ಬೆಂಗಳೂರು: ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುರಿದುಕೊಂಡು ನೋವಿನಲ್ಲಿದ್ದು ನಟಿ ವೈಷ್ಣವಿ ಗೌಡ, ಕ್ರಮೇಣ ಆ ನೋವಿನಿಂದ ಹೊರಬಂದಿದ್ದಾರೆ. ಮೊದಲ ಹೆಜ್ಜೆಯಾಗಿ ಅವರು ತಮ್ಮ ಕೈ ಮೇಲೆ ರೈಸಿಂಗ್ ವುಮನ್ ಚಿಹ್ನೆಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಡಿಯೋ ಕೇಳಿ ನನ್ನ ಮಗಳು ಶಾಕ್ನಲ್ಲಿದ್ದು, ರೂಂಮಿಂದ ಹೊರ ಬಂದಿಲ್ಲ: ವೈಷ್ಣವಿ ತಂದೆಯ ನೋವಿನ ಮಾತು
ವೈಷ್ಣವಿ ಗೌಡ ಇತ್ತೀಚೆಗಷ್ಟೇ ‘ವಿರಾಜ್’ ಸಿನಿಮಾದ ನಟ ವಿದ್ಯಾಭರಣ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ನಂತರ ವಿದ್ಯಾಭರಣ್ ಸರಿಯಿಲ್ಲ ಎಂದು ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆದ ಬೆನ್ನಲ್ಲೇ ವೈಷ್ಣವಿ ಗೌಡ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು.
‘ನಾವಿದನ್ನು (ನಿಶ್ಚಿತಾರ್ಥ) ಮುರಿದುಕೊಂಡಿದ್ದೇವೆ. ಈ ವಿಚಾರವನ್ನು ಮತ್ತಷ್ಟು ಎಳೆಯಬೇಡಿ ಎಂದು ನಾನು ಮಾಧ್ಯಮ ಮತ್ತು ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುತ್ತೇನೆ. ಇಲ್ಲಿಗೆ ಇದನ್ನು ಬಿಟ್ಟುಬಿಡಿ. ಯಾರು ನನಗೆ ಶುಭಕೋರಿದರೋ ಅವರೆಲ್ಲರಿಗೂ ನನ್ನ ಧನ್ಯವಾದಗಳು’ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದರು.
ಆದರೂ ನೋವಿನಲ್ಲಿದ್ದ ವೈಷ್ಣವಿ, ಆ ನೋವಿನಿಂದ ಹೊರಬಂದಿದ್ದಾರೆ. ಮೊದಲ ಹಂತವಾಗಿ ಅವರು ಕಲಾಮುದ್ರ ಟ್ಯಾಟೂ ಸ್ಟುಡಿಯೋಗೆ ಹೋಗಿ, ತಮ್ಮ ಜೀವನದಲ್ಲೇ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅವರು ಹಾಕಿಸಿಕೊಂಡಿರುವು ರೈಸಿಂಗ್ ವುಮನ್ ಚಿಹ್ನೆ ಇರುವ ಟ್ಯಾಟೂ.
ಇದನ್ನೂ ಓದಿ: ಆಡಿಯೋ ವೈರಲ್ ಆದ ಬೆನ್ನಲ್ಲೇ ಆ ಇಬ್ಬರು ಹುಡುಗಿಯರಿಗೆ ಖಡಕ್ ಎಚ್ಚರಿಕೆ ಕೊಟ್ಟ ನಟ ವಿದ್ಯಾಭರಣ್!
ಈ ಕುರಿತು ಬರೆದುಕೊಂಡಿರುವ ಅವರು, ‘ರೈಸಿಂಗ್ ವುಮನ್ ಚಿಹ್ನೆಯು ದೈವಿಕ ಸ್ತ್ರೀ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಚಂದ್ರ, ಸೂರ್ಯನೊಂದಿಗೆ ವಿಲೀನಗೊಂಡು ಆತ್ಮದೊಂದಿಗೆ ದೈವಿಕ ಒಕ್ಕೂಟದ ರಸವಿದ್ಯೆಯನ್ನು ಸೃಷ್ಟಿಸುತ್ತದ!’ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೆಲ್ಲದರಿಂದ ಹೊರಬರುವುದಕ್ಕೆ ಒಂದೇ ಉಪಾಯ, ಮತ್ತಷ್ಟು ಏರುವುದು ಮತ್ತು ಮುಂದೆ ನಡೆಯುವುದು ಎಂದು ಬರೆದುಕೊಂಡಿದ್ದಾರೆ.
ಹುಡುಗಿಯರಿಬ್ಬರ ಆಡಿಯೋ ವೈರಲ್ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…