ಮುಂಬೈ: ಕಳೆದ ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಎದ್ದ ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಆಂಧ್ರ ಪ್ರದೇಶ ಮತ್ತು ಒಡಿಶಾದೊಂದಿಗೆ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿಯೂ ಭಾರೀ ಮಳೆ ಉಂಟಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿವಿಧ ರೀತಿಯಲ್ಲಿ ಅಪಾಯ ಒದಗಿಬಂದಿದೆ.
#WATCH | IAF Mi-17 helicopters have been inducted for flood relief efforts in Maharashtra since Sept 28. Three people were rescued from the rooftop of a makeshift hut in Village Poharegaon, Latur today: IAF pic.twitter.com/nvVEAtshOW
— ANI (@ANI) September 29, 2021
ಮಹಾರಾಷ್ಟ್ರದ ಪ್ರವಾಹಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳಿಗಾಗಿ ಮಂಗಳವಾರದಿಂದ ಭಾರತೀಯ ವಾಯುಪಡೆಯ (ಐಎಎಫ್) ಎಂಐ-17 ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ. ರಾಜ್ಯದ ಲಾತೂರ್ ಜಿಲ್ಲೆಯ ಪೋಹರೆಗಾವ್ ಗ್ರಾಮದಲ್ಲಿ ಗುಡಿಸಲೊಂದರ ತಾರಸಿಯಿಂದ ಮೂರು ಜನರನ್ನು ರಕ್ಷಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. (ಏಜೆನ್ಸೀಸ್)