ಕೊಚ್ಚಿ: ಸೋಶಿಯಲ್ ಮೀಡಿಯಾ ಬದುಕುಗಳನ್ನು ಬದಲಾಯಿಸಬಲ್ಲದು. ಆದರೆ ಸೋಶಿಯಲ್ ಮೀಡಿಯಾ ಬಗ್ಗೆ ಏನೂ ಅರಿಯದ ಬಡ ವೃದ್ಧನೊಬ್ಬ, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಎನ್ನುವ ಕಾರಣಕ್ಕೆ, ಆತನ ಮೇಲೆ ಅಸೂಯೆ ಪಟ್ಟು ಕೊಲೆ ಮಾಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಇದನ್ನೂ ಓದಿ: ಇನ್ನೂ ಆರು ತಿಂಗಳು ಮಾಸ್ಕ್ ಬಿಡುವಂತಿಲ್ಲ! ಲಾಕ್ಡೌನ್ ಮಾಡಲ್ಲ; ಸರ್ಕಾರದ ಹೊಸ ರೂಲ್ಸ್
ಕೇರಳದ ಕೊಚ್ಚಿಯ ಮರೀನ್ಡ್ರೈವ್ನಲ್ಲಿರುವ ಶಿವದಾಸನ್ (63) ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಭಿಮಾನಿ. ಆತ ಎರಡು ಬಾರಿ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದ್ದನಂತೆ. ಅಬ್ದುಲ್ ಕಲಾಂ ಅವರು ಶಿವದಾಸನ್ಗೆ 500 ರೂಪಾಯಿ ಕೊಟ್ಟಿದ್ದರಂತೆ. ಕಲಾಂ ಅವರನ್ನೇ ನಿಜವಾದ ದೇವರು ಎಂದು ನಂಬಿದ್ದ ಶಿವದಾಸನ್, ನಗರದಲ್ಲಿದ್ದ ಅಬ್ದುಲ್ ಕಲಾಂ ಅವರ ಪ್ರತಿಮೆಗೆ ಪ್ರತಿದಿನ ಹೂವಿನ ಅಲಂಕಾರ ಮಾಡುತ್ತಿದ್ದ. ಈತನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿತ್ತು. ಕಲಾಂ ಅವರ ಬಗ್ಗೆ ಆತನಿಗಿದ್ದ ಗೌರವವನ್ನು ಕಂಡ ನೆಟ್ಟಿಗರು ವಾವ್ ಎಂದು ಉದ್ಘರಿಸಿದ್ದರು.
ಶಿವದಾಸನ್ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗಿದ್ದು ಕಂಡು ಕೆಲವೊಂದಿಷ್ಟು ಜನರು ಅಸೂಯೆ ಪಟ್ಟಿದ್ದಾರೆ. ಏನೂ ಇಲ್ಲದ ಈ ಮುದುಕ ಇಷ್ಟೊಂದು ಶಹಬ್ಬಾಸ್ಗಿರಿ ಗಳಿಸಿದನೆಂದು ಆತನ ಮೇಲೆ ದ್ವೇಷ ಬೆಳೆಸಿಕೊಂಡಿದ್ದಾರೆ. ಈ ರೀತಿ ದ್ವೇಷ ಬೆಳೆಸಿಕೊಂಡ ರಾಜೇಶ್ ಹೆಸರಿನ ವ್ಯಕ್ತಿ, ಶಿವದಾಸನ್ ಜತೆ ಜಗಳವಾಡಿದ್ದಾನೆ. ಆತ ಆ ರೀತಿ ಜಗಳವಾಡಿ ಕೆಲವೇ ದಿನಗಳಲ್ಲಿ ಶಿವದಾಸನ್ ಹೆಣವಾಗಿ ಪತ್ತೆಯಾಗಿದ್ದಾರೆ. ಆತ ಪ್ರತಿದಿನ ಅಬ್ದುಲ್ ಕಲಾಂ ರಸ್ತೆಯಲ್ಲಿಯೇ ಮಲಗುತ್ತಿದ್ದು, ಅದೇ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: ಸೆಕ್ಸ್ ವರ್ಕರ್ ಇರಲಿಲ್ಲ, ಹೋಟೆಲ್ ಸಿಬ್ಬಂದಿಯನ್ನೇ ರೇಪ್ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!
ಡಿಸೆಂಬರ್ 16ರಂದು ಶಿವದಾಸನ್ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಈ ಕುರಿತಾಗಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ರಾಜೇಶ್ ಕುರಿತಾಗಿ ಸ್ಥಳೀಯರು ಬಾಯಿಬಿಟ್ಟಿದ್ದಾರೆ. ಇದೀಗ ಆತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!
21 ವರ್ಷ ರೇಪ್ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ