More

    ಬರ್ತಡೇ ಪಾರ್ಟಿ ಮುಗಿಸಿ ಮನೆ ಮರಳುತ್ತಿದ್ದ ಐವರು ಯುವಕರ ಭೀಕರ ಸಾವು

    ವಾರಂಗಲ್​: ತೆಲಂಗಾಣದ ದಮೇರಾ ಮಂಡಲದಲ್ಲಿರುವ ಪೇಸರಗೊಂಡ ರಸ್ತೆಯಲ್ಲಿ ಬುಧವಾರ ಕಾರು ಮತ್ತು ಮರಳಿನ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿದ್ದಾರೆ.

    ಮರಳಿನ ಲಾರಿ ಕಲೆಶ್ವರಂನಿಂದ ವಾರಂಗಲ್​ ಕಡೆಗೆ ತೆರಳುತ್ತಿತ್ತು. ಕಾರು ವಾರಂಗಲ್​ನಿಂದ ಪರ್ಕಲ್​ಗೆ ಪ್ರಯಾಣ ಬೆಳೆಸಿತ್ತು. ವಾರಂಗಲ್​ನಲ್ಲಿ ಬರ್ತಡೇ ಪಾರ್ಟಿಯನ್ನು ಮುಗಿಸಿದ ಯುವಕರು ಪರ್ಕಲ್​ಗೆ ಮರಳುವಾಗ ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದೆ.

    ಇದನ್ನೂ ಓದಿ: ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

    ಪ್ರಾಥಮಿಕ ತನಿಖೆಯ ಪ್ರಕಾರ ಕಾರು ಬೇರೊಂದು ವಾಹನವನ್ನು ಓವರ್​ಟೇಕ್​ ಮಾಡಲು ಹೋಗಿ ಎದುರು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಮೃತರಾದ ಐವರು ಯುವಕರನ್ನು ಪವನ್​, ರಾಕೇಶ್​, ಚಂದು, ರೋಹಿತ್​ ಮತ್ತು ಸಬೀರ್​ ಎಂದು ಗುರುತಿಸಲಾಗಿದೆ.

    ಕಾರಿನ ಬಾನೆಟ್ ಸಂಪೂರ್ಣ​ ನುಜ್ಜುಗುಜ್ಜಾಗಿರುವುದರಿಂದ ಅಪಾಯದಿಂದ ಯುವಕರು ಪಾರಾಗುವ ಯಾವುದೇ ಅವಕಾಶವೂ ದೊರೆತಿಲ್ಲ. ಬುಧವಾರ ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಮೃತ ಯುವಕರೆಲ್ಲ ಬೇರೆ ಬೇರೆ ಕುಟುಂಬದವರು. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. (ಏಜೆನ್ಸೀಸ್​)

    ನವಭಾರತಕ್ಕಾಗಿ ಮಿಷನ್​ ಕರ್ಮಯೋಗಿ; ನಾಗರಿಕ ಸೇವಾ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts