ವಿಶಾಖಪಟ್ಟಣಂ: ಲಾಕ್ಡೌನ್ ನಡುವೆಯೂ ಘೋರ ದುರಂತವೊಂದಕ್ಕೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ. ಇಂದು(ಗುರುವಾರ) ಬೆಳಗ್ಗೆ ವಿಶಾಖಪಟ್ಟಣಂ ಜಿಲ್ಲೆಯ ಆರ್. ಆರ್. ವೆಂಕಟಪುರಂನ ಕೆಮಿಕಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ 9 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಮೂಲಗಳ ಪ್ರಕಾರ ಕಾರ್ಖಾನೆಯಲ್ಲಿ ಸ್ಟೈರೀನ್ ಗ್ಯಾಸ್ ಲೀಕ್ ಆಗಿದೆ. ಇದರಿಂದಾಗಿಯೇ ಜನರಿಗೆ ಕಣ್ಣು, ಚರ್ಮ ಮತ್ತು ಮೂಗಿನಲ್ಲಿ ಉರಿ ಅನುಭವ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯು ಎದುರಾಗಿದೆ.
ಇದನ್ನೂ ಓದಿ: ಲಾಕ್ಡೌನ್ ನಡುವೆ ಘೋರ ದುರಂತ: ಏರುತ್ತಲೇ ಇದೆ ವಿಷಾನಿಲ ಸೋರಿಕೆಯಿಂದ ಮೃತರಾದವರ ಸಂಖ್ಯೆ
ಸ್ಟೈರೀನ್ ಗ್ಯಾಸ್ ಎಂದರೇನು? ಯಾವುದಕ್ಕೆ ಬಳಸುತ್ತಾರೆ?
ಸ್ಟೈರಿನ್ ಗ್ಯಾಸ್ ಒಂದು ಬಣ್ಣರಹಿತ ಸುಡುವ ದ್ರವವಾಗಿದ್ದು, ಇದು ಸುಲಭವಾಗಿ ಆವಿಯಾಗುತ್ತದೆ. ಇದನ್ನು ಪಾಲಿಸ್ಟೈರೀನ್ ಪ್ಲ್ಯಾಸ್ಟಿಕ್, ರಾಳ (ರೆಸಿನ್ಸ್), ಫೈಬರ್ಗ್ಲಾಸ್, ರಬ್ಬರ್ ಮತ್ತು ಲ್ಯಾಟೆಕ್ಸ್ ತಯಾರಿಕೆಯಲ್ಲಿ ಬಳಸುತ್ತಾರೆ.
ಸ್ಟೈರೀನ್ ಹೊಂದಿರುವ ಗ್ರಾಹಕ ಉತ್ಪನ್ನಗಳು
ಪ್ಯಾಕೇಜಿಂಗ್ ಮೆಟಿರೀಯಲ್ಸ್, ವಿದ್ಯುತ್ ಬಳಕೆಗಾಗಿ ಇರುವ ಇನ್ಸುಲೇಶನ್, ಮನೆ ಮತ್ತು ಇತರೆ ಕಟ್ಟಡಗಳ ಬಳಕೆಗಾಗಿ ಇರುವ ಇನ್ಸುಲೇಶನ್, ಫೈಬರ್, ಪ್ಲ್ಯಾಸ್ಟಿಕ್ ಪೈಪ್ಸ್, ಆಟೋಮೊಬೈಲ್ ಬಿಡಿ ಭಾಗಗಳು, ಡ್ರಿಂಕಿಂಗ್ ಕಪ್ಸ್ ಹಾಗೂ ಇತರೆ ಆಹಾರ ಪದಾರ್ಥ ಬಳಸುವ ಸಾಮಾಗ್ರಿಗಳಲ್ಲಿ ಸ್ಟೈರಿನ್ ಇರುತ್ತದೆ.
ಇದನ್ನೂ ಓದಿ: ವಿಷ ಅನಿಲ ಸೋರಿಕೆ ದುರಂತ; ಗೃಹಸಚಿವಾಲಯ, ಎನ್ಡಿಎಂಎ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ
ಸ್ಪೋಟಗೊಳ್ಳುವ ಸ್ಟೈರೀನ್ ಗ್ಯಾಸ್ನಿಂದಾಗುವ ಪರಿಣಾಮಗಳು
ಸೋರಿಕೆಯಾದ ಸ್ಟೈರೀನ್ ಗ್ಯಾಸ್ ಮಾನವನನ್ನು ಸ್ಪರ್ಶಿಸಿದರೆ, ಉಸಿರಾಟದ ತೊಂದರೆ ಎದುರಾಗುತ್ತದೆ. ಕಣ್ಣು, ಮೂಗು ಹಾಗೂ ಚರ್ಮದಲ್ಲಿ ಉರಿ ಮತ್ತು ಜಠರಗರುಳಿನ ಸಮಸ್ಯೆ ಉಂಟಾಗುತ್ತದೆ. (ಏಜೆನ್ಸೀಸ್)
Very sad and disturbing news from Vizag. 2020 has been very harsh. Praying for the departed souls and for for a speedy recovery of those unwell. #VizagGasLeak #LGPolymers pic.twitter.com/mPMkk831zU
— Punit Agarwal (@Punitspeaks) May 7, 2020
ಲಾಕ್ಡೌನ್ ಮಧ್ಯೆ ಗುಜರಾತ್ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ!