ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆಯು ‘ಮಿಷನ್ ಕರ್ಮಯೋಗಿ’ ಯೋಜನೆಗೆ ಸಮ್ಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ. ಐಎಎಸ್, ಐಪಿಎಸ್ ಸೇರಿ ಅಖಿಲ ಭಾರತ ನಾಗರಿಕ ಸೇವಾ ವಲಯದ ನೇಮಕಾತಿ ನಂತರದ ಪ್ರಕ್ರಿಯೆಗಳಲ್ಲಿ ಮಹತ್ತರ ಬದಲಾವಣೆಗೆ ಈ ಯೋಜನೆ ಕಾರಣವಾಗಲಿದೆ ಎಂದೇ ಹೇಳಲಾಗಿದೆ.
ಈ ಯೋಜನೆಯು ವ್ಯಕ್ತಿಗತ (ಸರ್ಕಾರಿ ಅಧಿಕಾರಿಗಳು) ಹಾಗೂ ಸಾಂಸ್ಥಿಕ ಸಾಮರ್ಥ್ಯ ವರ್ಧನೆಯನ್ನು ಮುಖ್ಯ ಉದ್ದೇಶವಾಗಿಸಿಕೊಂಡಿದೆ. ಮೇಲಸ್ತರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಮಾನವ ಸಂಪನ್ಮೂಲ ಮಂಡಳಿ (ಎಚ್ಆರ್ ಕೌನ್ಸಿಲ್) ಇರಲಿದೆ. ಇದರಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪರಿಣತರು ಇರಲಿದ್ದಾರೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಕಾರ್ಯದರ್ಶಿ ಸಿ. ಚಂದ್ರಮೌಳಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್ಗಳಿಗೆ ಗಲಿಬಿಲಿ…!
ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ನಿಯಮಾಧಾರಿತ ಬದಲು, ಪಾತ್ರವಾಧಾರಿತ ಮಾರ್ಪಾಡು ಇದರಿಂದ ಸಾಧ್ಯವಾಗಲಿದೆ (ರೂಲ್ಸ್ ಬೇಸ್ಡ್ ಟು ರೋಲ್ ಬೇಸ್ಡ್). ಜತೆಗೆ ಕೆಲಸ ಮಾಡುತ್ತಲೇ ಕಲಿಯುವ ಪ್ರಕ್ರಿಯೆಗೆ ಒತ್ತು ನೀಡಲಿದೆ. ಅಧಿಕಾರಿಗಳ ತರಬೇತಿ ಮತ್ತು ಸಾಮರ್ಥ್ಯವನ್ನು ಒಂದುಗೂಡಿಸುತ್ತದೆ. ತರಬೇತಿ ಕೇಂದ್ರಗಳನ್ನು ಉತ್ಕೃಷ್ಠತಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ. ಜತೆಗೆ, ಇ-ಲರ್ನಿಂಗ್ ಬಗ್ಗೆ ಆದ್ಯತೆ ನೀಡಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯೂ ಅಧಿಕಾರಿಗಳನ್ನು ಹೆಚ್ಚು ಹೊಣೆಗಾರರನ್ನಾಗಿಸುತ್ತದೆ. ಆಯಾ ರಾಜ್ಯಗಳ ಅಗತ್ಯಕ್ಕೆ ಅನುಗುಣವಾಗಿ ಅವರಿಗೆ ತರಬೇತಿ ನೀಡುವ ಅವಕಾಶ ಕಲ್ಪಿಸುತ್ತದೆ. ಅಧಿಕಾರಿಗಳನ್ನು ಹೆಚ್ಚು ಸೃಜನಾತ್ಮಕ, ರಚನಾತ್ಮಕ, ನಾವೀನ್ಯತೆ ಹೊಂದಿದ, ತಾಂತ್ರಿಕತೆ ಅರಿತ ಸಂಪನ್ಮೂಲವನ್ನಾಗಿಸುತ್ತದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಬಸ್ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?