ಬೆಂಗಳೂರು: ಲೌಕಿಕ ಯಾತ್ರೆಗೆ ವಿದಾಯ ಹೇಳಿದ ಕನ್ನಡ ಚಿತ್ರರಂಗದ ‘ಯುವರತ್ನ’ ಪುನೀತ್ ರಾಜ್ಕುಮಾರ್ರ ಅಂತಿಮ ದರ್ಶನ ಪಡೆಯಲು ತೆಲುಗು ಚಿತ್ರರಂಗದ ಹಲವು ಪ್ರಮುಖ ನಟರು ಇಂದು ನಗರಕ್ಕೆ ಆಗಮಿಸಿದ್ದರು. ಪಾರ್ಥಿವ ಶರೀರಕ್ಕೆ ಹೂಗುಚ್ಛವಿರಿಸಿದ ಮೇರುನಟ ಚಿರಂಜೀವಿ, ಶಿವರಾಜ್ಕುಮಾರ್ರನ್ನು ನೋಡಿದ ಕೂಡಲೇ ಬಿಗಿದಪ್ಪಿ ಕಣ್ಣೀರಿಟ್ಟರು.
ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಚಿರಂಜೀವಿ, ನಾನು ಬೆಂಗಳೂರಿಗೆ ಯಾವಾಗ ಬಂದ್ರೂ ರಾಜ್ಕುಮಾರ್ ಅವರ ಮನೆಗೆ ಹೋಗ್ತಿದ್ದೆ. ಕೆಲ ದಿನಗಳ ಹಿಂದೆ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಪುನೀತ್ ರಾಜ್ಕುಮಾರ್ ಅವರಿಗೆ ಸ್ವರ್ಗ ಲೋಕದಲ್ಲಿ ಸ್ಥಾನ ಸಿಗಬೇಕು, ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರು.
“ನಾವೊಂದು ಬಯಸಿದರೆ ವಿಧಿ ಮತ್ತೊಂದು ಬಗೆಯುತ್ತದೆ. ದೇವರು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ನೀಡಲಿ ಎಂದು ಕೇಳಿಕೊಳ್ತೇನೆ. ಯಾವುದೇ ಕಾರ್ಯಕ್ರಮಕ್ಕೆ ಮೂವರೂ ನಮ್ಮ ಮನೆಗೆ ಬಂದು ಆಹ್ವಾನಿಸುತ್ತಿದ್ದರು. ನಮ್ಮಲ್ಲಿ ಕಾರ್ಯಕ್ರಮವಿದ್ದರೂ ನಾವು ಅವರನ್ನು ಕರೆಯುತ್ತಿದ್ದೆವು. ಪುನೀತ್ ಮೃತಪಟ್ಟಿರುವುದು ಭಾರೀ ಅನ್ಯಾಯ. ತುಂಬಾ ನೋವಾಗುತ್ತಿದೆ” ಎಂದರು.
‘ನಾಟಿಕೋಳಿ ಸಾಂಬಾರ್, ಮಟನ್ ಫ್ರೈ ಅಂದ್ರೆ ಪಂಚಪ್ರಾಣ’; ಗಾಜನೂರಿನಲ್ಲಿ ಅಪ್ಪು ನೆನಪು