More

    ರಾಮಮಂದಿರ ಭೂಮಿಪೂಜೆಗೆ ಮುಹೂರ್ತ ಇಟ್ಟ ಬೆಳಗಾವಿಯ ಪಂಡಿತ್​ ವಿಜಯೇಂದ್ರ ಶರ್ಮ ಅವರಿಗೆ ಬೆದರಿಕೆ

    ಬೆಂಗಳೂರು: ಆಗಸ್ಟ್​ 5ರಂದು ನಡೆಯಲಿರುವ ರಾಮಮಂದಿರ ಭೂಮಿ ಪೂಜೆಗೆ ಮುಹೂರ್ತವನ್ನು ಇಟ್ಟ ಬೆಳಗಾವಿಯ ಪಂಡಿತ್​ ಎನ್​.ಆರ್​.ವಿಜಯೇಂದ್ರ ಶರ್ಮ ಅವರಿಗೆ ಆಪತ್ತು ಎದುರಾಗಿದೆ.

    ವಿಜಯೇಂದ್ರ ಶರ್ಮ ಅವರಿಗೆ ಬೆದರಿಕೆ ಕರೆ ಬಂದಿದ್ದು, ಸದ್ಯ ಅವರ ಮನೆಗೆ ಈಗ ಭದ್ರತೆಗಾಗಿ ಓರ್ವ ಪೊಲೀಸ್​ ಅಧಿಕಾರಿಯನ್ನು ನಿಯೋಜಿಸಲಾಗಿದೆ.

    ಪಂಡಿತ್ ಶರ್ಮಾ ಅವರು ಬೆಳಗಾವಿಯ ನಿವಾಸಿ. ರಾಮ ಮಂದಿರ ಭೂಮಿ ಪೂಜೆಗೆ ಬೇರೆ ಮುಹೂರ್ತವನ್ನು ಇಡಿ. ಇಲ್ಲದಿದ್ದರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಹಲವು ಫೋನ್​ ಕರೆಗಳು ಬರುತ್ತಿವೆ ಎಂದು ಶರ್ಮಾ ತಿಳಿಸಿದ್ದಾರೆ.

    ನೀವ್ಯಾಕೆ ಆಗಸ್ಟ್​ 5ರಂದೇ ಭೂಮಿಪೂಜೆಗೆ ಮುಹೂರ್ತವನ್ನು ಇಟ್ಟಿದ್ದೀರಿ. ಈ ಸಮಾರಂಭದಲ್ಲಿ ನೀವ್ಯಾಕೆ ಪಾಲ್ಗೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಯಾರೂ ತಮ್ಮ ಹೆಸರನ್ನು ಹೇಳುತ್ತಿಲ್ಲ. ಬೈಯುತ್ತಾರೆ, ಕಠಿಣವಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಹೋದರನಿಗೆ ಶ್ರೀರಕ್ಷೆ ಬಂಧಿಸುವ ಕನಸು ಕಂಡ ಬಾಲಕಿಯನ್ನು ರಕ್ಷಿಸಲಿಲ್ಲ ವೈದ್ಯರು

    ಬೆಳಗಾವಿಯ ತಿಲಕ್​​ವಾದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಕೊಲೆ ಬೆದರಿಕೆಯಂತಹ ಫೋನ್​ ಕರೆಗಳು ಬಂದಿಲ್ಲ ಎಂದೂ ತಿಳಿಸಿದ್ದಾರೆ.

    ಪಂಡಿತ್​ ಶರ್ಮಾ ಅವರು ಮೊದಲು ಏಪ್ರಿಲ್​​ನಲ್ಲಿ ಅಕ್ಷಯ ತೃತೀಯಕ್ಕೆ ಸರಿಯಾಗಿ ಮುಹೂರ್ತ ಇಟ್ಟಿದ್ದರು. ಆದರೆ ನಂತರ ಲಾಕ್​ಡೌನ್​ ಹೇರಲ್ಪಟ್ಟಿದ್ದರಿಂದ ಮುಹೂರ್ತವನ್ನು ಬದಲಾವಣೆ ಮಾಡಿ, ಆಗಸ್ಟ್​ 5ಕ್ಕೆ ಇಟ್ಟಿದ್ದಾರೆ. (ಏಜೆನ್ಸೀಸ್​)

    ಸುಶಾಂತ್​ ಸಿಂಗ್​ ಕೇಸ್​ ಸಿಬಿಐಗೆ: ಬಿಹಾರ ಸಿಎಂ ನಿತೀಶ್​ ಕುಮಾರ್ ಕಡೆಯಿಂದ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts