More

    32 ವರ್ಷಗಳ ಬಳಿಕ ತೆರೆ ಹಂಚಿಕೊಳ್ಳಲಿದೆ ‘ರಣಧೀರ’ ಜೋಡಿ! ಯಾವ ಪಾತ್ರಗಳಲ್ಲಿ ಮಿಂಚಲಿದ್ದಾರೆ?

    ಗಣಿದಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿಯ ಮೊದಲ ಸಿನಿಮಾದ ಮುಹೂರ್ತ ಮಾರ್ಚ್ 4 ರಂದು ನೆಡಿದಿದ್ದು, ಹೀರೋ ಅವರ ಒಂದು ಸಣ್ಣ ಟೀಸರ್ ಕೂಡಾ ಅದೇ ದಿನ ಬಿಡುಗಡೆಯಾಗಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ, ನಟಿ ಜೆನಿಲಿಯಾ, ನಟಿ ಶ್ರೀಲೀಲಾ, ನಟ ವಿ.ರವಿಚಂದ್ರನ್ ಅವರು ಸೇರಿ ಕನ್ನಡ ಸಿನಿರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಕನ್ನಡ ಹಾಗೂ ತೆಲುಗು, ಎರಡೂ ಭಾಷೆಗಳಲ್ಲಿ ನಟ ಕಿರೀಟ ಅವರ ಮೊದಲ ಸಿನಿಮಾ ರಿಲೀಸ್ ಆಗಲಿದೆ. 
    ಸದ್ಯ, ಈ ಚಿತ್ರಕ್ಕೆ ದೊಡ್ಡ ತಾರಾಬಳಗವೆ ಇದ್ದು, ಈ ಸಿನಿಮಾದಲ್ಲಿ ಎಲ್ಲರೂ ಗಮನಿಸುತ್ತಿರುವ ಒಂದು ಹೈಲೈಟ್ ಅಂದೆರೆ ಸ್ಯಾಂಡಲ್​ವುಡ್​ನ ಸೂಪರ್ ಹಿಟ್ ಸಿನಿಮಾ ಆದ ರಣಧೀರಚಿತ್ರದ ನಾಯಕ-ನಾಯಕಿ, ಕಿರೀಟಿ ಅವರ ಈ ಟೈಟಲ್ ಇಲ್ಲದ ಚಿತ್ರದ ಮೂಲಕ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ಹೌದು, ನಟ ವಿ.ರವಿಚಂದ್ರನ್ ಹಾಗೂ ನಟಿ ಖುಷ್ಬೂ ಅವರು ಕಿರೀಟಿ ಅವರ ಮೊದಲ ಚಿತ್ರದ ಮೂಲಕ ಮತ್ತೆ ಒಟ್ಟಿಗೆ ಅಭಿನಯಿಸಲಿದ್ದಾರೆ. ಅಂದಹಾಗೆ, ‘ರಣಧೀರ‘, ‘ಅಂಜದ ಗಂಡು‘, ‘ಯುಗ ಪುರುಷಎಂಬ ಹಲವು ಹಿಟ್ ಚಿತ್ರಗಳಲ್ಲಿ ನಟ ವಿ.ರವಿಚಂದ್ರನ್ ಹಾಗೂ ನಟಿ ಖುಷ್ಬೂ ಅಭಿನಯಿಸಿ ಕನ್ನಡ ಸಿನಿಪ್ರೇಕ್ಷಕರ ಮನಸ್ಸು ಕದ್ದ ಈ ಜೋಡಿ ಆಗ ಭಾರಿ ಜನಪ್ರಿಯತೆಗಳಿಸಿತ್ತು.
    1989 ರಲ್ಲಿ ರಿಲೀಸ್ ಆದ ಯುಗ ಪುರುಷಸಿನಿಮಾದ ನಂತರ ಈ ಹಿಟ್ ಜೋಡಿ ಮತ್ತೆ ನಾಯಕನಾಯಕಿಯಾಗಿ ತೆರೆಹಂಚಿಕೊಂಡಿಲ್ಲ. ಇದೀಗ, 32 ವರ್ಷಗಳ ಬಳಿಕ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಚಿತ್ರದಲ್ಲಿ ರವಿಚಂದ್ರನ್, ಖುಷ್ಬೂ ಪತಿಪತ್ನಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್, ”ಈ ಸಿನಿಮಾಗೆ ಒಳ್ಳೆಯ ಪ್ಯಾಕೇಜ್ ಸಿಕ್ಕಿದೆ. ಒಳ್ಳೆಯ ನಿರ್ಮಾಪಕರು, ‘ಬಾಹುಬಲಿಕ್ಯಾಮೆರಾಮನ್ ಸೆಂಥಿಲ್, ದೇವಿಶ್ರೀ ಪ್ರಸಾದ್ ಸಂಗೀತ, ಶ್ರೀಲೀಲಾ ಅಂಥಹಾ ಸುಂದರ ನಟಿ, ಜೆನಿಲಿಯಾ ಇದ್ದಾರೆ. ನಾನು ಇದ್ದೀನಿ. ಇದಕ್ಕಿಂತಲೂ ಒಬ್ಬ ನಟನಿಗೆ ಲಾಂಚ್ ಆಗಲು ಬೇರೆ ಪ್ಯಾಕೇಜ್ ಬೇಕೆ?ಎಂದು ಹೇಳಿದರು.
    ಇನ್ನು, ಈ ಸಿನಿಮಾದಲ್ಲಿ ತಮ್ಮೊಂದಿಗೆ ಖುಷ್ಬೂ ಅವರು ಸಹ ನಟಿಸುತ್ತಿದ್ದಾರೆ ಎಂಬ ವಿಷಯವನ್ನು ವಿ.ರವಿಚಂದ್ರನ್ ಅವರು ಬಚ್ಚಿಟ್ಟಿದ್ದರು. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ಖುಷ್ಬೂ ಅವರು, 2005 ರಲ್ಲಿ ಬಿಡುಗಡೆ ಆದ ಮ್ಯಾಜಿಕ್ ಅಜ್ಜಿ‘ ಸಿನಿಮಾನೇ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ. ಬಳಿಕ, 2010 ರಲ್ಲಿ ಬಿಡುಗಡೆ ಆದ ಜನನಿಚಿತ್ರದಲ್ಲಿ ಕೇವಲ ಅತಿಥಿ ಪಾತ್ರದಲ್ಲಷ್ಟೆ ತೆರೆ ಮೇಲೆ ಮಿಂಚಿದರು. ಇಲ್ಲಿ ಮೊತ್ತೊಂದು ಹೈಲೈಟ್ ಅಂದರೆ ಅದು ನಟಿ ಜೆನೀಲಿಯಾ ಕೂಡಾ ಈ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ 14 ವರ್ಷಗಳ ನಂತರ ಮರಳುತ್ತಿದ್ದಾರೆ. ಕಿರೀಟ ಅವರ ಟೈಟಲ್ ಇಲ್ಲದ ಈ ಮೊದಲ ಸಿನಿಮಾದಲ್ಲಿ ಇನ್ನೂ ಹಲವು ಸಹನಟರು ಬೆಳ್ಳೆ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

    ಗಾಲಿ ಪುತ್ರ ಕಿರೀಟಿ ಸಕಲಕಲಾವಲ್ಲಭ: ಮೊದಲ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಗಣ್ಯರು

    ಭಾರತದ ಸಿನಿಮಾದಲ್ಲಿ ನಟಿಸುವ ಕನಸು ಶೇನ್ ವಾರ್ನ್ ಗಿತ್ತಾ?

    ಸಿನಿರಂಗಕ್ಕೆ ಧುಮುಕುವ ಮುನ್ನ ಅಪ್ಪು ನೆನೆದು ಭಾವುಕರಾದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ!

    ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಮೊದಲ ಸಿನಿಮಾಗೆ ಶ್ರೀಲೀಲಾ ನಾಯಕಿ? ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಜಮೌಳಿ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts