ವಿಜಯಪುರ: ಕೃಷಿ ಕಾರ್ಯಕ್ಕೆ ಕಾರ್ಮಿಕರ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಪರಿಣಾಮ ಒಕ್ಕಣೆ ಕಣದ ಕೆಲಸಕ್ಕೂ ಯಂತ್ರಗಳಿಗೆ ಭಾರಿ ಡಿಮಾಂಡ್! ಆದರೆ ಸ್ವಲ್ಪ ಯಾಮಾರಿದ್ರೆ ಮನುಷ್ಯರೇ ಬಲಿಯಾಗ್ತಾರೆ.
ಒಕ್ಕಣೆ ಕಣದಲ್ಲಿನ ಕೆಲಸ ಮಾಡುವ ಅದೆಷ್ಟೋ ಕಾರ್ಮಿಕರು ನಿಯಂತ್ರಣ ತಪ್ಪಿ ಮಷಿನ್ಗೆ ಸಿಲುಕಿ ಪ್ರಾಣಬಿಟ್ಟ ಒಂದಿಲ್ಲೊಂದು ಘಟನೆಗಳು ಪ್ರತಿ ಭಾರಿ ರಾಜ್ಯದಲ್ಲಿ ಸಂಭವಿಸುತ್ತಲೇ ಇದೆ. ಇಂತಹದ್ದೇ ಘಟನೆ ಇಂಡಿ ತಾಲೂಕಿನ ಚಿಕ್ಕಬೇವನೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಇದನ್ನೂ ಓದಿರಿ ಜೆಡಿಎಸ್ ತೊರೆಯಲು ಸಾಕಷ್ಟು ಆಫರ್ ಬಂದಿತ್ತು… ಎನ್ನುತ್ತಲೇ ದೇವೇಗೌಡರಿಗೆ ಮಾಜಿ ಶಾಸಕ ಕೊಟ್ಟ ಎಚ್ಚರಿಕೆ ಏನು?
![](https://cdn.vvimgs.com/wp-content/uploads/2024/06/ABHUDAYA-WEB-01.jpg)
ಚಿಕ್ಕಬೇವನೂರ ಗ್ರಾಮದಲ್ಲಿ ಒಣಗಿದ ತೊಗರಿ ಕಾಯನ್ನು ಸಿಪ್ಪೆ ಸಮೇತ ಹಾಕಿ ಮಷಿನ್ ಮೂಲಕ ಕಾಳು ಮಾಡಲಾಗುತ್ತಿತ್ತು. ತೊಗರಿ ರಾಶಿ ಮಾಡುವ ವೇಳೆ ಆಯತಪ್ಪಿ ಬಿದ್ದ ಸುಜಾತಾ ಅಮಸಿದ್ಧ ಬಗಲಿ ಎಂಬಾಕೆ, ಮಷಿನ್ಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಮಹಿಳೆಯು ಚಿಕ್ಕಬೇವನೂರ ಗ್ರಾಮದ ನಿವಾಸಿ. ಸುಜಾತಾ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಡ್ಯೂಟಿ ಮುಗಿಸಿ ರಾತ್ರಿ ಬಂದವ ಮಗಳ ಬಾಯಿಗೆ ಬಟ್ಟೆ ತುರುಕುತ್ತಿದ್ದ.. ಕೈಕಾಲು ಕಟ್ಟಿ ಹೊಡೆಯುತ್ತಿದ್ದ…
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ