ಜೈಪುರ: ತ್ರಿ ಸ್ಟಾರ್ ಹೋಟೆಲ್ ಒಂದರಲ್ಲಿ ತಂಗುವುದಕ್ಕೆ ಬಂದ ಐವರು, ಹೋಟೆಲ್ನ ಮಹಿಳೆ ಸಿಬ್ಬಂದಿಯನ್ನೇ ರೇಪ್ ಮಾಡಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಅವರು ಹೋಟೆಲ್ಗೆ ಬಂದಿದ್ದರ ಹಿಂದಿನ ದೊಡ್ಡ ರಹಸ್ಯವೊಂದು ಬಯಲಾಗಿದೆ.
ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೀರ್ ಮತ್ತು ಪ್ರಿನ್ಸ್ ತಿವಾರಿ ಶುಕ್ರವಾರದಂದು ಹೋಟೆಲ್ಗೆ ಬಂದಿದ್ದು, ರೂಂ ಬುಕ್ ಮಾಡಿ, ಅಲ್ಲಿಯೇ ತಂಗಿದ್ದಾರೆ. ರೂಮಿಗೆ ತೆರಳಿದ ಕೆಲವೇ ಕ್ಷಣದಲ್ಲಿ ಮತ್ತೆ ಬಂದ ಅವರು, ಸೆಕ್ಸ್ ವರ್ಕರ್ಗಳನ್ನು ನಮ್ಮ ರೂಮಿಗೆ ಕಳುಹಿಸಿ ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಹೋಟೆಲ್ನ ಸಿಬ್ಬಂದಿ ನಿರಾಕರಿಸಿದ್ದಾರೆ. ಸಿಟ್ಟಿಗೆದ್ದ ಆರೋಪಿಗಳು, ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆಗೆ ತೆರಳಿದ್ದಾರೆ. ಇಬ್ಬರು ಆರೋಪಿಗಳು ರೂಮಿನ ಒಳಗೆ ಹೋದರೆ, ಮೂವರು ಹೊರಗಡೆ ಕಾವಲು ಕಾದಿದ್ದಾರೆ. ಒಳಗಿದ್ದ ಸಿಬ್ಬಂದಿಗೆ ಪಿಸ್ತೂಲು ತೋರಿಸಿ, ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ.
ಅಷ್ಟರಲ್ಲಾಗಲೇ ಹೋಟೆಲ್ಲಿನ ಮ್ಯಾನೇಜರ್ ಪೊಲೀಸರಿಗೆ ವಿಚಾರ ತಿಳಿಸಿದ್ದು, ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಸ್ಥಳಕ್ಕೆ ಬಂದಿದ್ದಾರೆ. ಮಹಿಳಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಅರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಇನ್ನಷ್ಟು ಸತ್ಯ ಹೊರಬಿದ್ದಿದೆ.
ಇದನ್ನೂ ಓದಿ: ಕರೊನಾ ಲಸಿಕೆ ನೀಡಲು ಸಿದ್ಧತೆ ; ಮೊದಲ ಹಂತದಲ್ಲಿ 19271 ಜನರಿಗೆ ಲಸಿಕೆ 134 ಪಿಎಚ್ಸಿಗಳಲ್ಲಿ ಶೇಖರಣೆ
ಈ ಐವರು ಆರೋಪಿಗಳು ಒಬ್ಬ ಬಿಜಿನೆಸ್ಮ್ಯಾನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನಗರಕ್ಕೆ ಬಂದಿದ್ದು, ಅಲ್ಲಿ ಹೋಟೆಲ್ ಬುಕ್ ಮಾಡಿದ್ದರು. ಬಿಜಿನೆಸ್ ಮ್ಯಾನ್ ಬಳಿ 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದು, ಆತ ಕೊಡದಿದ್ದರೆ ಕೊಲೆ ಮಾಡುವವರಿದ್ದರು ಎನ್ನುವುದು ತಿಳಿದುಬಂದಿದೆ. ನರೇಶ್ ಹೆಸರಿನ ಆರೋಪಿ ಈಗಾಗಲೇ ಒಂದು ಕೊಲೆಯ ಆರೋಪವನ್ನು ಹೊತ್ತಿದ್ದು, ಪೆರೋಲ್ ಮೇಲೆ ಜೈಲಿನಿಂದ ಹೊರಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್)
21 ವರ್ಷ ರೇಪ್ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ