖ ದರ್ಶನವಾಗಿ, ಅದನ್ನು ಸಹಿಸದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿರಿ: ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’
ಅಭಿಲಾಷ ಮೃತ ದುರ್ದೈವಿ. ಪ್ರೀತಿಸಿ ಮದುವೆಯಾದ ಮೂರೇ ತಿಂಗಳಲ್ಲಿ ತನ್ನ ನಿರ್ಮಲ ಪ್ರೀತಿಗೆ ದ್ರೋಹವಾಗಿದ್ದನ್ನು ಸಹಿಸದೇ ಅಭಿಲಾಷ ಆತ್ಮಹತ್ಯೆ ಹಾದಿಯನ್ನು ಹಿಡಿದಿದ್ದಾಳೆ.
ಘಟನೆಯ ವಿವರಣೆಗೆ ಬರುವುದಾದರೆ, ಶಶಿಕುಮಾರ್-ಅಭಿಲಾಷ ಪ್ರೇಮ ವಿವಾಹವಾಗಿ ನಗರದ ಶ್ರೀರಾಂಪುರದಲ್ಲಿ ವಾಸವಿದ್ದರು. ಪತಿಯ ಮೇಲೆ ಅಭಿಲಾಷಗೆ ತುಂಬಾ ನಂಬಿಕೆ ಇತ್ತು. ಆದರೆ, ಕೆಲವು ದಿನಗಳ ಬಳಿಕ ರಾತ್ರಿ ಪಾಳಿಯ ಕೆಲಸವೆಂದು ಹೇಳಿ, 8 ಗಂಟೆಯಾದ್ರೆ ಸಾಕು ಬಾಸ್ ಬೈಯುತ್ತಾರೆ ಟೈ ಆಯ್ತು ಎಂದು ಹೇಳಿ ಅರ್ಜೆಂಟ್ ಆಗಿ ಮನೆ ಬಿಡುತ್ತಿದ್ದ.
ಇದನ್ನೂ ಓದಿರಿ: ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?
ಗಂಡನ ಈ ನಡೆ ಅಭಿಲಾಷಗೆ ಅನುಮಾನ ಮೂಡುವಂತೆ ಮಾಡಿತು. ಸರಿ ಸಂಶಯವನ್ನು ಬಗೆಹರಿಸಿಕೊಂಡುಬಿಡೋಣ ಎಂಬ ನಿರ್ಧಾರಕ್ಕೆ ಬಂದ ಅಭಿಲಾಷ, ಒಂದು ದಿನ ಪತಿಯನ್ನು ಹಿಂಬಾಲಿಸಿದಳು. ಈ ವೇಳೆ ಪತಿ ಅಪರಿಚಿತರ ಮನೆ ಮುಂದೆ ಬೈಕ್ ನಿಲ್ಲಿಸುವುದನ್ನು ನೋಡಿ ಅಭಿಲಾಷ ಶಾಕ್ ಆಗಿದ್ದಾಳೆ. ಮನೆ ಯಾರದಿರಬಹುದೆಂದು ನೋಡಲು ಹೋದಾಗ ಮತ್ತೊಬ್ಬ ಮಹಿಳೆಯೊಂದಿಗೆ ಪತಿ ಇರುವುದನ್ನು ನೋಡಿ ಅಭಿಲಾಷಗೆ ಹೃದಯ ಬಿರಿದಂತಾಗಿದೆ.
ಇದಕ್ಕೂ ಮುನ್ನ ಬಾಗಿಲು ಬಡಿದಿದ್ದನ್ನು ಕೇಳಿ ಶಶಿಕುಮಾರ್ ಮಂಚದ ಕೆಳಗೆ ಅವಿತುಕೊಂಡಿದ್ದ. ಬಳಿಕ ಎಲ್ಲವೂ ಬಹಿರಂಗವಾದ ಬೆನ್ನಲ್ಲೇ ಆತನನ್ನು ಪ್ರಶ್ನಿಸಿದ್ದಕ್ಕೆ ಸ್ಥಳದಲ್ಲಿಯೇ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ತುಂಬಾ ಮನನೊಂದು ಅಭಿಲಾಷ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ: ಕ್ಲಾಸ್ಮೇಟ್ ನಂಬಿ ಚಾಟಿಂಗ್ ಮಾಡುತ್ತಿದ್ದ ಯುವತಿಗೆ ವರ್ಷದ ಬಳಿಕ ಕಾದಿತ್ತು ಬಿಗ್ ಶಾಕ್!
ಆತ್ಮಹತ್ಯೆಗೂ ಮುನ್ನ ತನ್ನ ತಂಗಿಗೆ ಅಭಿಲಾಷ ಕರೆ ಮಾಡಿ ಕಣ್ಣೀರಿಟ್ಟಿದ್ದಾಳೆ. ಕಳೆದ ಭಾನುವಾರ ರಾತ್ರಿ ಅಭಿಲಾಷ ಮೃತಪಟ್ಟಿದ್ದು, ಮೃತಳ ಪಾಲಕರು ಶಶಿಕುಮಾರ್ ಹಾಗೂ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಪ್ರೀತಿಸಿ ಮದುವೆಯಾದ ಎರಡೇ ವರ್ಷದಲ್ಲಿ ಸಂಚು ಮಾಡಿ ಪತ್ನಿಯನ್ನೇ ಕೊಂದನಾ ಪತಿ?
ಗಂಡನನ್ನು ಕೊಂದು, ಮೂರು ಮಕ್ಕಳ ಜತೆ ಬಾವಿಗೆ ಹಾರಿದ ಪತ್ನಿ! ಇಷ್ಟಕ್ಕೆಲ್ಲ ಕಾರಣವೇನು ಗೊತ್ತಾ?
1.5 ಕೋಟಿ ರೂ.ಗೆ ವಿವಾಹಿತ ಬಾಯ್ಫ್ರೆಂಡ್ ಖರೀದಿಸಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!