ಸೇಲಂ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 370 ಸ್ಥಾನದಲ್ಲಿ ಗೆಲ್ಲಿಸುವ ಗುರಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಲೋಕಸಭೆ ಚುನಾವಣಾ ಪ್ರಚಾರದಲ್ಲಿರುವ ಅವರು 10 ವರ್ಷಗಳ ಹಿಂದೆ ಹತ್ಯೆಯಾದ ಬಿಜೆಪಿ ಕಾರ್ಯಕರ್ತನನ್ನು ನೆನದು ಭಾವುಕರಾಗಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ಜೆಎಂಎಂ ತೊರೆದು ಬಿಜೆಪಿ ಸೇರ್ಪಡೆಯಾದ ಹೇಮಂತ್ ಸೊರೇನ್ ಸೊಸೆ ಸೀತಾ ಸೊರೆನ್!
#WATCH | Tamil Nadu: Prime Minister Narendra Modi gets emotional as he remembers Former State BJP president late K.N. Lakshmanan & his contribution towards the expansion of BJP in the state. pic.twitter.com/7ZN4m3MbQx
— ANI (@ANI) March 19, 2024
ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ ದಿವಂಗತ ಬಿಜೆಪಿ ನಾಯಕ ಕೆಎನ್ ಲಕ್ಷ್ಮಣನ್ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಸ್ಮರಿಸಿದರು. ಅದರಲ್ಲೂ ಹತ್ಯೆಗೊಳಗಾದ ಆಡಿಟರ್ ರಮೇಶ್ ಕುರಿತು ಮಾತನಾಡುವಾಗ ಪ್ರಧಾನಿ ಮೋದಿ ಭಾವುಕರಾದರು. ಸ್ವಲ್ಪ ಸಮಯ ಭಾಷಣ ನಿಲ್ಲಿಸಿ ತಮಿಳುನಾಡಿನಲ್ಲಿ ಬಿಜೆಪಿಗಾಗಿ ದುಡಿದ ರಮೇಶ್ ಕಾರ್ಯವನ್ನು ಶ್ಲಾಘಿಸಿದರು.
Lively atmosphere at the rally in Salem. Tamil Nadu is strongly backing the NDA.https://t.co/0uH2tE5xLx
— Narendra Modi (@narendramodi) March 19, 2024
ಆಡಿಟರ್ ರಮೇಶ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದುರದೃಷ್ಟವಶಾತ್ ಇಂದು ರಮೇಶ್ ನಮ್ಮ ನಡುವೆ ಇಲ್ಲ. ರಮೇಶ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಉತ್ತಮ ವಾಗ್ಮಿಯಾಗಿದ್ದರು. ಆದರೆ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದರು. ಇಂದು ನಾನು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.
Thank you Coimbatore. I will always cherish the affection I’ve received here.
On the way to Palakkad to take part in a roadshow after which will go to Salem for a rally. pic.twitter.com/fk5IRdfzsc
— Narendra Modi (@narendramodi) March 19, 2024
ವೃತ್ತಿಯಲ್ಲಿ ಆಡಿಟರ್ ಆಗಿರುವ ವಿ.ರಮೇಶ್ ಸೇಲಂ ಮೂಲದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013ರ ಜುಲೈನಲ್ಲಿ ಅವರ ಮನೆಯಲ್ಲಿಯೇ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ದಿವಂಗತ ಲಕ್ಷ್ಮಣನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ, ತಮಿಳುನಾಡಿನಲ್ಲಿ ಪಕ್ಷದ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ