ರಾಯಪುರ : ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ನಲ್ಲಿ ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತದ ತಂಡ ಜಯ ಸಾಧಿಸಿತು. ಈ ಪಂದ್ಯದಲ್ಲಿ ಉತ್ತಮ ಆಟ ಆಡಿದ ಯುವರಾಜ್ ಸಿಂಗ್ರಿಗೆ ಹೋಟೆಲ್ಗೆ ವಾಪಸಾದಾಗ ವಿಶೇಷ ಸ್ವಾಗತ ಲಭಿಸಿದೆ.
ನಿನ್ನೆ ರಾಯಪುರದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಲ್ಕು ಸಿಕ್ಸರ್ಗಳು ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದು ಭಾರತದ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದರು. ಭಾರತ ಗೆದ್ದ ಮೇಲೆ ತಾವು ತಂಗಿದ್ದ ಹೊಟೆಲ್ಗೆ ಯುವಿ ವಾಪಸ್ ಹೋದಾಗ, ಅಲ್ಲಿನ ಸಿಬ್ಬಂದಿ ಅವರಿಗೆ ಗಾರ್ಡ್ ಆಫ್ ಆನರ್ ರೀತಿಯಲ್ಲಿ ಬಾಹುಬಲಿ ಚಿತ್ರದ ಹಾಡು ಹಾಕಿ ಸ್ವಾಗತ ಕೋರಿದ್ದಾರೆ.
View this post on Instagram
ಉದ್ದ ಹ್ಯಾಂಡಲ್ ಪ್ಯಾನ್ಗಳನ್ನು ಕತ್ತಿಗಳಂತೆ ಮೇಲೆತ್ತಿ ನೀಡಲಾದ ಸ್ವಾಗತಕ್ಕೆ ಯುವರಾಜ್ ಅಷ್ಟೇ ಸ್ಫೂರ್ತಿಯಿಂದ ಹೆಜ್ಜೆ ಹಾಕಿ ಪ್ರತಿಕ್ರಿಯಿಸಿದ್ದಾರೆ. ನಂತರ ಹಿಂದಿನಿಂದ ತೆಗೆಯಲಾಗಿರುವ ವಿಡಿಯೋ ತುಣುಕೊಂದನ್ನು ಯುವರಾಜ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಒಂದು ಕಾಲಿಗೆ ಕ್ರೇಪ್ ಬ್ಯಾಂಡೇಜ್ ಹಾಕಿಕೊಂಡು ಪ್ಯಾಂಟನ್ನು ಮೇಲಕ್ಕೇರಿಸಿರುವ ಯುವಿ, ಹಾಡಿಗೆ ಹೆಜ್ಜೆ ಹಾಕುತ್ತಿರುವ ತಮ್ಮ ವಿಡಿಯೋಗೆ ಬ್ರೋಕನ್ ಬಾಹುಬಲಿ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ! (ಏಜೆನ್ಸೀಸ್)
ಆಟದ ನಡುವೆ ಪೆಟ್ಟಿಗೆ ಒಳಕ್ಕೆ ಜಿಗಿದ ಮುಗ್ಧ ಮಕ್ಕಳು… ಅಲ್ಲಿ ಕಾಯುತ್ತಿದ್ದ ಜವರಾಯ !
ಕಲ್ಯಾಣ ಕರ್ನಾಟಕ : ಬಿಜೆಪಿ ವಿರುದ್ಧ ಟ್ವಿಟರ್ ವಾರ್ಗೆ ಮುಂದಾದ ಕಾಂಗ್ರೆಸ್