ಮುಂಬೈ: ಯುದ್ಧ ಸನ್ನಿವೇಶಗಳನ್ನೇ ಆಧರಿಸಿ ಬಾಲಿವುಡ್ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಇದೀಗ ಬಾಲಾಕೋಟ್ ಏರ್ಸ್ಟ್ರೈಕ್ ಕುರಿತ ಸಿನಿಮಾ ಸರದಿ. ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಬಾಲಾಕೋಟ್ನಲ್ಲಿ ಏರ್ಸ್ಟ್ರೈಕ್ ನಡೆಸಿದ ಭಾರತೀಯ ವಾಯುಸೇನೆ, ಉಗ್ರರ ಹುಟ್ಟಡಗಿಸಿತ್ತು. ಇದೀಗ ಆ ಕಥೆಯೇ ಬಾಲಿವುಡ್ನಲ್ಲಿ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: ಅತ್ಯಾಚಾರ ಆರೋಪದಡಿ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲು
ಸದ್ಯದ ಮಾಹಿತಿ ಪ್ರಕಾರ ಬಾಲಿವುಡ್ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ದಕ್ಷಿಣದ ಸ್ಟಾರ್ ನಟನಿಗೆ ತಂಡ ಮಣೆ ಹಾಕಿದೆ. ಈಗಾಗಲೇ ಒಂದು ಹಂತದ ಮಾತುಕತೆಯೂ ಮುಗಿದಿದ್ದು, ಇನ್ನೇನು ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳಲಿದೆ. ಹಾಗಾದರೆ ಯಾರು ಆ ನಟ? ಅಭಿಷೇಕ್ ಕಪೂರ್ ನಿರ್ದೇಶನದಲ್ಲಿ ಮೂಡಿಬರಲಿರುವ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಘೋಷಣೆ ಆಗಲಿದೆ.
ಇದನ್ನೂ ಓದಿ: VIDEO| ಯಶ್ -ರಾಧಿಕಾ ಪುತ್ರಿ ಐರಾ ಇದೀಗ ಟೀಚರ್; ತಮ್ಮನಿಗೆ ಹೇಗೆ ಪಾಠ ಮಾಡ್ತಾಳೆ ನೋಡಿ
ಈಗಾಗಲೇ ಕರಣ್ ಜೋಹರ್ ನಿರ್ಮಾಣದ ಫೈಟರ್ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ. ತೆಲುಗಿನ ಜತೆಗೆ ಹಿಂದಿಯಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದ್ದು, ಪುರಿ ಜಗನ್ನಾಥ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದೀಗ ಆ ಸಿನಿಮಾದ ಜತೆಗೆ ಈ ಸಿನಿಮಾ ಕುರಿತ ಸುದ್ದಿಯೂ ಸದ್ದು ಮಾಡುತ್ತಿದ್ದು, ವಿಂಗ್ಕಮಾಂಡರ್ ಅಭಿನಂದನ್ ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್)