ಈಗಾಗಲೇ ತ್ರಿವಿಕ್ರಮ ಸಿನಿಮಾ ಮೂಲಕ ಸುದ್ದಿಯಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಿರಿ ಮಗ ವಿಕ್ರಮ್ ರವಿಚಂದ್ರನ್, ಇದೀಗ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದು, ರಗಡ್ ಅವತಾರದಲ್ಲಿ ಎದುರಾಗಲಿದ್ದಾರೆ.
ಇದನ್ನೂ ಓದಿ: ಮೇಕಪ್ಮ್ಯಾನ್ಗೆ ಭಾವುಕ ವಿದಾಯ ಹೇಳಿದ ರಮೇಶ್ ಅರವಿಂದ್
ಕನ್ನಡ ಮತ್ತು ಮಲಯಾಳಂ ಸಿನಿಮಾ ಇಂಡಸ್ಟ್ರಿಯ ನಂಟಿರುವ ನಿರ್ದೇಶಕ ಮನು ನಾಗ್ ಈ ಸಿನಿಮಾ ನಿರ್ದೇಶಿಸಲಿದ್ದು, ಕನ್ನಡದಲ್ಲಿ ಇದು ಅವರ ಮೊದಲ ಪೂರ್ಣಪ್ರಮಾಣದ ಸಿನಿಮಾ ಆಗಿದೆ. ಈ ಹಿಂದೆ ವೈಟ್ ಅನ್ನೋ ಸಾಮಾಜಿಕ ಕಳಕಳಿಯ ಕಿರುಚಿತ್ರ ನಿರ್ದೇಶಿಸಿದ್ದ ಮನು, ಆ ಕಿರುಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಂದ ನಿರೂಪಣೆ ಮಾಡಿಸಿದ್ದರು.
ಇದೀಗ ಮೊದಲ ಬಾರಿ ಮಾಸ್ ಮತ್ತು ತಾಯಿ ಸೆಂಟಿಮೆಂಟ್ ಇರುವ ಕಥೆ ಆಯ್ದುಕೊಂಡಿದ್ದು, ಈಗಾಗಲೇ ಕಥೆ ಬರೆದು ಮುಗಿಸಿದ್ದಾರೆ. ಸದ್ಯದ ಅಪ್ಡೇಟ್ ಮಾಹಿತಿ ಪ್ರಕಾರ ಚಿತ್ರೀಕರಣ ಪೂರ್ವ ಕೆಲಸಗಳಿಗೆ ಚಾಲನೆ ನೀಡಿರುವ ನಿರ್ದೇಶಕ ಮನು, ನಾಯಕನನ್ನು ಅಂತಿಮ ಮಾಡಿದ್ದಾರೆ.
ಇದನ್ನೂ ಓದಿ: ಕ್ಯಾಂಪಸ್ನಲ್ಲಿ ಕ್ರಾಂತಿ ಮಾಡೋಕೆ ಹೊರಟಿದ್ದಾರೆ ಸಂತೋಷ್!
ಚೆನ್ನೈ ಮೂಲದ ನಿರ್ಮಾಪಕರೊಬ್ಬರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಇನ್ನುಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಸಿನಿಮಾಕ್ಕಾಗಿ ವಿಕ್ರಮ್ ದೇಹವನ್ನು ಕಟ್ಟುಮಸ್ತಾಗಿ ಬಿಲ್ಡ್ ಮಾಡಿಕೊಳ್ಳಲಿರುವುದರಿಂದ ಮುಂದಿನ ನಾಲ್ಕು ತಿಂಗಳ ಬಳಿಕವೇ ಸಿನಿಮಾ ಸೆಟ್ಟೇರಲಿದೆ.
‘ಮಿಸ್ ಇಂಡಿಯಾ’ ಚಿತ್ರದ ಓಟಿಟಿ ರೈಟ್ಸ್ ಎಷ್ಟಕ್ಕೆ ಮಾರಾಟವಾಯ್ತು ಹೇಳಿ?